ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
“ದಯವಿಟ್ಟು ಈ ಮುಟ್ಟಿಗೊಂದು
ಅವಮಾನವಾದರೂ
ಆಗಲಿ
ಮುಖ ಬಾಡಿಸಿಕೊಂಡು ಹೋದ
ಮುಟ್ಟು
ಮುಂದಿನ ಬಾರಿ ಬರದೆ ನಿಲ್ಲಲಿ
ಗರ್ಭದೊಳಗೊಂದು ಚಿಗುರು ಮೂಡಲಿ” -ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ಸದಾಶಿವ ಸೊರಟೂರು | Feb 10, 2025 | ದಿನದ ಕವಿತೆ |
“ದಯವಿಟ್ಟು ಈ ಮುಟ್ಟಿಗೊಂದು
ಅವಮಾನವಾದರೂ
ಆಗಲಿ
ಮುಖ ಬಾಡಿಸಿಕೊಂಡು ಹೋದ
ಮುಟ್ಟು
ಮುಂದಿನ ಬಾರಿ ಬರದೆ ನಿಲ್ಲಲಿ
ಗರ್ಭದೊಳಗೊಂದು ಚಿಗುರು ಮೂಡಲಿ” -ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
Posted by ಸದಾಶಿವ ಸೊರಟೂರು | Nov 1, 2024 | ಸಂಪಿಗೆ ಸ್ಪೆಷಲ್ |
ನಾನಿನ್ನು ಎದ್ದು ಆಕಳಿಸುತ್ತಾ ಕೂತಿರುವಾಗ ಈ ಹೆಣ್ಣು ಮಕ್ಕಳಿಗೆ ಏನಾಗಿದೆ? ಈ ಬದುಕು ಎಂದೂ ಕೂಡ ನಮಗೆ ಸುಸ್ತನ್ನೇ ದಯಪಾಲಿಸಿಯೇ ಇಲ್ಲವೇನೊ ಎನ್ನುವಂತೆ ಯಾಕಿಷ್ಟು ಕಳೆಕಳೆಯಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಹಬ್ಬದಂತೆ ಓಡಾಡುತ್ತಿದ್ದಾರೆ. ಈ ಹಬ್ಬದ ದಿನ ಒಬ್ಬೊಬ್ಬ ಹೆಣ್ಣು ಮಗಳು ನಡೆದಾಡುವ ಒಂದೊಂದು ತೇರೇನೊ ಅನಿಸುತ್ತದೆ. ಈ ಹಬ್ಬವನ್ನು, ಹಬ್ಬದ ಸಂಭ್ರಮವನ್ನು ಹೆಣ್ಣು ಮಕ್ಕಳು ವಶಪಡಿಸಿಕೊಂಡರಾ?
ಏನೆಲ್ಲದರ ನಡುವೆ ಬದುಕನ್ನೂ, ಆಗಾಗ ಬರುವ ಹಬ್ಬಗಳನ್ನೂ ಸಮನಾಗಿ ತೂಗಿಸಿಕೊಂಡು ಹೋಗುವ ಹೆಣ್ಣುಮಕ್ಕಳ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ
Posted by ಸದಾಶಿವ ಸೊರಟೂರು | Aug 18, 2024 | ವಾರದ ಕಥೆ, ಸಾಹಿತ್ಯ |
ರಾತ್ರಿಯಾದರೂ ದೊಡ್ಡಪ್ಪ ಊರು ಮುಟ್ಟಿದ ಬಗ್ಗೆ ಫೋನ್ ಬರಲಿಲ್ಲ. ಆಯಾಸದಲ್ಲಿ ಮರೆತು ಹೋಗಿರಬೇಕೆಂದು ಸಮಾಧಾನಿಸಿಕೊಂಡೆ. ರಾತ್ರಿ ಎಷ್ಟೊ ಹೊತ್ತಿನವರೆಗೂ ನಿದ್ದೆ ನನ್ನ ಬಳಿ ಸುಳಿಯಲಿಲ್ಲ. ಇಂಥ ವಿಷಯಗಳಲ್ಲಿ ನಿದ್ದೆಯೆಂದೂ ಕೂಡ ಜೊತೆಗಾರನಾಗಿರುವುದಿಲ್ಲ. ಕಣ್ಣಿಗೆ ನಿದ್ದೆ ಹತ್ತಿಕೊಳ್ಳುವ ಹೊತ್ತಿಗೆ ಮುಂಜಾವು ಬಂದಿತ್ತು. ಇನ್ನೂ ಅರೆ ಮಂಪರು. ಗಾಢ ನಿದ್ದೆಯೇನ್ನಲ್ಲ. ಮೊಬೈಲ್ ರಿಂಗಣಸಿತು. ಹರೀಶ ಕಾಲ್ ಮಾಡ್ತಿದ್ದಾನೆ. ಏನು ಇಷ್ಟೊತ್ತಲ್ಲಿ ಫೋನ್? ಯಾಕೊ ಸಣ್ಣಗೆ ಭಯವಾಯಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸದಾಶಿವ್ ಸೊರಟೂರು ಕತೆ “ಮುಗಿಲ ದುಃಖ”
Posted by ಸದಾಶಿವ ಸೊರಟೂರು | Apr 11, 2024 | ದಿನದ ಕವಿತೆ |
“ಹಂಡೆಯೊಳಗೆ ಕುದಿಸಿಟ್ಟುಹೋದ
ನೀರು ಆರಿಲ್ಲ
ಸೀಗೆ ಸಾಬೂನು ಟವಲು ಅವನ
ಮಾತು ಮೀರಿ ಕದಲಿಲ್ಲ
ಅಂವ ದೇವರ ಮುಂದೆ ಹಚ್ಚಿಟ್ಟು
ಹೋದ ಹಣತೆ ಇನ್ನೂ ಆರಿಲ್ಲ..
ಬಿಡಿಸಿ ದೇವರಿಗೆ ಮುಡಿಸಿ ಹೋದ
ಹೂವೂ ಬಾಡಿಲ್ಲ..”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
Posted by ಸದಾಶಿವ ಸೊರಟೂರು | Dec 11, 2023 | ದಿನದ ಕವಿತೆ |
“ನಾನು ಅಂಗಳಕ್ಕೆ ನೀರು ಚೆಲ್ಲುತ್ತಿದ್ದೆ
ಅವಳು ರಂಗೋಲಿ
ಬರೆಯುತ್ತಿದ್ದಳು
ನಾನು ಹೂವು ಕೊಯ್ಯುತ್ತಿದ್ದೆ
ಅವಳು ದಾರ ಹಿಡಿದು ನಿಲ್ಲುತ್ತಿದ್ದಳು
ಅವಳು ಉಸಿರು ಬಿಡುತ್ತಿದ್ದಳು
ನಾನು ಆ ಉಸಿರು ಕುಡಿದು ಬದುಕುತ್ತಿದ್ದೆ
ಅವಳು ಸವಿನಿದ್ದೆ ಉಣ್ಣುತ್ತಿದ್ದಳು”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ