Advertisement

Category: ದಿನದ ಪುಸ್ತಕ

ಎಸ್. ದಿವಾಕರ್ ಅವರ ಹೊಸ ಪುಸ್ತಕದಿಂದ ಒಂದು ಪ್ರಬಂಧ

“ಘನಗಂಭೀರ ವಿಮರ್ಶೆಯಂತೆ ಭಾಸವಾಗುವ ಈ ಒಂದು ವಾಕ್ಯವನ್ನು ನೋಡಿ: “ಶ್ರೀಯುತರು ವಿಚಾರ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿದ್ದರೂ ಕೂಡ, ಪರಿಕಲ್ಪನೆಗಳನ್ನು ವಿವರಿಸುವಾಗ ಅವರು ಭಾಷೆಯನ್ನು ಉದ್ದೇಶಕ್ಕೆ ತಕ್ಕಂತೆ ದುಡಿಸಿಕೊಂಡರೂ ಕೂಡ, ಅವರ ಕೃತಿಗಳು ಕೆಲವು ಕಡೆ ನಿಜಕ್ಕೂ ಕಬ್ಬಿಣದ ಕಡಲೆ ಎನ್ನಬೇಕು.” ಇಲ್ಲಿನ ‘ಸಿದ್ಧಹಸ್ತ’, ‘ದುಡಿಸಿಕೊಂಡು’, ‘ಕಬ್ಬಿಣದ ಕಡಲೆ’ ಮುಂತಾದವನ್ನು ಎಷ್ಟು ಬಾರಿ ಓದಿಕೊಂಡರೂ ಯಾವುದೇ ರಸ ಹುಟ್ಟಲಾರದು.”

Read More

ಶ್ರುತಿ ಬಿ.ಆರ್‌. ಕವನ ಸಂಕಲನಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

“ಕಲ್ಲಾಗುವುದು ಶಾಪವೋ ಶಿಕ್ಷೆಯೋ ಆಗದೆ ತನ್ನ ಆಯ್ಕೆಯೇ ಆಗಬಹುದಾದ ಸಾಧ್ಯತೆಯನ್ನು ಹೇಳುತ್ತಲೇ ಕಲ್ಲಾಗುವುದು ಕೂಡ ಬಂಡಾಯದ ಒಂದು ಪರಿಯೂ ಹೌದು ಎನ್ನುವುದನ್ನು ಸೂಚಿಸುತ್ತಿದೆ. ಪಾಂಡವರು ಬಂದು ಬಾಳು ಕೊಡದ ಕಾರಣಕ್ಕಾಗಿ ಇನ್ನೂ ಮುಡಿ ಕಟ್ಟಿಲ್ಲದ ದ್ರೌಪದಿಯಾಗಲೀ, ರಾತ್ರಿ ಪಾಳಿಯಲ್ಲಿ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ಸೀತೆಯಾಗಲೀ, ಸೇಲ್ಸ್ ಗರ್ಲ್ ಆಗಿರುವ ರಾಧೆಯಾಗಲೀ ಧ್ವನಿಸುತ್ತಿರುವುದು ಹೆಣ್ಣಿನ ಮುಗಿಯದ ಹೋರಾಟವನ್ನೇ.”

Read More

ನೌಶಾದ್ ಜನ್ನತ್ತ್ ಬರೆದ ʼಕಡಮ್ಮಕಲ್ಲು ಎಸ್ಟೇಟ್ʼ ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗೆ

“ಮಧ್ಯೆ ಬಾಯಿ ಹಾಕಿದ ತಮ್ಮೆಗೌಡರು ನೋಡಿ ನಿಂಗೆಗೌಡ್ರೆ ನನಗೆ ಸದ್ಯಕ್ಕೆ ಇವರ ಜಮೀನು ತೆಗೆದುಕೊಳ್ಳುವ ದರ್ದು ಇಲ್ಲ.. ನನಗಿರುವ ನಲವತ್ತು ಎಕರೇನೇ ನನಗೆ ವ್ಯವಸಾಯ ಮಾಡಲು ಆಗುತ್ತಿಲ್ಲ. ಕೂಲಿಯವರ ಕಾಟ ಬೇರೆ, ಈ ವರ್ಷದ ಅಡಿಕೆಯೂ ಸಹ ವ್ಯಾಪಾರ ಆಗಿಲ್ಲ. ನಾವು ಕಾಕನಿಗೆ ಆ ತೋಟ ಮಾರಿದ್ದೇ ನಮಗೆ ಹೆಚ್ಚಾಗಿ ವ್ಯವಸಾಯ ಮಾಡಲು…”

Read More

ಅಬ್ದುಲ್‌ ರಶೀದ್‌ ಕಥಾಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮಾತುಗಳು

“ಈ ಕತೆಗಳಲ್ಲಿ ಕೆಲವು ಬಹುಕಾಲ ಬಾಳಿ ನಮ್ಮನ್ನು ಕೆದಕುವಂಥವು. ಆರಂಭದ ದಿನಗಳಲ್ಲಿಯೇ ರಶೀದ್ ಬರೆದ ‘ಮೂಸಾ ಮೊಯಿಲಿಯವರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು’ ಕತೆಯು ಕನ್ನಡದ ಶ್ರೇಷ್ಟ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣವೆಂದರೆ ತುಂಬಾ ಸಹಜವಾಗಿ ಅದು ಪಡೆದುಕೊಳ್ಳುವ ಸಾಂದ್ರತೆ ಮತ್ತು ಬಂಧ. ಮರಗಳಿಗೆ ಕೀಟನಾಶಕವನ್ನು,…”

Read More

ಚನ್ನಪ್ಪ ಕಟ್ಟಿ ಅನುವಾದಿಸಿದ ʼಸ್ಕಾರ್ಲೆಟ್ ಪ್ಲೇಗ್ʼ ಕಾದಂಬರಿ ಕುರಿತು ನಾಗರೇಖಾ ಗಾಂವಕರ ಬರಹ

“ಬಿಲ್ ಮತ್ತು ಗ್ರ್ಯಾನ್ಸರ್ ಕುಟುಂಬದ ಸಂತಾನಗಳು ಮುಂದೆ ವಿವಾಹವಾಗಿ ಹುಟ್ಟಿದ ಮಕ್ಕಳು ಇಂದು ಗ್ರ್ಯಾನ್ಸರ್ ಜೊತೆಯಾಗಿದ್ದಾರೆ. ಇಂದು ಹಣ್ಣು ಹಣ್ಣು ಮುದುಕ ಆತ ಮೊಮ್ಮಕ್ಕಳ ಜೊತೆ ಕಾಡುಮೇಡು ಅಲೆಯುತ್ತಾ ಆ ದಿನದ ಆಹಾರದ ಹುಡುಕಾಟದಲ್ಲಿದ್ದಾನೆ. ಮೊಮ್ಮಕ್ಕಳು ಅನಾಗರಿಕರಂತೆ ತಮ್ಮ ತಾತನ ಅಸಹಾಯಕತೆಯನ್ನು ಗೇಲಿ ಮಾಡಿ ನಗುತ್ತವೆ. ಆತ ಬಳಸುವ ಸುಶಿಕ್ಷಿತ ಭಾಷೆ ಅವರಿಗೆ ಅಪಥ್ಯವೆನಿಸುತ್ತದೆ. ಸರಳವಾಗಿ ತಮಗೆ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ