Advertisement

Category: ಸಂಪಿಗೆ ಸ್ಪೆಷಲ್

ನವರಾತ್ರಿಯಲ್ಲಿ ನನಗೆ ಅಮ್ಮ ಸಿಕ್ಕಳು…: ಗಾಯತ್ರಿ ರಾಜ್ ಬರಹ

ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ನವರಾತ್ರಿ ಆಚರಣೆಯಲ್ಲಿ ಅಮ್ಮನ ನೆನಪುಗಳ ಕುರಿತು ಗಾಯತ್ರಿ ರಾಜ್ ಬರಹ

Read More

ಮಾನವನ ವಿಕಾಸಕ್ಕೆ ಪ್ರಶ್ನಿಸುವುದೇ ಆಧಾರ: ನಮ್ರತಾ ಪೊದ್ದಾರ್‌ ಬರಹ

ಬಹಳ ಪೋಷಕರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗಿಯೋ ಅಥವಾ ಅರೆಬರೆ ಉತ್ತರ ಕೊಟ್ಟೋ ಜಾರಿಕೊಳ್ಳುತ್ತಾರೆ. ತಮ್ಮ ನಂಬಿಕೆಗಳಿಗೆ ಹಾಗೂ ಆಚಾರ, ವಿಚಾರಕ್ಕೆ ಸರಿಹೊಂದದೆ ಇರುವ ಪ್ರಶ್ನೆಗಳನ್ನು ಮಕ್ಕಳು ಕೇಳಿದಾಗ ಕಸಿವಿಸಿಗೊಂಡು ಕೋಪಿಸಿಕೊಳ್ಳುವುದನ್ನು ನೋಡಿದ್ದೇವೆ. ಯಾವುದೇ ವಿಷಯದ ಬಗ್ಗೆ ಗೊತ್ತಿಲ್ಲದಿರುವುದು ಅವಮಾನದ ಮಾತಲ್ಲ. ನಾವೇ ಏನೋ ಊಹೆ ಮಾಡಿಕೊಂಡು, ಖಾಲಿ ಇರುವ ಜಾಗದಲ್ಲಿ ಏನೋ ತುಂಬಿಕೊಂಡು ಸತ್ಯವನ್ನು ಹುಡುಕುವ ಗೋಜಿಗೆ ಹೋಗದಿರುವುದು ತಪ್ಪು.
ನಮ್ರತಾ ಪೊದ್ದಾರ್‌ ಬರಹ ನಿಮ್ಮ ಓದಿಗೆ

Read More

ಅಪರೂಪದ ಗ್ರೂಪ್ ಫೋಟೋ: ಜಯಂತ ಕಾಯ್ಕಿಣಿ ಬರಹ

ವ್ಯಕ್ತಿಗತವಾಗಿ ವಿಭಿನ್ನ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ-ತರಾಸು ತೊಡೆನಾಟʼ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದ ಕೆಲವು ಅತಿಥಿಗಳು ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ….
ಕವಿ, ಕತೆಗಾರ, ಸಿನಿಮಾ ಹಾಡುಗಳ ಸರದಾರ, ಜಯಂತ ಕಾಯ್ಕಿಣಿ ತಮ್ಮ ತಂದೆ; ವಿದ್ವಾಂಸ, ವಿಮರ್ಶಕ, ಸಂಶೋಧಕ ಗೌರೀಶ ಕಾಯ್ಕಿಣಿ ಮತ್ತು ಅವರ ಸಮಕಾಲೀನ ಬರಹಗಾರರರನ್ನು ಅಪರೂಪದ ಫೋಟೋವೊಂದರ ಮೂಲಕ ನೆನಪಿಸಿಕೊಂಡಿದ್ದಾರೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ