Advertisement

Category: ದಿನದ ಪುಸ್ತಕ

ಜಯಂತ ಕಾಯ್ಕಿಣಿ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

“ಅದೆಷ್ಟು ಮಾತಿನ ಮಲ್ಲ ! ಮಾತೇ ಮರೆತು ಮುಂಬೈ ಗಲ್ಲಿ ಗಲ್ಲಿ ಸುತ್ತುತ್ತಾನೆ. ಪಿಟ್ಸ್‌ ಬಂದ ವ್ಯಕ್ತಿಯ ಮುಷ್ಟಿಯೊಳಗಿನ ಮುದ್ದೆಯಾದ ಹಾಳೆಯಲ್ಲಿ ಪುಟ್ಟ ಮಗುವಿನ ಪಾದದ ಗುರುತನ್ನು ಪತ್ತೆ ಹಚ್ಚಿ ಆಗುವ ಅನಾಹುತ ತಪ್ಪಿಸುತ್ತಿದ್ದರೆ, ಸುಮ್ಮನೇ ಕಣ್ಣಾಲಿಗಳನ್ನು ತೇವವಾಗುತ್ತದೆ. ಹಾಗೆ ಮುಂಬೈ ಸುತ್ತಿಸಿ ಮತ್ತೆ ಸೀದಾ ನಮ್ಮ ಮಲೆನಾಡಿನ ಸೀಮೆಗೆ ಹಾಜರಾದ ಕಾಯ್ಕಿಣಿಯವರು ಇಡೀ ಕುಮಟಾ, ಅಂಕೋಲಾ, ಕಾರವಾರ, ಯಲ್ಲಾಪುರ, ಶಿರಸಿಗಳನ್ನು ಸುತ್ತಿಸುತ್ತ ಕಥೆ ಹೇಳುತ್ತ ಹೋಗುತ್ತಾರೆ.”
ಜಯಂತ ಕಾಯ್ಕಿಣಿ ಕಥಾ ಸಂಕನಲ “ಬಣ್ಣದ ಕಾಲು” ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಕಲ್ಲೇಶ್ ಕುಂಬಾರ್ ಕಥಾಸಂಕಲನದ ಕುರಿತು ವೇದಾಂತ ಏಳಂಜಿ ಬರಹ

“ಗ್ರಾಮೀಣ ಭಾಗದ ಜನಜೀವನವನ್ನು ಆರಂಭದ ಎರಡು ಕಥೆಗಳಲ್ಲಿ ತೋರ್ಪಡಿಸುತ್ತಲೇ ಜಾಗತೀಕರಣದ ಸಮಸ್ಯೆಗಳಿಗೆ ಹಾರೊಗೇರಿ ತೆರೆದುಕೊಳ್ಳುವ ಕಥನಗಾರಿಕೆ ವಿಶಿಷ್ಟವಾದದ್ದು. ಆಧುನಿಕ ಕಾಲದಲ್ಲೂ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ‘ನಿಂದ ನಿಲುವಿನ ಘನ’ ಕಥೆಯ ಮಾನಿಂಗಯ್ಯನಂತವರು ದಲಿತ ಮಹಿಳೆಯರ ಮೇಲೆ ನೀರೆರೆಚುವ ಪದ್ಧತಿಯು ಆತನ ರಾಕ್ಷಸ ಸ್ವಭಾವ ತೋರುತ್ತದೆ. ಮೇಲ್ವರ್ಗದ ಈ ಸಂಪ್ರದಾಯವನ್ನು ರಮೇಶನ ಪ್ರಭಾವದಿಂದ ಕೆಂಚವ್ವಳು ನೀರೋಕುಳಿ ಆಚರಣೆಗೆ ವಿರೋಧಿಸುತ್ತಾಳೆ.”
ಕಲ್ಲೇಶ್ ಕುಂಬಾರ್ ಬರೆದ‌ ‘ನಿಂದ ನಿಲುವಿನ ಘನʼ ಕಥಾಸಂಕಲನದ ಕುರಿತು ಡಾ.ಎಂ.ವೇದಾಂತ ಏಳಂಜಿ ಬರಹ

Read More

‘ಚೆನ್ನಭೈರಾದೇವಿ’ಯೆಂಬ ಧೀರೋದಾತ್ತ ಕಥಾನಕ

“ಒಂದು ಕತೆಗೆ ಚರಿತ್ರೆಯ ಹಿನ್ನಲೆಯಿದ್ದಾಗ ನೆಲದ ಮಹಿಮೆಯಿದ್ದಾಗ ಹೀಗೆ ಅದು ಮನಸ್ಸನ್ನು ತಟ್ಟುತ್ತದೆ ಎಂಬುದು ಮೇಲ್ನೋಟಕ್ಕೆ ಅನ್ನಿಸಿದರೂ ಬರಹಗಾರ ತನ್ನ ಸರಳ ಸಭ್ಯ ಹಾಗೂ ಆಕರ್ಷಕ ಶೈಲಿಯಿಂದ ಓದುಗರ ಹೃದಯಕ್ಕೆ ಇಳಿಯುವಂತೆ ಮಾಡುತ್ತಾನೆ ಅನ್ನುವುದು ನನಗಂತೂ ನಿಜ. ಹಾಗಿಲ್ಲದಿದ್ದರೆ ಚರಿತ್ರೆಯ ಪುಸ್ತಕಗಳೆಲ್ಲವೂ ಹೀಗೇ ಪ್ರಿಯವೆನಿಸಬೇಕಿತ್ತು. ಆದರೆ ಮತ್ತೆ ಮತ್ತೆ ಚರಿತ್ರೆಯನ್ನು ಎಲ್ಲರೂ ಕತೆಯ ರೂಪದಲ್ಲಿ ಹೇಳಲು ಸಮರ್ಥರಲ್ಲ ಅನ್ನಿಸುವುದು ಅತ್ಯಪರೂಪವಾಗಿ ಬರುವ ಇಂತಹ ಪುಸ್ತಕಗಳಿಂದ.”
ಡಾ. ಗಜಾನನ ಶರ್ಮ ಬರೆದ ಚೆನ್ನಭೈರಾದೇವಿ ಕಾದಂಬರಿ ಕುರಿತು ಪ್ರಿಯಾ ಭಟ್‌ ಕಲ್ಲಬ್ಬೆ ವಿಶ್ಲೇಷಣೆ

Read More

ಅನುಭಾವ ಲೋಕದ ಮಹಾಬೆಳಗು

“ಎಷ್ಟು ಸರಳವಾದ ಪದಗಳನ್ನು, ಪೋಣಿಸುತ್ತಾ ತನ್ನ ನುಡಿ ರೂಪಕವನ್ನು ಕಟ್ಟಿಕೊಡುತ್ತಿದ್ದಾಳೆ ಈ ಲಲ್ಲಾ. ಹಕ್ಕಿ ಬೆಳಗಾದಾಗ ಗೂಡು ಬಿಟ್ಟು ತನ್ನ ನಿತ್ಯದ ಬದುಕಿಗಾಗಿ ಹೇಗೆ ತನ್ನ ರೆಕ್ಕೆಯನ್ನು ಮಾತ್ರ ನಂಬಿ ಹೋಗುತ್ತದೆಯೋ ಹಾಗೆ ಅಂತರಂಗದ ಗೆಳೆಯನನ್ನು ನಿನಗೆ ಬೇಕಾದ ಮಿತ್ರನನ್ನು ಹುಡುಕಿಕೋ ಎಂಬ ಸಾಲು ಅವಳ ಮನಸ್ಸಿನ ಹುಡುಕಾಟದ ತೀವ್ರತೆಯನ್ನು ತಿಳಿಸುತ್ತವೆ.”
ಡಾ. ವಿಜಯಾ ಗುತ್ತಲ ಅನುವಾದಿಸಿದ ಕಾಶ್ಮೀರಿ ಕವಯತ್ರಿ ಲಲ್ಲಾ ದೇಡ್‌ ಕವಿತೆಗಳ ಸಂಗ್ರಹ ‘ಎಲ್ಲ ಎಲ್ಲೆ ಮೀರಿ’ ಕುರಿತು ಪದ್ಮಶ್ರೀ ಎಂ ಬರಹ

Read More

ಮನಃಶಾಸ್ತ್ರೀಯ ಗುಣದ ಕಾದಂಬರಿ!

“ಮಗನೂ ಕೂಡ ಅಪ್ಪನಂತೆ ಮಿಲ್ಟ್ರಿಗೆ ಸೇರಿಬಿಡುತ್ತಾನೋ, ದಾರಿ ತಪ್ಪುತ್ತಾನೋ ಎಂಬ ಆತಂಕದಲ್ಲಿ ತಾಯಿ ಶಾಂತಕ್ಕನ ಜೀವನ ತೊಳಲಾಡುತ್ತಾ ಕಾಯುತ್ತಿರುತ್ತದೆ. ಶಾಂತಕ್ಕ ತನಗೆ ತಾನೇ ಸಮಾಧಾನಪಡಿಸಿಕೊಳ್ಳುವ “ಕಣ್ಣಲ್ಲಿ ಎರಡುಹನಿ ನೀರ್ ಇರುವತನಕ ಮಗನನ್ನು ಕಟ್ಟಿ ಹಾಕುತ್ತೇನೆ.” ಎಂಬ ಸಮಾಧಾನದ ಮಾತು ಅಂತಃಕರಣ ಕಲಕುತ್ತದೆ. ಪಿತೃ ಪ್ರಧಾನ ಕುಟುಂಬಗಳು ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಮಾತೃ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ.”
ನಟರಾಜ್‌ ಹುಳಿಯಾರ್‌ ಬರೆದ ‘ಕಾಮನ ಹುಣ್ಣಿಮೆ’ ಕಾದಂಬರಿ ಕುರಿತು ಆಲೂರು ದೊಡ್ಡನಿಂಗಪ್ಪ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ