Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಒಂದು “ಆಕ್ಸಿಡೆಂಟ್” ಕತೆ : ರಾಮ್ ಪ್ರಕಾಶ್ ರೈ ಕೆ. ಸರಣಿ

ಮೆದುಳು ಮತ್ತು ದೇಹದ ನಡುವಿನ ಸಂಪರ್ಕ ಕಡಿಮೆಯಾಗುತ್ತಿದ್ದಂತೆಯೇ, ವಾಹನದ ಹೆಜ್ಜೆ ಗಡಿ ರೇಖೆಗಳ ಎಲ್ಲೆ ಮೀರಿ ಸಾಗುತ್ತದೆ. ಕೊನೆಗೆ ಪಾದಚಾರಿ ಮಾರ್ಗದತ್ತ ಯಮನ ಅಮೂರ್ತರೂಪವಾಗಿ ನುಗ್ಗುತ್ತದೆ. ಅಲ್ಲಿ ಮಲಗಿದ್ದ, ಬೆವರಿನ ಮಳೆಯಲ್ಲೇ ಬದುಕು ಕಟ್ಟಿಕೊಳ್ಳುವ, ಅಂಗಿಗೆ ಕಿಸೆ ಸದಾ ಅಂಟಿಕೊಂಡೇ ಇರುವ ಜೀವಗಳ ಉಸಿರು ಅರೆಕ್ಷಣದಲ್ಲಿ ನಿಂತು ಹೋಗುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಮುರಿದ ಗಾಜಿನ ಚೂರುಗಳಲ್ಲಿ ಅರಳುವ ಚಂದಿರ: ರಾಮ್ ಪ್ರಕಾಶ್ ರೈ ಕೆ. ಸರಣಿ

‘ಸಣ್ಣ ಜೈಲಿನಿಂದ ದೊಡ್ಡ ಜೈಲಿಗೆ ಹೋಗುತ್ತಿದ್ದೀಯ’ ಎಂಬಂತಹ ಹಲವು ಅರ್ಥಪೂರ್ಣ ಮಾತುಗಳು ಇಲ್ಲಿ ಮನ ಸೆಳೆಯುತ್ತದೆ. ಪುಟ್ಟಿ ಮತ್ತು ಮಗನಿಗೆ ಕಳೆದ ಸಂತಸವ ಮರಳಿ ನೀಡುವಂತೆ ಮಾಡುವ ರೋಲರ್ ಕೋಸ್ಟರ್ ಪಯಣ, ಮನುವಿನ ದೃಷ್ಟಿಗೆ ಬದುಕು ಅನುಭವಿಸುವ ಏಳು ಬೀಳಿನ ಸಂಕೇತದಂತೆ ಕಾಣುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ”ಸಿನಿ ಪನೋರಮಾ” ಸರಣಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾದ ವಿಶ್ಲೇಷಣೆ

Read More

ಸಾಗರದ ಸದ್ದೂ, ಮೌನ ತೀರದ ಕಥೆಯೂ…: ರಾಮ್ ಪ್ರಕಾಶ್ ರೈ ಕೆ. ಸರಣಿ

ಇಲ್ಲಿನ ಐದು ಪಾತ್ರಗಳು ಪಂಚಭೂತಗಳ ಸಂಕೇತ. ಸಿಡಿಯುವ ರಿಚ್ಚಿ ಬೆಂಕಿಯಾದರೆ, ಮೌನ ಧ್ಯಾನಿ ಮುನ್ನಾ ಗಾಳಿ, ಅಲೆಮಾರಿಯಂತೆ ಸಾಗುವ ರಾಘು ನೀರು, ಸಹನಾಮೂರ್ತಿ ರತ್ನಕ್ಕ ಭೂಮಿ, ಬಾಲು ಆಗಸ. ಇದನ್ನು ಹೊರತುಪಡಿಸಿದರೆ, ಚಿತ್ರದ ಮಾತುಗಳು ಸೆರೆ ಆಗಿದ್ದು ಸಿಂಕ್ ಸೌಂಡ್ ತಂತ್ರಜ್ಞಾನದ ಮೂಲಕ. ಇದರಲ್ಲಿ, ದೃಶ್ಯದೊಂದಿಗೆ ಮಾತುಗಳ ದಾಖಲೀಕರಣ ಕೂಡ ನಡೆದು, ದೈನಂದಿನ ಬದುಕು ಕಣ್ಣ ಮುಂದೆ ಸಾಗುತ್ತಿರುವಂತೆ ಭಾಸವಾಗುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ”ಸಿನಿ ಪನೋರಮಾ” ಸರಣಿ

Read More

ರಾಮ್ ಪ್ರಕಾಶ್ ರೈ ಕೆ. ಹೊಸ ಸರಣಿ “ಸಿನಿ ಪನೋರಮಾ” ಇಂದಿನಿಂದ

ಯಾರ ದೃಷ್ಟಿಗೂ ಬೀಳದಂತೆ ಹೋಟೆಲಿನ ಹಿಂಬಾಗಿಲ ಬಳಿ ಕುಳಿತು ಆಕೆ ಬಿರಿಯಾನಿಯ ಚಪ್ಪರಿಸುತ್ತಿದ್ದಳು, ಅದರ ಕಾಲಾತೀತ ಪ್ರೇಯಸಿ ಮೊಸರು ಬಜ್ಜಿಯ ಒಂಚೂರು ಹೆಚ್ಚೆನಿಸುವಷ್ಟು ಸೇರಿಸಿಕೊಂಡು. ಅಲ್ಲೇ ಆಗಿದ್ದು ಅವರ ಪರಿಣಯದ ಉದ್ಘಾಟನೆ. ಮುಂದೆ ಆತ ಅವಳಿಗೆ ತನ್ನದೇ ಶೈಲಿಯ ಬಿರಿಯಾನಿಯ ಮಾಡಿ ತಿನ್ನಿಸುತ್ತಿದ್ದರೆ, ಅವಳು ಆತನೆಡೆಗೆ ತನ್ನ ಚಂದಿರ ಮೂಡುವ ಕೆನ್ನೆಗಳ ಒಳಸೆಳೆದು ತುಟಿಯಂಚಿನಲ್ಲಿ ನಗು ಚೆಲ್ಲುತ್ತಾ ಪ್ರೀತಿಯ ಭಾವವ ತಣ್ಣಗೆ ಧಾರೆಯೆರೆಯುತ್ತಿದ್ದಳು.
ರಾಮ್ ಪ್ರಕಾಶ್ ರೈ ಕೆ. ಬರೆಯುವ ಸಿನಿಮಾಗಳ ಕುರಿತ “ಸಿನಿ ಪನೋರಮಾ” ಸರಣಿ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ” ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ. ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ.
ಹೇಮಂತ್‌ ರಾವ್‌ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಕುರಿತು ರಾಮ್ ಪ್ರಕಾಶ್ ರೈ ಕೆ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ