Advertisement

Category: ದಿನದ ಪುಸ್ತಕ

ಗಡಂಗು ಹೋಗಿ ಶರಾಬು ಬಂತೂ….

ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು. ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು.
ಬಿ. ಜನಾರ್ದನ ಭಟ್ ಹೊಸ ಕಾದಂಬರಿ “ಗಮ್ಯ”ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಮೀನು ಕುಡಿದ ಕಡಲಿನ ವಿಷಯ

ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ.
ಸೂರ್ಯಕೀರ್ತಿ ಬರೆದ “ಮೀನು ಕುಡಿದ ಕಡಲು” ಕವನ ಸಂಕಲನಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

Read More

‘ಮುಖ್ಯಮಂತ್ರಿ’ಯ ಬದುಕಿನ ಪುಟಗಳು….

ಆಗ ಮುಖ್ಯಮಂತ್ರಿ ಪಾತ್ರದ ಕುರಿತು ಚರ್ಚೆ ಶುರುವಾಗಿ, ರಾಜಾರಾಂ ಅವರನ್ನು ಮುಖ್ಯಮಂತ್ರಿ ಪಾತ್ರ ಮಾಡಲು ಒತ್ತಾಯಿಸಿದಾಗ ಅವರು ಒಪ್ಪಲಿಲ್ಲ. ಬೇರೆ ತಂಡಗಳ ಪ್ರಮುಖ ಕಲಾವಿದರ ಕುರಿತು ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನನ್ನ ತಲೆಗೇ ಬಂತು. ನಾಟಕ ಕೆಟ್ಟರೂ ಚಿಂತೆಯಿಲ್ಲ, ಪ್ರದರ್ಶನ ನಿಲ್ಲಿಸುವುದು ಬೇಡವೆಂದಾಯಿತು. ಭಂಡ ಧೈರ್ಯ ನನಗಿದ್ದುದರಿಂದ ಒಪ್ಪಿದೆ. ಆದರೆ ನಿರ್ದೇಶನಕ್ಕೆ ಒಪ್ಪಲಿಲ್ಲ. ರಾಜಾರಾಂ ಅವರು ಇಬ್ಬರೂ ಸೇರಿ ನಿರ್ದೇಶಿಸೋಣವೆಂದರೂ ಬೇಡವೆಂದೆ. ಎಂಟತ್ತು ದಿನಗಳಲ್ಲಿ ನಾಟಕ ಪ್ರದರ್ಶನ ಇರುವುದರಿಂದ ನಾನು ಒಪ್ಪಲಿಲ್ಲ. ಆದರೆ ಕರಾರೊಂದು ಹಾಕಿದೆ.
ನಟ ಮುಖ್ಯಮಂತ್ರಿ ಚಂದ್ರು ಬರೆದ “ರಂಗವನದ ಚಂದ್ರತಾರೆ” ಆತ್ಮಕಥನದ ಕೆಲವು ಪುಟಗಳು ನಿಮ್ಮ ಓದಿಗೆ

Read More

’ಆವರ್ತ’ ಕಾದಂಬರಿ ಸ್ವಯಂ ಸುಂದರ

‘ಆವರ್ತ’ ಈ ಬಗೆಯ ಆಕರ್ಷಕ ಶೈಲಿಯಲ್ಲಿದ್ದರೂ, ಇದೊಂದು ಸಾಂಕೇತಿಕ ಕಾದಂಬರಿ. ಮುಖ್ಯವಾಗಿ, ಮಾನವಾಂತರ್ಗತ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಪ್ರವೃತ್ತಿಗಳೇ ಇಲ್ಲಿ ಮಾನವರೂಪಿ ಪಾತ್ರಗಳಾಗಿ ಇಡೀ ಕಾದಂಬರಿಗೆ ಸಂತತ ಚಾಲನೆ ಕೊಡುತ್ತವೆ. ಆದರೆ ಇವುಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಚಿತ್ರಣ ಈ ಕಾದಂಬರಿಯ ಮೂಲಭೂತ ವಸ್ತು. ಪ್ರಸ್ತುತದಲ್ಲಿ ಪ್ರತೀಪನ ಬಾಳಿನಲ್ಲಿ ಈ ಆರು ಚಿತ್ರವೃತ್ತಿ ವಿಶೇಷಗಳೇ ಆರು ಮಂದಿ ಸ್ತ್ರೀಯರಾಗಿ ಪ್ರವೇಶಿಸಿ, ಒಬ್ಬೊಬ್ಬರೂ ಅವನಲ್ಲಿ ಒಂದೊಂದು ಭಾವವನ್ನು ಉದ್ದೀಪನಗೊಳಿಸುತ್ತಾರೆ.
ಆಶಾ ರಘು ಬರೆದ “ಆವರ್ತ” ಕಾದಂಬರಿಯ ಕುರಿತು ಡಾ. ಸಾ.ಶಿ. ಮರುಳಯ್ಯನವರ ಬರಹ

Read More

ಆಂತರ್ಯದ ಬೆಳಗಿನಿಂದ ಹೊರಹೊಮ್ಮಿದ ಭಾವ ಕಿರಣ..

ಬದುಕಿನ ಸಂಕಷ್ಟದಲ್ಲಿ ಹೆಬ್ಬಂಡೆಯಾಗಿ ಕಷ್ಟಕಾರ್ಪಣ್ಯಗಳನ್ನು ಹಿಮ್ಮೆಟ್ಟಿಸುವ ಶಕ್ತಿಯೇ ಭರವಸೆ. ಭರವಸೆ ಎಂತಹ ಹೋರಾಡುವ ಶಕ್ತಿ ತುಂಬುತ್ತದೆಯಂದರೆ ಫೇಸ್ಬುಕ್ಕಿನ ಒಂದು ಸಂದೇಶದಂತೆ ಎಷ್ಟೇ ಸೋತರೂ ಕುಸಿಯುವುದಿಲ್ಲ. ಹೆದರಿ ಓಡುವುದಿಲ್ಲ ಏಕೆಂದರೆ ನಾನು ನೂರು ಬಾರಿ ಗೆದ್ದವನಲ್ಲ, ಸಾವಿರ ಬಾರಿ ಸೋತವನು ಈ ರೀತಿಯಾಗಿ ಸಕಾರಾತ್ಮಕ ಚಿಂತನೆಯ ಓಂಕಾರದ ದ್ಯೋತಕವಾಗಿರುವ ಕಾರಣದಿಂದ ಇನ್ನೇನು ಬದುಕು ಮುಗಿಯಿತು ಎಂದು. ಸುಳಿಗಾಳಿಗೆ ಸಿಕ್ಕು ತರೆಗೆಲೆಯಂತೆ ಕಷ್ಟದ ಕುಲುಮೆಯಲ್ಲಿ ಬೆಂದು ಬಸವಳಿದವರಿಗೆ ಫಿನಿಕ್ಸ್‌ನಂತೆ. ಆಕಾಶದೆತ್ತರಕೆ ಮೇಲೆರುವ ತಾಕತ್ತೆ ಭರವಸೆ.
ಶಿವನಗೌಡ ಪೊಲೀಸ್ ಪಾಟೀಲ್ ಅವರ ಕವನ ಸಂಕಲನಕ್ಕೆ ಶರಣಬಸಪ್ಪ ಬಿಳೆಯಲಿ ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ