Advertisement

Category: ಸರಣಿ

ನಾವು ಎತ್ತ ಸಾಗಿದ್ದೇವೆ?

ಈ ಜಾತ್ರೆಯಲ್ಲಿ ಬಡಿಗೆಗಳನ್ನು ಕೊಳ್ಳುವುದೊಂದು ವಿಶೇಷ. ಹಿಡಿಯಲು ಅನುಕೂಲವಾಗುವಷ್ಟು ದಪ್ಪನೆಯ ಬೆತ್ತದ ಬಡಿಗೆಗಳಿಗೆ ಕೇರಿನ ರಸದಿಂದ ಡಿಸೈನ್ ಮಾಡಿ ಸಿಂಗರಿಸುತ್ತಿದ್ದರು. ಈ ಜಾತ್ರೆಯಲ್ಲಿ ಮನೆಗೆ ಮತ್ತು ಒಕ್ಕಲುತನಕ್ಕೆ ಬೇಕಾದ ಎಲ್ಲ ವಸ್ತುಗಳು ಕೂಡ ಸಿಗುತ್ತಿದ್ದವು. ಎತ್ತುಗಳ ಆಲಂಕಾರಿಕ ವಸ್ತುಗಳು ರೈತರ ಮನಸೂರೆಗೊಳ್ಳುತ್ತಿದ್ದವು. ತಮ್ಮ ದನಕರುಗಳನ್ನು ಸಿಂಗರಿಸುವುದೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ. ಅವರು ಆ ಪರಿಯಿಂದ ಕಾಳಜಿ ವಹಿಸಿ ತಮ್ಮ ಮಕ್ಕಳ ಸಿಂಗಾರ ಮಾಡಿದ್ದನ್ನು ನಾನು ಹಳ್ಳಿಯಲ್ಲಿ ನೋಡಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ

Read More

ಅನಾದಿ ವೇದಾಂತ

ವ್ಯಾಪಾರಿಯ ಜೊತೆ ನಾಳೆ ಲೋಡು ಎಷ್ಟು ಬರುತ್ತೆ, ಎಷ್ಟೊತ್ತಿಗೆ ಎಂದೆಲ್ಲ ಕೇಳಿದ. ಬೇಗನೆ ಎದ್ದಿದ್ದೆವು. ಹಣ್ಣಿನ ಬುಟ್ಟಿಗಳ ಇಳಿಸಿ ಹತ್ತಾರು ಅಂಗಡಿಗಳಿಗೆ ಹೊತ್ತೊಯ್ದು ಇಟ್ಟೆವು. ಇಡೀ ದಿನವೆಲ್ಲ ಹಗುರಾದ ಕೆಲಸಗಳನ್ನು ಮಾಡಿಸಿದ. ತರಕಾರಿ ಮೂಟೆಗಳನ್ನು ತಾನೇ ಹೊತ್ತು ಸಹಕರಿಸಿದ. ಜೋಡಿಸಿ ಇಡುವುದಷ್ಟೆ ನನ್ನ ಕೆಲಸವಾಗಿತ್ತು. ಮಧ್ಯಾನ್ಹವಾಗಿತ್ತು. ಶಿವರಾಂಪೇಟೆಯ ಸಂದಿಯ ಮಾಂಸದ ಹೋಟೆಲಿಗೆ ಕರೆದೊಯ್ದ. ಅಲ್ಲೆಲ್ಲ ನಮ್ಮಂತವರೇ ಇದ್ದರು. ನಿತ್ಯ ಕೂಲಿಗಳು. ಅದೇ ನರಕದಲ್ಲಿ ಸ್ವರ್ಗ ಕಾಣುವವರು. ದುಡಿಮೆಯ ಸಡಗರದಲ್ಲಿ ಅವರಾಗಲೇ ಕುಡಿದು ಅಮಲಾಗಿದ್ದರು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

Read More

ಮೂನ್ ಲೈಟ್ ನಲ್ಲಿ ಬೆನ್ನೆಲುಬಿನ ನೇಯ್ಗೆ

ಅಮ್ಮ ಪೌಲಾಳ ವಿಷಯದಲ್ಲಿ ವ್ಯತ್ಯಾಸವಿಲ್ಲ. ಅವಳು ಇನ್ನಷ್ಟು ಅತಿರೇಕದಿಂದ ವರ್ತಿಸುತ್ತಾಳೆ. ಹೀಗಾಗಿ ಅವನ ಅಂತರಂಗದಲ್ಲಿ ಒತ್ತಡಗಳು ಒಗ್ಗೂಡಲು ಪ್ರಾರಂಭಿಸುತ್ತವೆ. ಜೊತೆಗೆ ಸ್ಕೂಲಿನಲ್ಲಿ ಉಳಿದವರು ರೇಗಿಸುವುದು ಮುಂದುವರಿಯುತ್ತದೆ. ಇದರಿಂದ ಅವನಿಗೆ ತಾನು ಯಾವ ರೀತಿಯಲ್ಲಿಯೂ ಪ್ರತಿಕ್ರಿಯಿಸದೆ ನಿಷ್ಕ್ರಿಯನಾಗುತ್ತಿರುವುದಕ್ಕೆ ನಾಚಿಕೆಯ ಜೊತೆ ಬೇಸರವೂ ಅವನನ್ನು ಮುತ್ತುತ್ತದೆ. ತಡೆಯಲಾಗದೆ ರೋಷದಿಂದ ಸ್ಕೂಲಿಗೆ ಹೋಗಿ ಒಬ್ಬನೆ ಅಬ್ಬರಿಸಿ ಗಲಾಟೆ ಮಾಡುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಅಮೆರಿಕದ ʻಮೂನ್‌ಲೈಟ್ʼ ಸಿನಿಮಾದ ವಿಶ್ಲೇಷಣೆ

Read More

ಅವರ ಬದುಕು ಅರ್ಥವಾಗದೆ ನಮ್ಮ ಬದುಕು ವ್ಯರ್ಥ

ನನ್ನ ತಂದೆಯ ಕಡೆಯಿಂದ ಹಣ ಪಡೆದು ಏನೋ ತರಲು ನನ್ನ ತಾಯಿ ತಿಳಿಸುತ್ತಿದ್ದಳು. ನಾನು ಮರೆಗುಳಿಯಾಗಿದ್ದರಿಂದ ಅಂಗಿಯ ಕೆಳಗೆ ಗಂಟು ಹಾಕಿ ಕಳಿಸುತ್ತಿದ್ದಳು. ಶ್ರೀ ಸಿದ್ಧೇಶ್ವರ ರಸ್ತೆಯ ಮರಗಳ ಸಾಲಿನ ನೆರಳಲ್ಲಿ ನನ್ನ ತಂದೆಯ ಬಳಿ ಹೋಗುವ ಮೊದಲೆ ಅಂಗಿಯ ಗಂಟು ಹಾಕಿದ ವಿಚಾರವೇ ಮರೆತುಹೋಗುತ್ತಿತ್ತು! ಹೀಗೇಕೆ ಗಂಟು ಹಾಕಿಕೊಂಡಿರುವೆ ಎಂದು ನನಗೆ ನಾನೇ ಬೇಸರಪಟ್ಟುಕೊಂಡು ಅದನ್ನು ಬಿಚ್ಚುತ್ತಿದ್ದೆ. ನನ್ನ ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋದಾಗ ಸೇಂಗಾ ಕೊಡಿಸಲು ಹೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿ

Read More

ಬಿಕಾರಿಯ ಮನುಷ್ಯತ್ವದ ಗುರುತುಗಳು

ಅಪನಂಬಿಕೆಗಳಲ್ಲೇ ಮನುಷ್ಯ ಎಷ್ಟೊಂದು ನಂಬಿಕೆಗಳ ಹುಟ್ಟಿಸುವನಲ್ಲಾ… ಆದರೆ ದೇವರ ನಂಬಿಕೆಗಳಲ್ಲಿ ಎಷ್ಟೆಲ್ಲ ಅಪನಂಬಿಕೆ ಅಂತರ ತಾರತಮ್ಯಗಳಿವೆಯಲ್ಲಾ… ಇಂತಹ ದ್ವಂದ್ವಗಳಲ್ಲಿ ಬದುಕು ಸವೆದ ಎಕ್ಕಡವಾಗಿರುತ್ತದೆಯೇ. ಜೋಪಾನ ಮಾಡಿದ್ದ ಎಕ್ಕಡ ಕೊನೆಗೆ ಎಲ್ಲಿ ಹೋಗಿ ಬೀಳುತ್ತದೆ? ಹೆಗಲ ಮೇಲೆ ಕೈ ಹಾಕುವಷ್ಟು ಸಲಿಗೆ ಬಂದುಬಿಟ್ಟಿತಲ್ಲ ಇವನಿಗೆ… `ಬೀಡಿ ಸೇದುವೆಯಾ’ ಎಂದ? `ಹೂಂ; ಕೊಡು’ ಎಂದು ಜೊತೆಗೆ ಸೇದಿದೆ. ಯಾರ ವಯಕ್ತಿಕ ವಿವರವನ್ನೂ ಕೇಳುವವನಲ್ಲ ನಾನು. ಹಾಗೆಯೆ ಯಾರಾದರೂ ನನ್ನ ಬಗ್ಗೆ ಕೇಳಿದರೆ ಸರಿ ಉತ್ತರ ನೀಡಲಾರೆ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ