ಸ್ನೇಹದ ಕಡಲಲ್ಲಿ ಭಾವ ನಾವೆಯ ಪಯಣ: ರಾಮ್ಪ್ರಕಾಶ್ ರೈ ಸರಣಿ
ಆತ ಗುಹೆಯೊಳಗೆ ಬೀಳುತ್ತಿರಬೇಕಾದರೆ, ಬಾಲ್ಯದಲ್ಲಿ ನದಿಯ ನೀರಿಗೆ ಹಾರಿ, ಆನಂತರ ಈಜಲು ಅಸಾಧ್ಯವೆನಿಸಿ ಕಡೆಗೆ ಕುಟ್ಟನ್ ಬಂದು ಮೇಲೆತ್ತಿ ಕರೆದುಕೊಂಡು ಹೋಗುವ ದೃಶ್ಯವ ಹೊಲಿಯಲಾಗಿದೆ. ಹೀಗೆ ದೃಶ್ಯವೊಂದರ ಹಿಂದೆ ಅವಿತಿರುವ ಸನ್ನಿವೇಶ, ಭಾವವ ಬಣ್ಣಿಸುವ ಈ ಪ್ರಯೋಗ ಚಿತ್ರದ ಮೆಚ್ಚಿನ ಅಂಶಗಳಲ್ಲೊಂದು. ನೀರಿನ ಚಲನೆಗೆ ಅಡ್ಡಲಾಗಿ ಮಲಗುವುದು, ತನ್ನ ವಾಹನದ ತುಂಬಾ ಚೆಲ್ಲಿದ ಪದಾರ್ಥಗಳು, ಬಾಗಿಲಿನ ಅಂಚಿನಲ್ಲಿ ಅಂಟಿದ ಉಗುಳು ಕಲೆಯನ್ನು ಆಸ್ಥೆಯಿಂದ ತೆಗೆದು ಸ್ವಚ್ಛಗೊಳಿಸುವ ರಥದ ಕಡೆಗಿನ ಚಾಲಕನ ಪ್ರೇಮ ಹೀಗೆ ಬದುಕಿನ ಮೌಲ್ಯಗಳ ಬಗ್ಗೆ ಕಥೆಯು ಮೌನವಾಗಿಯೇ ಮಾತನಾಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್ ‘ಸಿನಿಮಾದ ವಿಶ್ಲೇಷಣೆ