Advertisement

Category: ದಿನದ ಪುಸ್ತಕ

ವಾಸುದೇವ ನಾಡಿಗ್ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

ನಾಡಿಗರ ಕಾವ್ಯಪ್ರೇಮಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ. ಅವರನ್ನು ಓದಿದ ಪ್ರತಿಯೊಬ್ಬನಿಗೂ ಗೊತ್ತು, ಬದುಕನ್ನು ಬಂಧಿಸಿರುವ ಎಲ್ಲ ಭಾವಗಳನ್ನೂ ಧಾರಾಳವಾಗಿ ಸುರಿಸುವ ಈ ಭಾವುಕ ನಿಗೂಢ ಮೌನಕ್ಕೆ ಶರಣಾದರೆ ಮರೆಯಲಾಗದ ಕವನವೊಂದು ಮೈತಳೆಯುವುದು ಖಚಿತ. ಒಂದು ಅನೂಹ್ಯ ವಿಷಾದದಲ್ಲಿ ಮುಳುಗಿದರೆಂದರೆ ಬದುಕಿನ ಪರಮ ಸತ್ಯದ ಮಗ್ಗುಲೊಂದನ್ನು ನಮ್ಮತ್ತ ಹೊರಳಿಸಿಬಿಡುವ ಮಾಯಕಾರ. ಒಲವು ಎದೆಯನ್ನು ಹೊಕ್ಕರೆ ಅದನ್ನು ಮೊಗೆ ಮೊಗೆದು ಇತರರಿಗೆ ಸುರಿವ ಪ್ರೇಮಮಯಿ.
ವಾಸುದೇವ ನಾಡಿಗ್‌ ಬರೆದ ‘ಬಂದರಿಗೆ ಬಂದ ಹಡಗು’ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

Read More

ಪ್ರೊಫೆಸರ್ ಶಂಭು ಮಹಾಜನ್ ರವರ ಮಂಗಳೂರು ಉಪನ್ಯಾಸವು

ಕಂಪ್ಯೂಟರ್ ಗೆ ಕನ್ನಡ ಕಲಿಸಿದವರೆಂದೇ ಪ್ರಖ್ಯಾತರಾದ ಹಿರಿಯ ವಿದ್ವಾಂಸ ಕೆ.ಪಿ.ರಾವ್ ಅವರು ‘ವರ್ಣಕ’ ಎಂಬ ಹೊಸ ಕಾದಂಬರಿಯೊಂದನ್ನು ಬರೆದಿದ್ದಾರೆ. ಇದರ ಕಥಾ ನಾಯಕ ಪ್ರೊ.ಶಂಭು ಮಹಾಜನ್ ಅವರು ನಡೆಸುವ ಭಾಷಾಜ್ಞಾನದ ಅನ್ವೇಷಣೆಯೇ ಕಾದಂಬರಿಯ ಹೂರಣ. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಕುರಿತು ನೀಡುವ ಉಪನ್ಯಾಸವು ಕಾದಂಬರಿಯ ಆತ್ಮವೆಂದೇ ಹೇಳಬಹುದು.ಆ ಉಪನ್ಯಾಸದ ಪೂರ್ಣಪಾಠ ನಿಮ್ಮ ಓದಿಗಾಗಿ.

Read More

ಸಂಧ್ಯಾರಾಣಿ ಸಿನಿ ಪುಸ್ತಕಕ್ಕೆ ಅಬ್ದುಲ್‌ ರಶೀದ್‌ ಬರೆದ ಮುನ್ನುಡಿ

ಕಣ್ಣು ಮುಚ್ಚಿಕೊಂಡು ಓದುವ ಹಾಗಿದ್ದರೆ ಸಿನೆಮಾ ನೋಡಬೇಕಾಗಿಲ್ಲ ಅನ್ನುವಷ್ಟು ಕಣ್ಣಿಗೆ ಕಟ್ಟುವ ಬರವಣಿಗೆಗಳು ಅವು. ಬರೀ ಕಣ್ಣಿಗೆ ಮಾತ್ರವಲ್ಲ. ಸಿನೆಮಾದ ಸದ್ದುಗಳನ್ನು ಕಿವಿಗೆ, ಭಾವಗಳನ್ನು ಮನಸ್ಸಿಗೆ, ಕ್ಯಾಮರಾದ ಕೋನಗಳನ್ನು ಮಿದುಳಿಗೆ ಮತ್ತು ಸಿನೆಮಾ ಕೊನೆಗೆ ಉಂಟುಮಾಡುವ ತರ್ಕಗಳನ್ನು ವೈಚಾರಿಕತೆಗೆ ಅಕ್ಷರಗಳಲ್ಲೇ ದಾಟಿಸಿಬಿಡುತ್ತಿದ್ದರು. ಎಲ್ಲೂ ತರ್ಕಗಳಿಲ್ಲ, ತಪ್ಪುವ ಎಳೆಗಳಿಲ್ಲ. ಸಿನೆಮಾ ಹೇಳುವುದನ್ನು ಪರದೆ ಎಳೆದ ಹಾಗೆ ಕ್ವಚಿತ್ತಾಗಿ ಹೇಳಿ ಮುಗಿಸಿ ಮುಂದಿನ ಹದಿನೈದು ದಿನಗಳಿಗಾಗಿ ಕಾಯುವಂತೆ ಮಾಡುತ್ತಿದ್ದರು. ಸಂಪಾದಕನೂ, ಓದುಗರೂ ಏಕಪ್ರಕಾರವಾಗಿ ಕಾಯುತ್ತಿದ್ದ ಕೆಲವೇ ಬರವಣಿಗೆಗಳಲ್ಲಿ ಸಂಧ್ಯಾರಾಣಿ ಅವರದ್ದೂ ಒಂದಾಗಿತ್ತು.
ಎನ್. ಸಂಧ್ಯಾರಾಣಿ ಬರೆದ ‘ಸಿನಿ ಮಾಯಾಲೋಕ’ ಪುಸ್ತಕಕ್ಕೆ ಅಬ್ದುಲ್‌ ರಶೀದ್‌ ಬರೆದ ಮುನ್ನುಡಿ

Read More

ಪ್ರೀತಿ ಎಂಬ ಸಿಹಿಗುಳಿಗೆ ಕೊಡುವ ಚೇತನ

ಅವರು ಯಾವತ್ತು ಎಲ್ಲಿಗೇ ಬಂದರೂ ಇದುವರೆಗೆ ಅವರ ಮ್ಲಾನವಾದ ಮುಖವನ್ನು ನಾನು ನೋಡೇ ಇಲ್ಲ. ಯಾವಾಗಲೂ ನಗ್ತಾ ನಗ್ತಾ ಇರ್ತಾರೆ. ಅವರು ಮತ್ತು ಅವರ ಗೆಳತಿ ಸಂಧ್ಯಾ ರಾಣಿ ಯಾವುದೇ ಸಮಾರಂಭಕ್ಕೆ ಬಂದರೂ ಅವರು ಮುಖ ಕಳೆಗುಂದಿದ್ದನ್ನು ನಾನು ನೋಡೇ ಇಲ್ಲ. ಅವರು ಬಂದರೆ ಆ ವಾತಾವರಣವೆಲ್ಲ ಲೈಟ್ ಹೊತ್ತಿಸಿದಂತೆ… ಒಂದು ನೂರು ಕ್ಯಾಂಡಲ್ ಬಲ್ಬ್ ಹೊತ್ತಿಸಿದ ಹಾಗೆ! ಅವರನ್ನು ನೋಡ್ತಿದ್ದರೆ ನಮಗೂ ಆ ಉಲ್ಲಾಸ ವರ್ಗವಾಗಿ ಬಿಡತ್ತೆ. ಅದೇ ರೀತಿಯ ಅನುಭವ ಅವರ ಸಾಸಿವೆ ತಂದವಳು ಪುಸ್ತಕ ಓದುವಾಗಲೂ ಆಗಿತ್ತು.
ಬಿ.ವಿ. ಭಾರತಿ ಅವರ ‘ಎಲ್ಲಿಂದಲೋ ಬಂದವರು’ ಕೃತಿಗೆ ಟಿ.ಎನ್. ಸೀತಾರಾಮ್ ಬರೆದ ಮುನ್ನುಡಿ

Read More

ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದ ಅಭಿವ್ಯಕ್ತಿ

ಶೋಭಾ ನಾಯಕ ಮೊದಲ ಬಾರಿಗೆ ಅದು ಗಂಡಿನದು ಹೇಗೋ ಹಾಗೆಯೇ ಹೆಣ್ಣಿನದೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಇನ್ನೂ ಒಳಗೆ ಹೋಗಿ ಮಾತನಾಡುವುದಾದರೆ ಅಲ್ಲಿನ ಶಯನದ ಒಡೆತನ ಕೇವಲ ಗಂಡನದು ಎಂಬ ಗಂಡಾಳ್ವಿಕೆಯ ನಡಾವಳಿಯನ್ನು ಮುರಿಯಲೆತ್ನಿಸಿದ್ದಾರೆ. ಈ ನಡಾವಳಿಗಳನ್ನು ಪ್ರಶ್ನಿಸಿದವರು ಗಂಡುಬೀರಿಯರಾಗಿ ಕಾಣುವ ಅಪಾಯಗಳು ಸದಾ ಇದ್ದೇ ಇರುತ್ತವೆ. ಡಾ. ವಿನಯಾ ನಾಯಕ ಮುನ್ನುಡಿಯ ಮಾತುಗಳಲ್ಲಿ ಮುದ್ದುಪಳನಿಯ ‘ರಾಧಿಕಾ ಸಾಂತ್ವಾನಂ’ ಕೃತಿ ಕುರಿತು ಸರಿಯಾಗಿಯೇ ಪ್ರಸ್ತಾಪಿಸಿದ್ದಾರೆ.
ಡಾ. ಶೋಭಾ ನಾಯಕ ಅವರ ‘ಶಯ್ಯಾಗೃಹದ ಸುದ್ದಿಗಳುʼ ಕವನ ಸಂಕಲನದ ಕುರಿತು ಡಾ. ಎಚ್‌.ಎಲ್. ಪುಷ್ಪ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ