Advertisement

Category: ದಿನದ ಅಗ್ರ ಬರಹ

ಜೀವನ ರೂಪಿಸಿಕೊಳ್ಳುವ ನಿರೀಕ್ಷೆಯಲ್ಲಿ ಕೆಲವು ಮಾತುಗಳು

ಗಂಟಿಚೋರ ಸಮುದಾಯ ಬಹುಶಃ ಹೊಟ್ಟೆಪಾಡಿನ ಕೆಲಸವಾಗಿ ಈ ಭಾಗದಲ್ಲಿ ಸ್ಥಳೀಯವಾಗಿ ಬಾವಿ ತೋಡುವ ಕೆಲಸಕ್ಕೆ ಹೊಂದಿಕೊಂಡಿರಬಹುದು ಅನ್ನಿಸುತ್ತದೆ. ಹಾಗಾಗಿ ಪರ್ಯಾಯ ವೃತ್ತಿಗಳನ್ನು ಕೈಗೊಳ್ಳಲು ಸರಕಾರ ತನ್ನ ಯೋಜನೆಗಳಲ್ಲಿ ಸಹಾಯ ಮಾಡಿದರೆ, ಈ ಸಮುದಾಯ ಈ ಅಪಾಯಕಾರಿ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಅಂತೆಯೇ ಇದೇ ವೃತ್ತಿಯನ್ನು ಸುರಕ್ಷಿತವಾಗಿ ಮುಂದುವರೆಯಲು ಸರಕಾರ ಆಧುನಿಕ ತಾಂತ್ರಿಕ ಸೌಲಭ್ಯವನ್ನು ಪಡೆಯಲು ಸಹಕರಿಸಬಹುದಾಗಿದೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಕೊನೆಯ ಕಂತು

Read More

ಪ್ರೀತಿ, ಕ್ರಾಂತಿ, ಸಾಹಿತ್ಯಕ್ಕೆ ಅಂತಃಕರಣವೇ ಅಂತರ್ಜಲ

ಕಥಾ ಪ್ರಕಾರದಲ್ಲಿ ನಾಗರೇಖ ಪ್ರಯೋಗಶೀಲರು ಎಂಬುದಕ್ಕೆ ‘ಸ್ಟಾಕ್ ಹೋಮ್ ಸಿಂಡ್ರೋಮ್’ನ್ನು ಹೆಸರಿಸಬಹುದು. ಕಥೆಗೆ ಮನಃಶಾಸ್ತ್ರದ ಹಿನ್ನೆಲೆ ಇದೆ. ನೋಯಿಸಿದವರನ್ನು ನಿಷ್ಠುರವಾಗಿ ನಿರಾಕರಿಸಲಾರದ ಅಸಹಾಯಕತೆಯಲ್ಲಿ ಅವರ ಬಾಂಧವ್ಯಕ್ಕೆ ಅಂಟಿಕೊಳ್ಳುವ ವಿಚಿತ್ರ ಮನೋವ್ಯಾಕುಲತೆಯಿದು. ಸಂಪ್ರೀತ, ಸಾತಮ್ಮ ಮತ್ತು ಡಾ. ಸುದತಿಯರ ಮನೋಮಾರ್ಗದ ಮೂಲಕ ಚಲಿಸುವ ಕಥಾ ರಥದ ನಿರೂಪಣೆ ವಿಶಿಷ್ಟವಾಗಿದೆ. ಡಾ. ಸುದತಿ ತನ್ನಂತೆಯೇ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಸಾತಮ್ಮನನ್ನು ವಿಷಾದದ ಕನ್ನಡಿಯಲ್ಲಿ ನೋಡುತ್ತಾಳೆ. ಸಿದ್ಧಾಂತವೊಂದರ ಅಳತೆಗೆ ಕಥೆಯನ್ನು ಹೊಲಿಯುವ ತಂತ್ರ ಹೊಸತನ್ನು ಹೇಳಲಾರದು.
ನಾಗರೇಖಾ ಗಾಂವಕರ ಹೊಸ ಕಥಾ ಸಂಕಲನ “ಮೌನದೊಳಗೊಂದು ಅಂತರ್ಧಾನ” ಕ್ಕೆ ಶ್ರೀಧರ ಬಳಗಾರ ಬರೆದ ಮುನ್ನುಡಿ

Read More

ಕಳೆದುಕೊಂಡವರ ನೆನಪಿನಲ್ಲಿ…

ಕರ್ಫ್ಯೂ ಆಗಿ ಅಂಚೆ ವ್ಯವಸ್ಥೆ ನಿಂತು ಹೋಗಿತ್ತು. ಒಂದು ಮುಖ್ಯವಾದ ಪಾರ್ಸೆಲ್ ಅಂಚೆ ಇಲಾಖೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಊರಿನಲ್ಲಿರುವ ಹೈಸ್ಕೂಲ್ ಗೆಳೆಯ ಆನಂದನಿಗೆ ಫೋನ್ ಮಾಡಿದ್ದೆ. ಅವರ ತಂದೆ ಊರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು. ‘ಏನಾದರೂ ಮಾಡಕ್ಕಾಗತ್ತಾ?’ ಕೇಳಿದ್ದೆ. ಆಗ ಚೆನ್ನಾಗೆ ಮಾತಾಡಿದ್ದ. ಅದಾಗಿ ಒಂದು ವಾರಕ್ಕೆ ಫೇಸಬುಕ್ಕಲ್ಲಿ ‘ರೆಸ್ಟ್ ಇನ್ ಪೀಸ್ ಆನಂದ್’ ಎಂದು ಸುದ್ದಿ ಬಂತು. ಕೋವಿಡ್ ಇಷ್ಟು ಹತ್ತಿರಕ್ಕೆ ಬಂತು. ಒಂದು ಸಾಂಕ್ರಾಮಿಕ ರೋಗ ಎಲ್ಲವನ್ನೂ ಹೀಗೆ ಕಸವನ್ನು ಬುಟ್ಟಿಯಲ್ಲಿ ಹಾಕಿ ಹೊತ್ತೊಯ್ಯುವಂತೆ ಮನುಷ್ಯರನ್ನು ಹೊತ್ತೊಯ್ಯಲು ಆರಂಭಿಸಿತ್ತು. ವ್ಯಾಪಾರವೇ ಇಲ್ಲದೆ ಜನ ಊಟಕ್ಕಾಗಿ ಪರದಾಡಿದ್ದರು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

Read More

ಜ್ಞಾನಜ್ಯೋತಿಯಲಿ ಜಗವ ಬೆಳಗಿದನೀತ

ಹೊಸ ಬದುಕಿನ ಹುಡುಕಾಟದಲ್ಲಿ ಲಂಡನ್ ಗೆ ಬಂದಮೇಲೆ, ಹಿಂದಿನ ಸೈದ್ಧಾಂತಿಕ ಅನ್ವೇಷಕ ವೃತ್ತಿಗಿಂತ ಸಂಪೂರ್ಣ ಭಿನ್ನವಾದ ವೃತ್ತಿ ಆರಂಭಿಸುವ ಅವಕಾಶ ಸಿಕ್ಕಿತು, “ರಾಯಲ್ ಮಿಂಟ್” ಎನ್ನುವ ಸರಕಾರಿ ಸ್ವಾಮ್ಯದ ನಾಣ್ಯ ತಯಾರಿ ಕಂಪೆನಿಯ ಉದ್ಯೋಗಿಯಾಗಿ. ಕ್ರಿಸ್ತಶಕ 886ರಲ್ಲಿ ಪ್ರಾರಂಭಗೊಂಡು ದೀರ್ಘ ಇತಿಹಾಸ ಇರುವ ಮಿಂಟ್ ಕಂಪೆನಿಯ ಮಾತ್ರವಲ್ಲದೇ ಬ್ರಿಟನ್ನಿನ ಆರ್ಥಿಕ ಸ್ಥಿತಿಯೂ ಆ ಸಮಯದಲ್ಲಿ ಹದಗೆಟ್ಟಿತ್ತು. ಕಳ್ಳನಾಣ್ಯಗಳು ಎಲ್ಲೆಲ್ಲೂ ಚಲಾವಣೆಯಲ್ಲಿದ್ದವು. ಬಳಕೆಯಲ್ಲಿದ್ದ ನಾಣ್ಯಗಳಲ್ಲಿ ಐದರಲ್ಲಿ ಒಂದು ನಕಲಿ ಆಗಿರುತ್ತಿತ್ತು. ಮಿಂಟ್ ನ ಮೇಲ್ವಿಚಾರಕನಾಗಿ ಖೋಟಾ ಹಣದ ಜಾಲವನ್ನು ನ್ಯೂಟನ್ ಸಮರ್ಥವಾಗಿ ಪ್ರತಿಬಂಧಿಸಿದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಸರ್‌ ಐಸಾಕ್‌ ನ್ಯೂಟನ್‌ರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ನೇಪಥ್ಯದಲ್ಲಿ ಹಾದು ಹೋಗುವ ಆಲೋಚನೆಗಳು

ಆಕೆ ಈ ಹಿಂದೆ ನಮ್ಮ ತಂಡದಲ್ಲಿ ನಟಿಸಿದ್ದ ನಟಿ. ಆಕೆಗೆ ಮೊದಲು ತುಂಬ ನೀಳ ಮತ್ತು ದೃಢವಾದ ಕಾಯ ಇತ್ತು. ನಡುಮಧ್ಯೆ ಕೆಲವು ಷೋಗಳಿಗೆ ಆಕೆ ಗೈರು. ಯಾಕೆ ಎಂದು ವಿಚಾರಿಸಿದಾಗ ಆಕೆ ತಣ್ಣನೆಯ ದನಿಯಲ್ಲಿ ‘ ಸರ್ ನನಗೆ ಕ್ಯಾನ್ಸರ್ ಆಗಿದೆ..ಟ್ರೀಟ್ಮೆಂಟ್ ತಗೋತಿದ್ದೀನಿ.. ಸೊ ಬರಲಿಕ್ಕೆ ಆಗ್ತಿಲ್ಲ..’. ಅಂದರು. ಆ ಹೊತ್ತು ಅದು ನನ್ನಲ್ಲಿ ಗಾಬರಿ ಹುಟ್ಟಿಸಿದ ಉತ್ತರವಾಗಿತ್ತು. ನನ್ನ ದನಿಯಲ್ಲಿದ್ದ ಗಾಬರಿ ಗುರುತಿಸಿ ಆಕೆ ಮತ್ತೆ ‘ ಸರ್ ಅಷ್ಟು ಸೀರಿಯಸ್ ಏನಿಲ್ಲ’ ಎಂದರು. ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್‍ ಬರಹ  ಇಂದಿನ  ಓದಿಗಾಗಿ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ