Advertisement

Category: ಅಂಕಣ

ಕುದಿಯದ ಕಡಲು: ವಿನಾಯಕ ಅರಳಸುರಳಿ ಅಂಕಣ

ಇಂದಿಗೂ ನನ್ನನ್ನು ಇದೊಂದು ಪ್ರಶ್ನೆ ಕಾಡುತ್ತಲೇ ಇದೆ: ನಾವು ಓದಿಕೊಳ್ಳುವ ಸಾಹಿತ್ಯ, ಕೇಳಿಸಿಕೊಳ್ಳುವ ಕಿವಿ ಮಾತು, ಪ್ರತಿ ದಿನ ನೋಡುವ ಯಾರದ್ದೋ ಬದುಕಿನ ನಿದರ್ಶನಗಳು, ತತ್ವ, ಸಿದ್ಧಾಂತ, ಆದರ್ಶ, ಭಾಷಣಗಳು… ವೈಯಕ್ತಿಕ ಬದುಕಿನ ತಿರುವುಗಳಿಗೆ ಇವು ಹೇಗೆ ಅನ್ವಯವಾಗುತ್ತವೆ? ಯಾರದೋ ವಿಷಯದಲ್ಲಿ ಎಷ್ಟೆಲ್ಲ ಪ್ರಬುದ್ಧವಾಗಿ ದಾರಿ ಹೇಳುವ ನಾವು ನಮ್ಮ ಪ್ರಯಾಣದಲ್ಲಿ ಮಾತ್ರ ಏಕೆ ಓಲಾಡುತ್ತ ನಡೆಯುತ್ತೇವೆ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಪ್ರಾಣಿ ಒಡನಾಟದಲ್ಲಿನ ಮನುಷ್ಯರ ಸಂಕಟ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಕಾಡಿನ ರಸ್ತೆಯಲ್ಲಿ ಹೋಗುವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರೂ ಅಲ್ಲಲ್ಲಿ ಜನ ವಾಹನಗಳನ್ನು ನಿಲ್ಲಿಸಿದ್ದರು. ಪ್ರಾಣಿಗಳು ಕಾಣಿಸುತ್ತಿವೆ ಎಂದು ಖುಷಿ. ಹತ್ತಿರ ಬರುವ ಮಂಗಗಳಿಗೆ ಹಣ್ಣು, ಸ್ನ್ಯಾಕ್ಸ್ ಕೊಡುವುದು ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಇದ್ದ, ಮಂಗಗಳನ್ನೇ ನೋಡುತ್ತಿದ್ದ ಜಿಂಕೆಗಳನ್ನು ಕರೆಯುವುದು ನಡೆದಿತ್ತು. ಇಷ್ಟಾದ ನಂತರ ಹೀಗೆಯೆ ಹಣ್ಣು ತೋರಿಸಿ ಕರೆದರೆ ಆನೆ, ಕಾಡೆಮ್ಮೆ ಕೂಡ ಬರಬಹುದು ಎನ್ನಿಸಿತು. ಅವುಗಳ ಸ್ವಾಭಾವಿಕ ಆಹಾರ ಪ್ರದೇಶಗಳನ್ನು ಈಗ ಲಂಟಾನಾ ಪೊದೆಗಳು ಆಕ್ರಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕನಕ ದಾಸರಲ್ಲಿನ ಜೀವನ ವಿವೇಕ ವ್ಯಾಪ್ತಿ; ಕನ್ನಡಿಗರ ಪ್ರಾಪ್ತಿ: ಎಲ್. ಜಿ. ಮೀರಾ ಅಂಕಣ

ಇವತ್ತಿಗೆ ಕನಕದಾಸರು ಹೇಗೆ ಪ್ರಸ್ತುತ ಎಂದು ನಾವು ನೋಡುವುದಾದರೆ, ಜಾತಿ ಕುಲ ಆಚಾರವನ್ನು ಮೀರಿದ ವಿವೇಕ ಮನುಷ್ಯನಿಗೆ ಮುಖ್ಯ ಎಂದು ಅವರು ಹೇಳಿದ ಮಾತು ಎಲ್ಲ ಕಾಲಕ್ಕೂ ಯೋಗ್ಯ. ನಂದಾದೀಪದಂತಹ ಮಾತು ಅದು. ಇಂದಿನ ಸಾವಯವ ಆಹಾರದ ಕಸರತ್ತು ಅವರು ಎಂದೋ ಹೇಳಿದ `ರಾಮಧಾನ್ಯಚರಿತ್ರೆ’ಯನ್ನು ನೆನಪಿಸುವುದಿಲ್ಲವೇ? ಚೆಲುವ ಕನ್ನಡ ನುಡಿಯ ಲಯಗಾರಿಕೆಯನ್ನು ಅರಿತು ಅವರು ಬಳಸಿದ ಪದಗಳು, ಹಾಡಿದ ಪದ್ಯಗಳು ಇಂದು ಗಾದೆ ಮಾತುಗಳಂತೆ ಬಳಕೆಯಾಗುತ್ತಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಬದುಕಿನ ಬಣ್ಣಗಳು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಆದರೆ ಈ ಸಮುದ್ರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಅರಿವು ನನಗೆ ಯಾವತ್ತೋ ಆಗಬೇಕಿತ್ತು. ಸುಮ್ಮನೆ ದಡದಲ್ಲಿ ಕಾಯುತ್ತಾ ಕುಳಿತೆ. ಅವಳಿಗೆ ಕನಸಿತ್ತು ಸ್ಪಷ್ಟವಾದ ಗುರಿಯಿತ್ತು. ತನ್ನ ಸುತ್ತ ಇರುವ ಮಿತಿಗಳನ್ನು ಮೀರುವ ತುಡಿತವಿತ್ತು. ಅವಳ ಪಾತ್ರ ವಿಶಾಲವಿತ್ತು. ನಾನು ಒಡ್ಡಿದ ಬೊಗಸೆಗೆ ಹೆಚ್ಚು ಹೊತ್ತು ನಿಲ್ಲಲಾರಲು ಅನ್ನುವುದು ಗೊತ್ತಾಗಬೇಕಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎಂಟನೆಯ ಬರಹ

Read More

ಅಕ್ಕ ಕೇಳವ್ವ, ನಾನೊಂದು ಕನಸು ಕಂಡೆ!: ಸುಕನ್ಯಾ ಕನಾರಳ್ಳಿ ಅಂಕಣ

ಗಂಡಸು-ಸಮಾಜ ಹೆಣ್ಣಿಗೆ ತನಗೆ ಬೇಕಾದ ಕನಸನ್ನು ಕಾಣಲೂ ಸುಲಭವಾಗಿ ಬಿಡುವುದಿಲ್ಲ. ಅವಳ ತನ್ಮಯತೆಯೂ ಆವನಿಗೆ ಅಪಾಯದಂತೆಯೇ ಕಾಣಿಸುತ್ತದೆ. ಅವನು, ಅವನು ಕಟ್ಟಿದ ಮನೆ, ಅವನಿಂದ ಹುಟ್ಟಿದ ಮಕ್ಕಳು, ಇತ್ಯಾದಿಗಳ ಸುತ್ತಲೇ ಅವಳ ಬದುಕು ಗಿರಕಿ ಹೊಡೆಯುತ್ತಿರಬೇಕು. ಅವಳು ಅದೂ ಇದೂ ಎಂದು ಗೊಣಗೊಣವೆನ್ನುತ್ತಿರಬೇಕು. ಅವನು ಯಾಂತ್ರಿಕವಾಗಿ ಹೂಂಗುಡುತ್ತಾ ಪೇಪರ್ ಓದುತ್ತಲೊ, ಟಿವಿ ನೋಡುತ್ತಲೊ, ಫೋನಿನಲ್ಲಿ ಮಾತಾಡುತ್ತಲೊ ಇರಬೇಕು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನೈದನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ