Advertisement

Category: ಸಂಪಿಗೆ ಸ್ಪೆಷಲ್

ನಿಂತ ಶಹನಾಯಿಯ ನಾದ: ಕಣವಿಯವರ ಕವಿತೆಯೊಂದರ ಕುರಿತು

ಸೃಷ್ಟಿಯ ನಿಗೂಢತೆಯ ಬಗ್ಗೆ ಸದಾ ವಿಸ್ಮಯವನ್ನು, ಕುತೂಹಲವನ್ನೂ ಹೊಂದಿದ್ದ, ಆ ವಿಸ್ಮಯವನ್ನು ಕಾವ್ಯಸಾಲುಗಳಲ್ಲಿ ಪ್ರತಿಬಿಂಬಿಸುತ್ತಿದ್ದ, ಹಿರಿಯ ಕವಿ ಚೆನ್ನವೀರಣ ಕಣವಿ ತೀರಿಕೊಂಡಿದ್ದಾರೆ. ಚೆಂಬೆಳಕಿನ ಕವಿ, ಸುನೀತಗಳ ಸಾಮ್ರಾಟ, ನಾಡೋಜ ಮುಂತಾದ ಅನೇಕ ಬಿರುದುಗಳು ಅವರಿಗೆ ಸಂದಿದ್ದರೂ ಅವರು, ಕನ್ನಡ ಭಾವಗೀತೆ ಪರಂಪರೆಯ ಶ್ರೇಷ್ಟ ಕವಿಗಳಲ್ಲಿ ಒಬ್ಬರು. ಅವರ ಕಾವ್ಯದಲ್ಲಿ ಭಾವತೀವ್ರತೆಗೇ ಆದ್ಯತೆ.
‘ಪೃಥ್ವಿ ತೂಗಿದೆ ಸೂರ್ಯಚಂದ್ರರಿಗೂ ಜೋಕಾಲಿ’ ಎಂದು ಬರೆದ ಕವಿ ಅವರು. ಅವರು ಬರೆದ  ‘ಬಿಸ್ಮಿಲ್ಲಾರ ಶಹನಾಯಿ ವಾದನ ಕೇಳಿ’ ಕವಿತೆಯ ಕುರಿತು ಲೇಖಕಿ…

Read More

ನಮ್ಮೂರ ಆಸ್ಪತ್ರೆಯ ನೆನಪುಗಳು

ನಾನೆಷ್ಟೇ ಬೇಡವೆಂದುಕೊಂಡರೂ ನಮ್ಮ ಶಾಲೆಯ ಕಡೆಯಿಂದ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ಯುತ್ತಿದ್ದರು. ಸಾಲದ್ದಕ್ಕೆ ಅದು ಬೇರೆ ಚುಚ್ಚುಮದ್ದುಗಳ ಕಾಲ! ಸರ್ಕಾರೀ ಶಾಲೆಯಾದ್ದರಿಂದ, ಸರ್ಕಾರದ್ದೇ ನಿರ್ದೇಶನದ ಮೇರೆಗೆ ಹೇಳದೇ ಕೇಳದೇ ನಮ್ಮನ್ನು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ನಡೆಸಿಕೊಂಡುಹೋಗಿ ವೈದ್ಯರ ಕೋಣೆಯ ಹೊರಗೆ ಸಾಲಾಗಿ ನಿಲ್ಲಿಸಿಬಿಡುತ್ತಿದ್ದರು. ನನಗಂತೂ ಈ ಇಂಜಕ್ಷನ್ ಎಂದರೆ ಇನ್ನಿಲ್ಲದ ಭಯ. ಎಂದಿನಂತೆ ನಡೆಯುತ್ತಿದ್ದ ತರಗತಿಯ ಮಧ್ಯೆ ಇದ್ದಕ್ಕಿದ್ದಂತೆ ಒಳಪ್ರವೇಶಿಸಿದ ಮುಖ್ಯಶಿಕ್ಷಕರು ‘ಎಲ್ಲರೂ ಸಾಲಾಗಿ ಆಸ್ಪತ್ರೆಯ ಕಡೆ ನಡೆಯಿರಿ. ಯಾರೂ ಗಲಾಟೆ ಮಾಡಬಾರದು’ ಎಂದು ಉಗ್ರ ದನಿಯಲ್ಲಿ ಘೋಷಿಸಿಬಿಟ್ಟರು.

Read More

ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ!

ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿ ಇಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ

Read More

‘ದೆವ್ವವಿದೆ ಎಂದು ಸಾಬೀತು ಮಾಡಲಾಗದು, ಇಲ್ಲವೆಂದೂ ಹೇಳಲಾಗದು’

ಮೊಲದ ಕಾಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡಿಕೊಂಡಿದ್ದರೆ ಒಳ್ಳೆಯ ಕತೆ ಬರೆಯಲಾಗುವುದಿಲ್ಲ ಎನ್ನುವ ಲೇಖಕ ಐಸಾಕ್ ಬಾಷೆವಿಸ್ ಸಿಂಗರ್ ಬರೆದಿದ್ದು ಯಿದ್ದಿಷ್ ಭಾಷೆಯಲ್ಲಿ.  ಜಗತ್ತಿನಲ್ಲಿ ಅತೀ ಕಡಿಮೆ ಜನರು ಮಾತನಾಡುವ ಭಾಷೆಯಿದು. ಆದರೆ ಇದೇ ಭಾಷೆಯಲ್ಲಿ ಅವನು ಸೃಷ್ಟಿಸಿದ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಅನುವಾದದ ಮೂಲಕವೇ ಬಹುದೊಡ್ಡ ಓದುಗ ಸಮುದಾಯ ಅವನಿಗೆ ಒಲಿಯಿತು. ನೊಬೆಲ್ ಪ್ರಶಸ್ತಿಯೂ ಬಂತು.  1968ರಲ್ಲಿ ಮತ್ತೊಬ್ಬ ಲೇಖಕ ಹೆರಾಲ್ಡ್ ಪ್ಲೆಂಡರ್  ‘ಪ್ಯಾರಿಸ್ ರಿವ್ಯೂ’ ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ಸಿಂಗರ್…

Read More

ನಡಿಗೆಯ ದಾರಿ ಕರುಣಿಸಿದ ದುಪ್ಪಟ್ಟು ಖುಷಿ

ಕಾಲಚಕ್ರದ ಉರುಳುವಿಕೆಯಡಿ ಸಿಲುಕಿ ಇಂದು ವಾತಾವರಣದಲ್ಲಿ ಬದಲಾವಣೆಗಳಾಗಿವೆ. ಮುಂಜಾನೆಯ ನೀರವತೆಗೆ ಭಂಗ ತರುವ ವಾಹನಗಳ ಓಡಾಟ ಆರಂಭವಾಗಿರುತ್ತದೆ. ವಿಶಾಲ ಭತ್ತದ ಗದ್ದೆಗಳೆಲ್ಲ ಸೈಟುಗಳಾಗಿ ಪರಿವರ್ತಿತವಾಗಿ ಇಂದು ಅಲ್ಲಿ ಕಟ್ಟಡಗಳು ಮೇಲೆದ್ದಿವೆ. ಸೇತುವೆ ಮೇಲಿನ ಮುದ್ದು ಪಾರಿವಾಳಗಳು ಗುಬ್ಬಚ್ಚಿಗಳು ಎಲ್ಲಿ ಹೋದವೋ. ರಸ್ತೆ ಅಗಲೀಕರಣಕ್ಕಾಗಿ ಇಕ್ಕೆಲದ ಮರಗಳ ಬಲಿಯಾಗಿದೆ. ಇಷ್ಟಾದರೂ ಇಲ್ಲಿ ಅರಸುವ ಕಣ್ಣುಗಳಿಗೆ ಬರವಿಲ್ಲದಂತೆ ಪ್ರಕೃತಿ ತನ್ನ ಸೊಬಗನ್ನು ಕಣ್ತುಂಬಿ ಮನವನ್ನು ಸಂತೈಸುವಷ್ಟು ಉದಾರಿ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ