Advertisement

Category: ಸಂಪಿಗೆ ಸ್ಪೆಷಲ್

ಬದುಕನ್ನು ಅರಸಿಕೊಂಡು ಓಡುತ್ತಲೇ ಇರಬೇಕು

ರೆಹಮಾನಿ ಅವರು ಉಕ್ರೇನ್‍ ನಲ್ಲಿ ನೆಲೆಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಂದು ವರ್ಷವೂ ಭರ್ತಿಯಾಗಿದೆಯೋ, ಇಲ್ಲವೋ, ಅಲ್ಲಿ ಯುದ್ಧದ ಬಿಸಿಯೇರುತ್ತಿರುವುದು ಕಾಣಿಸಿತು. ತಾವು ಬಯಸಿದ ಬದುಕು ಅಲ್ಲಿಯೂ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಮತ್ತೆ ಅಲ್ಲಿಂದ ಹೊರಡಲೇಬೇಕಾಯಿತು. ರಷ್ಯಾ ಪಡೆಗಳು ಸ್ಫೋಟಿಸುತ್ತಿದ್ದ ಬಾಂಬುಗಳ ಸದ್ದಿನ ನಡುವೆಯೇ ಅವರು ಆ ದೇಶವನ್ನು ತೊರೆದರು. ಯಾರದೋ ಯುದ್ಧ ದಾಹಕ್ಕಾಗಿ ಬದುಕು ಕಳೆದುಕೊಳ್ಳುತ್ತಿರುವವರ ಕತೆಗಳಿಗೆ ದನಿಯೆಲ್ಲಿದೆ.

Read More

ಮಹನೀಯ ಮದ್ಲೆಗಾರರ ಪ್ರಭಾವಲಯ

ಯಕ್ಷಗಾನ ಭಾಗವತಿಕೆಯಲ್ಲಿ ಮದ್ದಳೆಯದ್ದು ಪ್ರಧಾನ ಪಾತ್ರ. ಬಲಿಪ ನಾರಾಯಣ ಭಾಗವತರಿಗೆ ಭಾಗವತಿಕೆ ಕಲಿಯುವುದಕ್ಕೆ ನೆರವಾದ ಮದ್ದಳೆಗಾರರು ಪ್ರಮುಖರೇ.  ಮದ್ದಳೆಗಾರರಾದ  ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಅವರ ಪ್ರೋತ್ಸಾಹ, ತಿದ್ದುವಿಕೆಯು ಬಲಿಪರ ಭಾಗವತಿಕೆ ಶೈಲಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಪ್ರಸ್ತುತ ಸರಣಿಯಲ್ಲಿ ಆ ಬಗ್ಗೆ ಬಲಿಪರು ಹೇಳಿಕೊಂಡಿದ್ದಾರೆ. ‘ಬಲಿಪ ಮಾರ್ಗ’ದಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರಹ  ಇಲ್ಲಿದೆ. 

Read More

ಸುದ್ದಿಗಾರ ಕೆಂಪಣ್ಣ…

ಕೆಂಪಣ್ಣ ಭಜನೆಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಅವನ ಭಜನೆಯ ಬೈಠಕ್ ಒಂದು ರೀತಿ ಮತ್ತೇರಿಸುತ್ತಿತ್ತು. ಅವನು ಹಾಡಲು ಸುರುಮಾಡಿದರೆ ಹಿಮ್ಮೇಳದವರು ತಲಿ ಕೆರೆದುಕೊಳ್ಳುತ್ತಿದ್ದರು. ಏಕೆಂದರೆ ಅವನು ಹೇಳಿದ ಪದಗಳನ್ನು ಹಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅವನ ಪದಗಳೋ ರೈಲು ಬಂಡಿಯಂತೆ ಉದ್ದವಾಗಿರುತ್ತಿದ್ದವು. ‘ಬೆಳ್ಳನೇ ಎರೆಡೆತ್ತು ಬೆಳ್ಳಿಯ ಬಾರುಕೋಲು ಕೇರಿಯ ದಂಡಿಯ ಹೊಲಕ್ಕೆ… ಕೆರೆಯ ದಂಡೆಯ ಹೊಲಕ್ಕೆ… ‘ ಎಂದು ಚೆಂದವಾಗಿ ಪದ ಹಾಡಹತ್ತಿದರೆ ಬಸವಣ್ಣನ ಗುಡಿಯೊಳಗಿನ ಕಲ್ಲಿನ ಬಸವನು ಕೂಡಾ “ಕೆಂಪಣ್ಣ ಹೊಲಕ್ಕೆ ನಾನು ಬರ್ತೀನಿ” ಅಂತಾ ಜೊತೆಯಾಗುತ್ತಿತ್ತು.

Read More

ಅಳುವ ಕಡಲಿನ ನಗೆಯ ದೋಣಿ

ಕರ್ನೊ ಕಂಪೆನಿ ಒದಗಿಸಿದ ಅವಕಾಶ ಚಾಪ್ಲಿನ್ ನ ಬದುಕಿಗೆ ದೊಡ್ಡ ತಿರುವು ಆಧಾರ ನೀಡಿತು. ಲಂಡನ್ನಿನ ಲಾಂಬೆತ್ ಪ್ರದೇಶದ “ಗ್ಲೇನ್ ಷಾ ಮ್ಯಾನ್ಷನ್ಸ್” ಎನ್ನುವ ಬಹುಮಹಡಿ ವಸತಿಯ 15 ನೆಯ ನಂಬ್ರದ ಫ್ಲಾಟ್ ಮೊದಲ ಸ್ವಂತದ ಬಿಡಾರವಾಯಿತು. ಚಾರ್ಲಿಯ ತಾಯಿಯ ಮೊದಲ ಸಂಗಾತಿಯ ಮಗ ಸಿಡ್ನಿ ಹಾಗು ಚಾರ್ಲಿ ಇಲ್ಲಿ ಜೊತೆಗೆ ಇರಲಾರಂಭಿಸಿದರು. ಮೂರನೆಯ ಮಹಡಿಯಲ್ಲಿದ್ದ ಈ ಮನೆಯನ್ನು “ಬದುಕಿನುದ್ದಕ್ಕೂ ಮೆಲುಕುಹಾಕುವ ಸ್ವರ್ಗ” ಎಂದು ಚಾರ್ಲಿ ಚಾಪ್ಲಿನ್ ಹೇಳಿಕೊಂಡದ್ದಿದೆ.

Read More

ಜಗಳ ನಮ್ಮ ಮನೆದೇವರು

ಜಗಳಗಳೆಂದರೆ ಎಲ್ಲರಿಗೂ ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿಯಾದರೂ ಇಷ್ಟವಾಗುತ್ತದೆ. ಹಸಿವು ನಿದ್ದೆಯ ಅಗತ್ಯವಿದ್ದಂತೆ, ಮನಸ್ಸಿಗೆ ಒಂದಿಷ್ಟು ಜಗಳದ ಅವಶ್ಯಕತೆಯೂ ಇದೆಯೇನೋ. ಆದರೆ ಅದು ಮನುಷ್ಯನ ಬದುಕಿಗೇ ಕುತ್ತು ತಂದಾಗ ಸಮಸ್ಯೆಗಳು ಬೆಳೆಯಲಾರಂಭಿಸುತ್ತವೆ. ಗುಬ್ಬಿಯನ್ನು ಕಂಡರೆ ಅಕ್ಕರೆ ಮೂಡಿದಂತೆ, ಬೆಕ್ಕುಗಳನ್ನು ಕಂಡರೆ ಮುದ್ದು ಬಂದಂತೆ, ಜಗಳಗಳಿಗೂ ಸಾಮಾನ್ಯವಾದುದೊಂದು ಕಾರಣವಿದೆಯೇ.. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ