ಯಮರಾಜ ಕರೆದಾಗ, ಹುಲುಮನುಷ್ಯರಾದಾಗ: ವಿನತೆ ಶರ್ಮ ಅಂಕಣ
ಈ ನನ್ನ ಎಲ್ಲಾ ಅವಾಂತರಗಳಲ್ಲಿ ನನಗೆ ನೆನಪಾಗುತ್ತಿದ್ದದ್ದು ಮೈಕಲ್ ಮೋಸ್ಲಿ ಮತ್ತು ಅವರ ಟಿವಿ ಕಾರ್ಯಕ್ರಮಗಳು. ಅವುಗಳಲ್ಲಿ ತೋರಿಸುತ್ತಿದ್ದ ಪ್ರಯೋಗಗಳನ್ನು ನಾವು ಸಾಮಾನ್ಯ ಜನರು ಎಚ್ಚರಿಕೆ ವಹಿಸದೆ ಅನುಕರಣೆ ಮಾಡಲು ಹೋದರೆ ಆಗುವ ಅನಾಹುತವನ್ನು ನಾನೇ ಅನುಭವಿಸಿದ್ದೆ. ಅನೇಕ ಬಾರಿ ‘ಆ ಯಾವುದೋ ದೇವತೆಗಳು ನನಗೆ ಎಚ್ಚರಿಕೆ ಕೊಟ್ಟರು. ಎಷ್ಟಾದರೂ ನಾನೊಬ್ಬ ಹುಲುಮಾನವಳು’ ಎಂದು ನನಗೆ ನಾನೇ ಹೇಳಿಕೊಂಡು ಅದನ್ನು ಬೇರೆಯವರಿಗೂ ಹೇಳಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
