Advertisement
ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

ಸಮ-ಬೆಸಗಳ ಅರಿವು, ಹರಿವು: ವಿನತೆ ಶರ್ಮ ಅಂಕಣ

ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರಕ್ಕೆ ಭಾರತದ ಹೆಸರುವಾಸಿ ರೆಸ್ಟರೆಂಟ್ ‘ಶರವಣ ಭವನ’ ಕಾಲಿಟ್ಟಿದೆ. ಇದೇನು ಒಂದು ಹೇಳಿಕೊಳ್ಳುವಂತಹ ಸುದ್ದಿಯಾ ಎಂದು ಹುಬ್ಬೇರಿಸಬೇಡಿ ಎಂಬ ಕಳಕಳಿಯ ವಿನಂತಿ. ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ ಶರವಣ ಭವನವು ಬಂದು ನೆಲೆಯೂರಿ ಅಲ್ಲಿನ ಎಲ್ಲರೂ ಊಟ ತಿಂಡಿಗಳನ್ನು ಸವಿಯುತ್ತಿದ್ದಾಗ ಆಸ್ಟ್ರೇಲಿಯಾದ ಬೇರೆ ನಗರಗಳಲ್ಲಿ ದಕ್ಷಿಣ ಭಾರತೀಯರು ಹೊಟ್ಟೆ ಉರಿಸಿಕೊಳ್ಳುತ್ತಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅಸಾಂಜ್ ಮತ್ತು ಕೆಂಪು ಮಣ್ಣಿನ ಬೆಂಕಿ: ವಿನತೆ ಶರ್ಮ ಅಂಕಣ

ಈ ೨೧ ನೇ ಶತಮಾನದಲ್ಲಿ ಕೂಡ ಆಸ್ಟ್ರೇಲಿಯನ್ ಸಮಾಜದಲ್ಲಿ ತಮ್ಮ ಜನರನ್ನು ಕಪ್ಪು ಜನರು ಎಂದು ಕೀಳಾಗಿ ನೋಡುವುದನ್ನು ಪ್ರಶ್ನಿಸುವುದು, ‘ನಿಮ್ಮ ಬ್ಲಾಕ್ ಬಣ್ಣ, ಬ್ಲಾಕ್ ರೇಸಿಸಮ್’ ನಮ್ಮ Blak ಅಸ್ಮಿತೆಗೆ ಭಂಗ ತರುವುದಿಲ್ಲ, ನಮ್ಮ ಕೆಂಪು ಮಣ್ಣು, ಉರಿಯುವ ಸೂರ್ಯ ಇರುವ ತನಕವೂ ನಾವು ಈ ನೆಲದ ಮಕ್ಕಳು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಯಮರಾಜ ಕರೆದಾಗ, ಹುಲುಮನುಷ್ಯರಾದಾಗ: ವಿನತೆ ಶರ್ಮ ಅಂಕಣ

ಈ ನನ್ನ ಎಲ್ಲಾ ಅವಾಂತರಗಳಲ್ಲಿ ನನಗೆ ನೆನಪಾಗುತ್ತಿದ್ದದ್ದು ಮೈಕಲ್ ಮೋಸ್ಲಿ ಮತ್ತು ಅವರ ಟಿವಿ ಕಾರ್ಯಕ್ರಮಗಳು. ಅವುಗಳಲ್ಲಿ ತೋರಿಸುತ್ತಿದ್ದ ಪ್ರಯೋಗಗಳನ್ನು ನಾವು ಸಾಮಾನ್ಯ ಜನರು ಎಚ್ಚರಿಕೆ ವಹಿಸದೆ ಅನುಕರಣೆ ಮಾಡಲು ಹೋದರೆ ಆಗುವ ಅನಾಹುತವನ್ನು ನಾನೇ ಅನುಭವಿಸಿದ್ದೆ. ಅನೇಕ ಬಾರಿ ‘ಆ ಯಾವುದೋ ದೇವತೆಗಳು ನನಗೆ ಎಚ್ಚರಿಕೆ ಕೊಟ್ಟರು. ಎಷ್ಟಾದರೂ ನಾನೊಬ್ಬ ಹುಲುಮಾನವಳು’ ಎಂದು ನನಗೆ ನಾನೇ ಹೇಳಿಕೊಂಡು ಅದನ್ನು ಬೇರೆಯವರಿಗೂ ಹೇಳಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಯೂತ್ ಕ್ರೈಂ ಸುಧಾರಣೆಯತ್ತ: ವಿನತೆ ಶರ್ಮ ಅಂಕಣ

ನಾವು ಮುಖ್ಯವಾಗಿ ಯೂತ್ ಕ್ರೈಂ ವಿಷಯವನ್ನು ಅಪರಾಧ-ಕೇಂದ್ರಿತ ನಿಲುವಿನಿಂದ ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಅದನ್ನು ಪರಿಹಾರ-ಕೇಂದ್ರಿತ ದೃಷ್ಟಿಯಿಂದ ನೋಡಬೇಕು. ಆಗ ನಮ್ಮ ಗಮನ ಸಮಸ್ಯೆಗಿಂತಲೂ ಹೆಚ್ಚು ಒಟ್ಟಾರೆ ಸಮಗ್ರ ಪರಿಸ್ಥಿತಿಯನ್ನು ನೋಡುವ, ಅದನ್ನು ವಿಶ್ಲೇಷಿಸುವ ಸುಧಾರಣಾ ಹಾದಿಯತ್ತ ಹೊರಳುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ನಿಮ್ಮ ಓದಿಗೆ

Read More

ಯೂತ್ ಕ್ರೈಂ ಕತೆಗಳು: ವಿನತೆ ಶರ್ಮ ಅಂಕಣ

ಎಷ್ಟೋ ಬಾರಿ ಪೊಲೀಸರು ಈ ಮಕ್ಕಳಿಗೆ ಎಚ್ಚರಿಕೆ ಕೊಟ್ಟು ಕಳಿಸುತ್ತಾರೆ. ಕೆಲವೊಮ್ಮೆ ದೊಡ್ಡ ಮಕ್ಕಳು ಯೂತ್ ಜಸ್ಟಿಸ್ ಮುಖಾಮುಖಿ ಸಭೆಗಳಲ್ಲಿ ಸಲಹೆ, ಬುದ್ಧಿವಾದಗಳನ್ನು ಪಡೆದು ಹೋಗುತ್ತಾರೆ. ಕೆಲವರಿಗೆ ಅಪರಾಧ ಮಾಡುವುದು ತಮಾಷೆಯಾದರೆ ಇನ್ನೂ ಕೆಲವು ಮಕ್ಕಳಿಗೆ ಅದು ಉದ್ದೇಶಪೂರ್ವಕವಾದ ನಡವಳಿಕೆ ಆಗಿರುತ್ತದೆ ಎಂದು ಸಮಾಜ ಕಾರ್ಯಕರ್ತರು, ಆಪ್ತಸಮಾಲೋಚನಾ ತಜ್ಞರು ಹೇಳುತ್ತಾರೆ. ಚಿಂತಿಸುವ ವಿಷಯವೆಂದರೆ ಅವರಲ್ಲಿ ಅನೇಕರು ಪದೇಪದೇ ಅದೇ ರೀತಿಯ ಅಪರಾಧಗಳನ್ನು ಮಾಡುತ್ತಾ ಇರುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ