Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಆಸ್ಟ್ರೇಲಿಯದ ಮಳೆ ಪ್ರವಾಹಗಳು, ಸೋಲುಗೆಲುವುಗಳು

ಈ ಬಾರಿ ವಿಕ್ಟೊರಿಯಾ ರಾಜ್ಯವಷ್ಟೇ ಅಲ್ಲ ಅದರ ಕೆಳಗಿನ ಟಾಸ್ಮೆನಿಯಾ ರಾಜ್ಯದ ಭಾಗಗಳಲ್ಲೂ ಪ್ರವಾಹವುಂಟಾಗಿದೆ. ಟಾಸ್ಮೆನಿಯಾವು ಕಡಿಮೆ ಜನಸಂಖ್ಯೆ, ಎಲ್ಲೆಲ್ಲೂ ಕಂಗೊಳಿಸುವ ಪುರಾತನ ಹಸಿರು ಕಾಡುಗಳಿಗೆ ಹೆಸರಾದದ್ದು. ಹಾಗಾಗಿ ಪ್ರವಾಹದ ವಿಷಯ ಇನ್ನೂ ಅಪರೂಪದ ಸಂಗತಿ ಇಲ್ಲಿ. ಹೆಚ್ಚು ಕಡಿಮೆ ದೇಶದ ಇಡೀ ಪೂರ್ವಭಾಗದಲ್ಲಿ ಮಳೆಮೋಡಗಳ ಜೊತೆ ಚಿಂತೆಮೋಡಗಳು ಕೂಡ ಕವಿದಿವೆ. ದೇಶದ ಆಚೆಕಡೆಯ ಮರುಭೂಮಿಗಳು ಬೆಂದು ಕಾದು ಅಲ್ಲಿನ ಕಾವುಮೋಡಗಳು ಮರುಭೂಮಿಯನ್ನು ದಾಟಿಬಿಟ್ಟಿವೆ.
ಡಾ. ವಿನತೆ ಶರ್ಮ ಅಂಕಣ

Read More

ಒಣಎಲೆ ಗೊಬ್ಬರದ ಕಿರು ಕಥೆಗಳು

ಸುಮಾರು ಹತ್ತು ಎಕರೆ ಪ್ರದೇಶದಲ್ಲಿರುವ ನಗರಪಾಲಿಕೆ ಮರುಬಳಕೆ ಘಟಕದ ಒಂದು ಭಾಗದಲ್ಲಿ ಒಣ ಎಲೆಗೊಬ್ಬರ ವಿತರಣೆ ವ್ಯವಸ್ಥೆಯಿದೆ. ವಾರಾಂತ್ಯದಲ್ಲಿ ಮಧ್ಯಾಹ್ನ ಹನ್ನೆರಡರ ನಂತರ ಹೋದಾಗ ಕಂಡಿದ್ದು ಒಂದೆಡೆ ಒಂದಷ್ಟು ಜನರು ತಾವು ತಂದ ತ್ಯಾಜ್ಯ ಮತ್ತು ಹಸಿರು ಗಿಡಮರಗಳ ಭಾಗಗಳನ್ನು ಸುರಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಅಲ್ಲಿ ಹೋಗಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಆಗ ನಗರಪಾಲಿಕೆಯ ಯಂತ್ರಗಳು ಈ ಗಿಡಮರ ಭಾಗಗಳನ್ನು ಕತ್ತರಿಸಿ, ಅರೆದು ಅವನ್ನು ಒಯ್ದು ಒಂದು ಮೂಲೆಯಲ್ಲಿ ರಾಶಿ ಮಾಡುತ್ತಿರುತ್ತವೆ. ಡಾ. ವಿನತೆ ಶರ್ಮ  ಅಂಕಣ

Read More

ಆಸ್ಟ್ರೇಲಿಯಾದ ಹೊಸ ರಾಜ, ಹೊಸ ಭವಿಷ್ಯದ ಕನಸುಗಳು

ತನ್ನದೇ ಆದ ‘ಸೂರ್ಯ ಮುಳುಗದ’ ನಾಡು ಯುನೈಟೆಡ್ ಕಿಂಗ್ಡಮ್ ಸಾಮ್ರಾಜ್ಯದ ಅಧಿಪತಿಯಾಗಿದ್ದ, ಅದರ ಜೊತೆಗೆ ಐವತ್ತಾರು ಕಾಮನ್ವೆಲ್ತ್ ರಾಷ್ಟ್ರಗಳ ನಾಯಕಿಯಾಗಿದ್ದ ರಾಣಿ ಎರಡನೆ ಎಲಿಝಬೆತ್ ಕೂಡ ಹೀಗೆಯೆ ಎಪ್ಪತ್ತು ವರ್ಷಗಳ ಸುದೀರ್ಘ ಕಾಲದಲ್ಲಿ ‘ಮುಳುಗದ’ ಸೂರ್ಯನಂತೆ ರಾರಾಜಿಸುತ್ತ ಸಾಮ್ರಾಜ್ಞಿಯಾಗಿದ್ದರು. ‘ನನ್ನ ಜೀವನವನ್ನು ನಿಮ್ಮ ಸೇವೆಗಾಗಿ ಮುಡಿಪಿಟ್ಟಿದ್ದೀನಿ’ ಎನ್ನುತ್ತಾ ಸದಾಕಾಲ ತಮ್ಮ ಕಾರ್ಯಕ್ಷಮತೆ ತೋರಿದರು ಎನ್ನುವುದೀಗ ಇಡೀ ಪ್ರಪಂಚದ ಜನರಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಬೆಳಕು ಬಣ್ಣದ ಭ್ರಮಾಲೋಕ ​ರಿವರ್ ಫೈರ್

ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕದಲ್ಲಿ ಈ ಬಾರಿ ಉತ್ಸಾಹ ಒಂದು ತೂಕ ಹೆಚ್ಚೇ. ಕಳೆದೆರಡು ವರ್ಷಗಳಲ್ಲಿ ನಡೆಯದ ಉತ್ಸವ ಈ ಬಾರಿ ಹೆಚ್ಚು ರಂಗಿನಿಂದ ನಡೆಯುತ್ತಿದೆ. ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಈ ಫೆಸ್ಟಿವಲ್‌ ನಡೆಯುವ  ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ.  ಬ್ರಿಸ್ಬೇನ್‌ ನದಿಯು ಪಟಾಕಿಗಳ ಬಣ್ಣಗಳನ್ನು ಪ್ರತಿಫಲಿಸುವ ಖುಷಿಯಲ್ಲಿ ಹರಿಯುತ್ತಿದೆ. ಈ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮ  ಸಡಗರದ ಸುದ್ದಿಯನ್ನು ಬರೆದಿದ್ದಾರೆ. 

Read More

ಬದಲಾವಣೆಯಲ್ಲಿ ಸ್ವಾತಂತ್ರ್ಯದ ಸಾಕಾರ

ಈ ಭೂಗೋಳದ ಬಹುತೇಕ ರಾಷ್ಟ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜಗಳ, ಕದನ, ವೈಮನಸ್ಸು, ಪ್ರತಿಭಟನೆ, ಆಗ್ರಹಗಳು ನಡೆಯುತ್ತಲೇ ಇರುವುದನ್ನು ಓದಿದಾಗ, ಕೇಳಿದಾಗ ಮನುಷ್ಯ ಮನಸ್ಸು ಅದೆಷ್ಟು ಅತಂತ್ರವೆನಿಸುತ್ತದೆ. ಆ ಮನಸ್ಸುಗಳು ಅದೆಷ್ಟು ಸುಲಭವಾಗಿ ಆಕ್ರಮಣಶೀಲತೆಯನ್ನು ಅಪ್ಪಿಕೊಳ್ಳುತ್ತವೆ ಎಂದು ಗೋಚರಿಸುತ್ತದೆ. ತಾನು ಮುಖ್ಯ, ತನ್ನದು ಮುಖ್ಯ, ತನ್ನದೇ ಮೇಲು, ತನ್ನದನ್ನು ವಾದಿಸುತ್ತಾ ಮುಂದಿರಿಸಬೇಕು, ಎನ್ನುವುದು ಬರೀ ಮನುಷ್ಯ ಸ್ವಭಾವವೇ ಹೌದು. ಒಮ್ಮೊಮ್ಮೆ ಅದು ಎಲ್ಲ ಪ್ರಾಣಿಗಳ ಸಾರ್ವತ್ರಿಕ ಸ್ವಭಾವ ಎನ್ನುವುದಾದರೂ ಪ್ರಾಣಿಪ್ರಪಂಚವನ್ನು ಗಮನಿಸಿದಾಗ ಈ ಬಗೆಯ ವೈಮನಸ್ಯಗಳು ಕಾಣುವುದಿಲ್ಲ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ