Advertisement

Category: ಪ್ರವಾಸ

ಎರಡು ತಪ್ಪೊಪ್ಪಿಗೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

“ನೋಡು, ಡ್ಯಾಡಿ, ಬದಲಾವಣೆ ಅಂದರೆ, ಪ್ರಧಾನ ಮಂತ್ರಿಗಳ, ಸರ್ಕಾರಗಳ, ರಾಜಕೀಯ ಪಕ್ಷಗಳ ಬದಲಾವಣೆ ಅಲ್ಲ. ನಮ್ಮ, ನಮ್ಮ ಮನೆ, ಮನಸ್ಸುಗಳಲ್ಲಿ ಆಗುತ್ತಿರುವ ಬದಲಾವಣೆಗಳು. ಅದಕ್ಕೆ ನಮ್ಮ ಪ್ರತಿರೋಧ, ಹೊಂದಾಣಿಕೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯ. ಮಕ್ಕಳ ಲಾಲನೆ, ಪಾಲನೆ ಹೆಂಗಸರ ಕರ್ತವ್ಯ ಮಾತ್ರ ಎಂಬ ಧೋರಣೆಯೇ ಬದಲಾಗಬೇಕು, ಬದಲಾಗುತ್ತಿದೆ.”
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

Read More

ಆಮ್‌ಸ್ಟರ್‌ಡ್ಯಾಮ್‌ನ ಕಾಲುವೆಗಳಲ್ಲಿ ವಿಹಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಗೈಡ್, `ಇಲ್ಲಿಗೆ ಬರುವ ಕೆಲವು ಉತ್ಸಾಹಿ ಪ್ರವಾಸಿಗರು ರಾತ್ರಿ ನಗರದಲ್ಲಿ ಕಳೆದುಹೋಗುತ್ತಾರೆ. ಒಂದೆರಡು ದಿನಗಳಾದ ಮೇಲೆ ತಮ್ಮ ಇರುವಿಕೆಯ ಸ್ಮೃತಿಗೆ ಹಿಂದಿರುಗಿದಾಗ ತಾವಿರುವ ಹೋಟಲಿಗೆ ಹಿಂದಿರುಗಿಬರುತ್ತಾರೆ. ನೀವ್ಯಾರಾದರೂ ಕಳೆದುಹೋಗುವುದಾದರೆ, ರಾತ್ರಿ ನಿಮ್ಮ ಹೋಟಲ್‌ನಿಂದ ಹೊರಕ್ಕೆ ಬಂದರೆ ಸಾಕು, ಉಳಿದ ಕೆಲಸಗಳು ತನಗೆತಾನೇ ನಡೆಯುತ್ತವೆ. ನೀವ್ಯಾರಾದರೂ ತಯಾರಿದ್ದರೆ ನಾನು ಕರೆದುಕೊಂಡು ಹೋಗುತ್ತೇನೆ, ಆದರೆ ಹಿಂದಕ್ಕೆ ಕರೆದುತರುವ ಗ್ಯಾರಂಟಿ ಕೊಡಲಾರೆ.
ಆಮ್‌ಸ್ಟರ್‌ಡ್ಯಾಮ್‌ನ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ ನಿಮ್ಮ ಓದಿಗೆ

Read More

ಸ್ವಿಟ್ಜರ್ಲೆಂಡ್ ಮತ್ತು ಜಗತ್ತಿನ ಕಪ್ಪು ಹಣ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ದೀರ್ಘ ಕಾಲದಿಂದಲೂ ಸ್ವಿಟ್ಜರ್ಲೆಂಡ್ ತಟಸ್ಥತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಜಗತ್ತಿನ ಎಲ್ಲಾ ದೊಡ್ಡ ಬ್ಯಾಂಕ್‌ಗಳ ಮುಖ್ಯಕೇಂದ್ರಗಳು ಇಲ್ಲಿ ನೆಲೆಗೊಂಡಿದ್ದು ಸ್ವಿಸ್ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರ ಅಭಿವೃದ್ಧಿಯನ್ನು ಹೊಂದಿದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹದ ಎರಡನೆಯ ಭಾಗ ಇಲ್ಲಿದೆ

Read More

ಶಿಕ್ಷಣದ ರೀತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಮಗುವಿನ ಸಾಮರ್ಥ್ಯ, ಒಲವು, ಮನೋಧರ್ಮಗಳನ್ನು ತಿಳಿಯುವ ಭಾಷೆ, ಗಣಿತಕ್ಕೆ ನಂತರದ ಸ್ಥಾನ, ಮೊದಲು ಮಗು ಭಾವನಾತ್ಮಕವಾಗಿ ಹೇಗಿದೆಯೆಂದು ತಿಳಿದು, ಅಂದಾಜು ಮಾಡಿ ಪೋಷಕರಿಗೆ ತಿಳಿಸುತ್ತಾರೆ. ತನ್ನ ವಯಸ್ಸಿನವರೊಡನೆ ಹೇಗೆ ಸಂವಹನ ಮಾಡುತ್ತದೆ, ಒಂದು ತಂಡದ ಸದಸ್ಯನಾಗಿ ಹೇಗೆ ಕೆಲಸ ಮಾಡುತ್ತದೆ, ನೆರವು ನೀಡಬಲ್ಲದೆ, ನೆರವು ಪಡೆಯಬಲ್ಲದೆ, ಇತರರ ಸಾಮರ್ಥ್ಯವನ್ನು ಗೌರವಿಸಬಲ್ಲದೆ, ತನ್ನ ನಿಲುವನ್ನು ಇತರರ ಮೇಲೆ ಹೇರದೆ ತರ್ಕಬದ್ಧವಾಗಿ ವಿವರಿಸಬಲ್ಲದೆ, ತಪ್ಪನ್ನು ತಿದ್ದಿಕೊಳ್ಳಬಲ್ಲದೆ, ನಿರಾಶೆ, ವೈಫಲ್ಯಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಅನ್ಯ ಸಂಸ್ಕೃತಿ, ಹಿನ್ನೆಲೆಯಿಂದ ಬಂದ ಮಕ್ಕಳನ್ನು ಹೇಗೆ ಕಾಣುತ್ತದೆ…
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ”

Read More

ಭೂಮಿಯ ಮೇಲಿನ ಸುಂದರ ಸಮೃದ್ಧ ದೇಶ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಈಗ ನಾನೊಬ್ಬನೆ ಹೊರಗಿದ್ದು ನಮ್ಮ ಗುಂಪಿನ ಎಲ್ಲರೂ ಒಳಗಿದ್ದರು. ನಮ್ಮ ಗೈಡ್ ಎಲ್ಲರೂ ಹೋಗುವುದನ್ನು ದೃಢಪಡಿಸಿಕೊಂಡು ಹಿಂದೆಬರುತ್ತಿದ್ದನು. ನನ್ನ ಸಮಸ್ಯೆಯನ್ನು ನೋಡಿದ ಗೈಡ್, `ಕೆಳಗಡೆ ಬಗ್ಗಿಕೊಂಡು ಬಂದುಬಿಡಿ ಸರ್’ ಎಂದ. ಒಂದೆರಡು ಕ್ಷಣ ಸುತ್ತಲೂ ನೋಡಿ ಕೊನೆಗೆ ನೆಲದಲ್ಲಿ ಕುಳಿತುಕೊಂಡು ಮಗುವಿನಂತೆ ಕಾಲುಗಳನ್ನು ಬಿಟ್ಟು ದೇಖಿಕೊಂಡು ಒಳಕ್ಕೆ ಹೋಗಿಬಿಟ್ಟೆ. ಹಿಂದೆ ಇದ್ದ ಇಬ್ಬರು ಯುರೋಪಿಯನ್ ಮಹಿಳೆಯರು ಕಣ್ಣುಗಳನ್ನು ಸಣ್ಣದಾಗಿಸಿಕೊಂಡು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನ ಕಡೆಗೆ ನೋಡಿದರು. ಅಲ್ಲೆಲ್ಲ ಕ್ಯಾಮರಾಗಳಿದ್ದರೂ ಅವು ನನ್ನನ್ನು ಕ್ಷಮಿಸಿಬಿಟ್ಟಿದ್ದವು ಎನಿಸುತ್ತದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ