Advertisement

ಸುಕನ್ಯಾ ವಿಶಾಲ ಕನಾರಳ್ಳಿ

ಮಳೆಬೆಳೆ, ಸಂತೋಷ, ನೆಮ್ಮದಿಗಳ ಕಣಜ

ಕಳೆದ ಇಡೀ ಬೇಸಿಗೆಯಲ್ಲಿ ನಮ್ಮ ರಾಣಿರಾಜ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿತ್ತು. ಬೇಸಿಗೆ ಬರುವುದಕ್ಕೂ ಮುನ್ನ ಸರ್ಕಾರವು ಬರಲಿರುವ ಚಂಡಮಾರುತಗಳ ಬಗ್ಗೆ, ಮಳೆಪ್ರವಾಹಗಳ ಬಗ್ಗೆ ಅದೇನೆಲ್ಲಾ ಎಚ್ಚರಿಕೆ ಕೊಟ್ಟಿತ್ತು ಎಂದರೆ ದೂರಪ್ರವಾಸಕ್ಕೇನಾದರೂ ಹೋದರೆ ಮನೆಕಡೆ ಪರಿಸ್ಥಿತಿ ಏನಪ್ಪಾ ಎಂದೆಲ್ಲ ಚಿಂತೆಯಾಗಿತ್ತು. ಹಾಗೇನೂ ಆಗದೆ ಕಡೆಗೆ ನೆಟ್ಟಗೊಂದು ಸರಿಯಾದ ಮಳೆಯೂ ಬೀಳದೆ, ಬೇರೊಂದು ತರಹದ ಚಿಂತೆಯಾಗಿತ್ತು. ಬಿಸಿಲು ಹೆಚ್ಚಾಗಿ, ಮಳೆನೀರು ಕೊಯ್ಲಿನ ಟ್ಯಾಂಕ್ ಪೂರಾ ಖಾಲಿಯಾಗಿ, ಏನೊಂದೂ ತರಕಾರಿ ಬೆಳೆಯಲಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

‘ಇಂಡೀಜಿನಸ್ ವಾಯ್ಸ್’ – ಸಮತೆಯತ್ತ ಆಸ್ಟ್ರೇಲಿಯಾ

ದೇಶದ ಮೂಲಜನರಿಗೆ ಸಂಬಂಧಿಸಿದ್ದರೂ 55 ವರ್ಷಗಳ ನಂತರ ಪ್ರತಿಯೊಬ್ಬ ಆಸ್ಟ್ರೇಲಿಯನ್ ವಯಸ್ಕ ಪ್ರಜೆಯೂ ಕಡ್ಡಾಯವಾಗಿ ಮತ ಚಲಾಯಿಸಬೇಕಾದ, ದೇಶದ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಳಬೇಕಿದ್ದ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಅವರು ಅಧಿಕೃತವಾಗಿ ಬಿಡುಗಡೆ ಮಾಡುವವರಿದ್ದರು. ತಮ್ಮ ಬಿಳಿಯ ಜನರಿಗೆ ಸಾರಾಸಾಗಾಟಾಗಿ, ಯಾವುದೇ ಅಡ್ಡಿಗಳಿಲ್ಲದೆ ‘ಸ್ವಾಭಾವಿಕವಾಗಿ’ ಲಭ್ಯವಿರುವ ಸ್ವಯಂ-ನಿರ್ಣಯದ ಹಕ್ಕು ಇದೇ ದೇಶದ ಮೂಲಜನರಿಗೆ ಇಲ್ಲವಾಗಿರುವುದನ್ನು ಅವರು ಎತ್ತಿ ಹಿಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅಲ್ಲಿಯ ಇಲ್ಲಿಯ ಬೆಲೆಯೇರಿಕೆ ಕಥೆಗಳು

ಉದ್ಯೋಗ ಬೇಟೆಯಲ್ಲಿರುವ ಜನರಿಗೆ ಕೊಡುವ ಧನಸಹಾಯ ಆ ಒಬ್ಬ ವ್ಯಕ್ತಿಯ ಜೀವನಕ್ಕೇ ಸಾಲದಾಗಿದೆ. ಬೇಸತ್ತು ಯಾವುದಾದರೂ ಸರಿಯೇ ಹೇಗಾದರೂ ಸರಿಯೇ ಕೆಲಸವನ್ನು ಹಿಡಿಯೋಣವೆಂದು ಹೊರಟರೆ ಆ ಉದ್ಯೋಗದಿಂದ ಬರುವ ಆದಾಯ ಏತಕ್ಕೂ ಸಾಲುವುದಿಲ್ಲ. ತಮಗೆ ಒಗ್ಗದ ಉದ್ಯೋಗವನ್ನು ಮಾಡುವ ಅನಿವಾರ್ಯತೆ ಹಲವರಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತದೆ. ಮಾನಸಿಕ ರೋಗಗಳು ಕಾಣಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

ಬನ್ಯಾ ಮರ ಹಬ್ಬ ಮತ್ತು ಬನ್ಯಾ ಡ್ರೀಮಿಂಗ್

ಅಬೊರಿಜಿನಲ್ ಜನರ ಜೀವನದಲ್ಲಿ ಡ್ರೀಮಿಂಗ್ ಸ್ಟೋರೀಸ್ ಎನ್ನುವುದು ಅವಿಭಾಜ್ಯ ಅಂಗವಾಗಿದೆ. ಭಾರತೀಯ ಹಿಂದೂ ಧರ್ಮದಲ್ಲಿ ದೇವರುಗಳು ಮತ್ತು ಅನೇಕಾನೇಕ ಪುರಾಣಗಳು ಹಾಸುಹೊಕ್ಕಾಗಿರುವಂತೆ. ಅಬೊರಿಜಿನಲ್ ಜೀವನದಲ್ಲಿ ಪ್ರತಿಯೊಂದನ್ನೂ ಸ್ಪಿರಿಟ್‌ಗಳು, ಅವುಗಳು ಎಲ್ಲ ಬಗೆಯ ಜೀವಜಾಲದೊಂದಿಗೆ ಹೊಂದಿರುವ ಸಂಬಂಧವು ಎಲ್ಲರ ಜೀವನದ ಆಗುಹೋಗುಗಳನ್ನು ನಿರ್ದೇಶಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಆಸ್ಟ್ರೇಲಿಯಾದ ‘ಬಿಗ್ ಥಿಂಗ್ಸ್’ ಆಕರ್ಷಣೆಗಳು

ಏನಿದು ‘ಬಿಗ್ ಥಿಂಗ್ಸ್’ ಎಂದು ಮೊದಲ ಬಾರಿ ಕೇಳಿದಾಗ ನನ್ನ ಆಸ್ಟ್ರೇಲಿಯನ್ ಸ್ನೇಹಿತೆಯ ಗಂಡ ಬಲು ಸೊಗಸಾಗಿ ವಿವರಿಸಿದ್ದರು. ಒಂದೂರಿನ ಜನರು ಸೇರಿ ತಮಗೆ ಆಪ್ತವೆನಿಸಿದ ಹಣ್ಣು, ಆಹಾರ, ಪ್ರಾಣಿ, ಪಕ್ಷಿ, ಮರ ಇತ್ಯಾದಿಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ದೊಡ್ಡ ಗಾತ್ರದ ಶಿಲ್ಪ ಕೃತಿಯಾಗೋ, ಲೋಹ ಕಲಾ ಕೃತಿಯಾಗಿಯೋ ನಿರ್ಮಿಸಿ ಹೆಮ್ಮೆಯಿಂದ ಆ ಪ್ರತಿಮೆಯನ್ನು ತಮ್ಮೂರಲ್ಲಿ ಸ್ಥಾಪಿಸುವುದು. ಕ್ರಮೇಣ ಅದಕ್ಕೆ ಪ್ರಚಾರ ಕೊಟ್ಟು ಅದನ್ನು ದೇಶದ ‘ಬಿಗ್ ಥಿಂಗ್ಸ್’ ಪಟ್ಟಿಗೆ ಸೇರುವಂತೆ ಮಾಡುವುದು. ಇದರಿಂದ ಆ ಊರಿಗೆ ಅದೇನೋ ವಿಶೇಷ ಗುರುತು ಸಿಕ್ಕಿದಂತಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ