Advertisement

Category: ಸರಣಿ

ಪ್ರಯೋಗಾಲಯದಲ್ಲಿ ಕೋಳಿಮೊಟ್ಟೆ ಸ್ವಾಹಾ

ಅಂಗಡಿಯ ಭಟ್ರಿಗೆ ಮೊಟ್ಟೆಕೊಂಡು ಹೋದವರು ಯಾರೆಂದು ಗುರುತಿಸುವುದೇ ಕಷ್ಟವಾಯಿತು. ರಫೀಕ್ ನನ್ನು ತೋರಿಸಿ, ‘ಇವನೇ ಕೊಂಡುಹೋಗಿದ್ದ’ ಎಂದರು. ‘ನಾನಲ್ಲ’ ಎಂಬ ಉತ್ತರ ಬಂದ ಕೂಡಲೇ ಶಫೀಕ್ ನನ್ನು ತೋರಿಸಿ, ‘ಇವನೇ ಇವನೇ’ ಎಂದರು. ಶಫೀಕ್ ಕೂಡ ನಾನಲ್ಲ ಎನ್ನಬೇಕೇ. ಅವಳಿಜವಳಿ ಮಕ್ಕಳು ಸೇರಿ ಅಂಗಡಿ ಭಟ್ರಿಗೆ ಚಳ್ಳೇಹಣ್ಣು ತಿನ್ನಿಸಿ ಓಡಿದ್ದರು.”

Read More

ʻಲೋಕ ಸಿನಿಮಾ ಟಾಕೀಸ್‌ʼ ನಲ್ಲಿ ತೈವಾನ್‌ ನ ʻಯಿ ಯಿʼ ಸಿನಿಮಾ

ಒಂದರಿಂದ ಬಿಡಿಸಿಕೊಂಡು ಮತ್ತೊಂದಕ್ಕೆ ಪ್ರವೇಶ ಮಾಡಲು ಸಾಧ್ಯವೇ ಎನ್ನುವುದರ ಗೊಂದಲ‌ ಮತ್ತು ಆತಂಕ ಎಲ್ಲವೂ ಅವುಗಳ ಸೂಕ್ಷ್ಮ ಅಭಿನಯದಲ್ಲಿ ವ್ಯಕ್ತವಾಗುತ್ತದೆ. ಸದ್ಯದ ಸಂದರ್ಭದಲ್ಲಿ ಜೀವನದ ಒಂದು ನೆಲೆಯನ್ನು ಬದಿಗಿಟ್ಟು ಮತ್ತೊಂದನ್ನು ರೂಪಿಸಿಕೊಳ್ಳುವ ಶಕ್ತಿ ಮತ್ತು ಅದು ಎಟುಕುವ ರೀತಿಯಲ್ಲಿ ಇದೆಯೇ ಎನ್ನುವ ಪ್ರಶ್ನೆ ಅವಳಿಗೆ.”

Read More

ಜಾತಿಯೆಂಬ ತಡೆರೇಖೆಗಳನ್ನು ದಾಟಿಕೊಂಡು..

ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.”

Read More

ಪಾತ್ರೆಗಳ ರಾಶಿ, ಕಾಡುನಡುಗಿಸುವ ಹುಲಿಗರ್ಜನೆ

ಒಳಗೇನೋ ಕೆಲಸದಲ್ಲಿ ನಿರತರಾಗಿದ್ದ ಹಲೀಮಾರು ಪೆರ್ನುವನ್ನು ನೋಡಿ ಹೊರಗೆ ಬಂದರು. ಇದಿನಬ್ಬ ತನ್ನಕ್ಕನ ಮನೆಯಲ್ಲಿ ಇಲ್ಲ ಎಂಬ ವಿಷಯ ಕೇಳಿದ ಕೂಡಲೇ ಹಲೀಮಾ ಕುಸಿದು ಕುಳಿತರು. ಮಗನ ಮುಖ ಒಮ್ಮೆಯಾದರೂ ನೋಡಬೇಕು ಎಂಬ ಆಸೆಯಿಂದ ಅವರ ಮಾತೃಹೃದಯ ನೋಯತೊಡಗಿತು.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ಮೂರನೆಯ ಕಂತು.

Read More

ಅಚ್ಚಗನ್ನಡದ ಹರಿಕಾರ ಮುಳಿಯ ತಿಮ್ಮಪ್ಪಯ್ಯ

ತಮ್ಮ ವಿಮರ್ಶೆಯ ಕೃತಿಗಳಲ್ಲಿ ಮುಳಿಯ ತಿಮ್ಮಪ್ಪಯ್ಯನವರು ತೋರಿಸಿಕೊಟ್ಟ ದೇಸೀ ವಿಮರ್ಶೆಯ ಮಾರ್ಗದ ಮಹತ್ವವನ್ನು ಕೂಡ ಸರಿಯಾಗಿ ಗುರುತಿಸಲಾಗಿಲ್ಲ. ಉದಾಹರಣೆಗೆ ಅವರು ಪಂಪನ ‘ಆದಿಪುರಾಣ’ವು ರಸಕಾವ್ಯ, ‘ವಿಕ್ರಮಾರ್ಜುನ ವಿಜಯ’ವು ಶೀಲ ಪ್ರತಿಪಾದನೆಯ ಕಾವ್ಯ ಎಂದು ಗುರುತಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತೀಯ ಕಾವ್ಯಮೀಮಾಂಸೆಯನ್ನು ಅರಗಿಸಿಕೊಂಡವರ ಒಳನೋಟ ಇದು. ಅಲ್ಲದೆ ಅರಿಸ್ಟಾಟಲ್ ಕೂಡ ‘ಇಥೋಸ್’ ಅನ್ನುವುದನ್ನು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ