Advertisement

ಕೆಂಡಸಂಪಿಗೆ

ಸಂಗೀತ ಸಂಜೆಗಳ ಇಬ್ಬಗೆಯ ಸುಧೆ

ಆಸ್ಟ್ರೇಲಿಯಾದ ಎಂದೆಂದಿಗೂ ತಿಳಿಯಾಗಿಲ್ಲದ ಇಬ್ಬಗೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಜನಜೀವನದ ಮುಖ್ಯಭಾಗವಾದ ಸಂಗೀತ ಮತ್ತು ಆಸ್ಟ್ರೇಲಿಯಕ್ಕೆ ಬರಮಾಡಿಕೊಂಡ ಪಾಶ್ಚಾತ್ಯ ಸಂಗೀತ. ಅಬೊರಿಜಿನಲ್ ಜನರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ವಸಾಹತುಶಾಹಿಗಳು ಪ್ರಯತ್ನಿಸಿದರೂ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಸಂಗೀತ, ನೃತ್ಯ ಮತ್ತು ಚಿತ್ರಕಲೆಗೆ ಗಮನ ಕೊಟ್ಟು, ಅವುಗಳಲ್ಲಿರುವ ವಿಶೇಷಣಗಳನ್ನು ಗುರುತಿಸಿದರು.
ಡಾ. ವಿನತೆ ಶರ್ಮ ಅಂಕಣ

Read More

ರೇನ್ಬೋ ಬೀಚ್: ರಾಣಿರಾಜ್ಯದ ಕಾಮನಬಿಲ್ಲು

ಬಣ್ಣಗಳು ತುಂಬಿದ ರೇನ್ಬೋ ಬೀಚಿನ ಆಕರ್ಷಕ ಮರಳುದಿಬ್ಬಗಳ ಮೇಲೆ ಹತ್ತಿ, ಒಂದು ಮರದ ತುಂಡನ್ನು ಹಿಡಿದು ಜಾರುಬಂಡೆ ಮಾಡಿಕೊಂಡು, ಎದುರಿಗಿರುವ ನಿರ್ಮಲ ನೀಲ ಸಾಗರವನ್ನು ದೃಷ್ಟಿಸುತ್ತ ಜಾರುವಾಗ ಅದೇನೋ ಒಂದು ದೈವೀಕ ಅನುಭೂತಿಯುಂಟಾಗುತ್ತದೆ. ಯಿನಿಂಗೀ ಇರುವ ಆ ಪ್ರಕೃತಿಯೆ ದೇವರಾದಂತೆ ಭಾಸವಾಗುತ್ತದೆ. ಆನಂತರ ದಿಬ್ಬಗಳ ಕೆಳಗೆ ನಿಂತು ಮರಳನ್ನು ಬೊಗಸೆಯಲ್ಲಿ ಹಿಡಿದು ಬಣ್ಣಬಣ್ಣದ ಕಣಗಳನ್ನು ಸ್ಪರ್ಶಿಸಿದಾಗ ಮತ್ತದೇನೋ ಮಾಯೆ! ದಿವ್ಯದರ್ಶನದ ಕ್ಷಣಗಳು!
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ವಸತಿ ಸಮಸ್ಯೆ, ರಾಜಕೀಯ ಪ್ರಶ್ನೆಗಳ ಕಥೆಗಳು

ಆಸ್ಟ್ರೇಲಿಯಾದಲ್ಲಿ ಕೋವಿಡ್-೧೯ ನಂತರದ ಪರಿಸ್ಥಿತಿ ಸುಧಾರಿಸಿದೆ, ಜನರ ಹರಿದಾಟ ಸುಗಮವಾಗಿದೆ. ಆದರೆ ಧುತ್ತೆಂದು ದೇಶದಾದ್ಯಂತ, ಅದರಲ್ಲೂ ನಮ್ಮ ರಾಣಿರಾಜ್ಯದಲ್ಲಿ ಇನ್ನೂ ನಿಚ್ಚಳವಾಗಿ, ವಸತಿ ಸಮಸ್ಯೆ ಎನ್ನುವುದು ಹೊಸದಾಗಿ ತಲೆದೋರಿದೆ. ಪ್ರಪಂಚದ ಬೇರೆಬೇರೆ ಭಾಗಗಳಿಂದ ದೇಶದೊಳಕ್ಕೆ ಬರುತ್ತಿರುವವರ ಮತ್ತು ಅಂತರಾಜ್ಯ ವಲಸೆಗಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಕೇಂದ್ರ ಸರಕಾರವು ಇತ್ತೀಚೆಗೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿ ಮತ್ತು ಉದ್ಯೋಗ ವೀಸಾಗಳನ್ನು ಕೊಡುತ್ತ ಉತ್ತೇಜನಕಾರಿಯಾಗಿದೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಆಸ್ಟ್ರೇಲಿಯದ ಮಳೆ ಪ್ರವಾಹಗಳು, ಸೋಲುಗೆಲುವುಗಳು

ಈ ಬಾರಿ ವಿಕ್ಟೊರಿಯಾ ರಾಜ್ಯವಷ್ಟೇ ಅಲ್ಲ ಅದರ ಕೆಳಗಿನ ಟಾಸ್ಮೆನಿಯಾ ರಾಜ್ಯದ ಭಾಗಗಳಲ್ಲೂ ಪ್ರವಾಹವುಂಟಾಗಿದೆ. ಟಾಸ್ಮೆನಿಯಾವು ಕಡಿಮೆ ಜನಸಂಖ್ಯೆ, ಎಲ್ಲೆಲ್ಲೂ ಕಂಗೊಳಿಸುವ ಪುರಾತನ ಹಸಿರು ಕಾಡುಗಳಿಗೆ ಹೆಸರಾದದ್ದು. ಹಾಗಾಗಿ ಪ್ರವಾಹದ ವಿಷಯ ಇನ್ನೂ ಅಪರೂಪದ ಸಂಗತಿ ಇಲ್ಲಿ. ಹೆಚ್ಚು ಕಡಿಮೆ ದೇಶದ ಇಡೀ ಪೂರ್ವಭಾಗದಲ್ಲಿ ಮಳೆಮೋಡಗಳ ಜೊತೆ ಚಿಂತೆಮೋಡಗಳು ಕೂಡ ಕವಿದಿವೆ. ದೇಶದ ಆಚೆಕಡೆಯ ಮರುಭೂಮಿಗಳು ಬೆಂದು ಕಾದು ಅಲ್ಲಿನ ಕಾವುಮೋಡಗಳು ಮರುಭೂಮಿಯನ್ನು ದಾಟಿಬಿಟ್ಟಿವೆ.
ಡಾ. ವಿನತೆ ಶರ್ಮ ಅಂಕಣ

Read More

ಒಣಎಲೆ ಗೊಬ್ಬರದ ಕಿರು ಕಥೆಗಳು

ಸುಮಾರು ಹತ್ತು ಎಕರೆ ಪ್ರದೇಶದಲ್ಲಿರುವ ನಗರಪಾಲಿಕೆ ಮರುಬಳಕೆ ಘಟಕದ ಒಂದು ಭಾಗದಲ್ಲಿ ಒಣ ಎಲೆಗೊಬ್ಬರ ವಿತರಣೆ ವ್ಯವಸ್ಥೆಯಿದೆ. ವಾರಾಂತ್ಯದಲ್ಲಿ ಮಧ್ಯಾಹ್ನ ಹನ್ನೆರಡರ ನಂತರ ಹೋದಾಗ ಕಂಡಿದ್ದು ಒಂದೆಡೆ ಒಂದಷ್ಟು ಜನರು ತಾವು ತಂದ ತ್ಯಾಜ್ಯ ಮತ್ತು ಹಸಿರು ಗಿಡಮರಗಳ ಭಾಗಗಳನ್ನು ಸುರಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಅಲ್ಲಿ ಹೋಗಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಆಗ ನಗರಪಾಲಿಕೆಯ ಯಂತ್ರಗಳು ಈ ಗಿಡಮರ ಭಾಗಗಳನ್ನು ಕತ್ತರಿಸಿ, ಅರೆದು ಅವನ್ನು ಒಯ್ದು ಒಂದು ಮೂಲೆಯಲ್ಲಿ ರಾಶಿ ಮಾಡುತ್ತಿರುತ್ತವೆ. ಡಾ. ವಿನತೆ ಶರ್ಮ  ಅಂಕಣ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ