Advertisement

Category: ದಿನದ ಅಗ್ರ ಬರಹ

ಶೂನ್ಯ ಟಿಕೆಟ್’ನ ಒಂದು ಪ್ರಸಂಗ: ವಸಂತಕುಮಾರ್‌ ಕಲ್ಯಾಣಿ ಬರಹ

ಕಂಡಕ್ಟರ್ ಒಂದು ನಿರ್ಧಾರಕ್ಕೆ ಬಂದ. ಪೊಲೀಸರು ಬರಲಿ ಅವರೇ ನಿರ್ಧರಿಸಲಿ ಎಂದು ಬಸ್ ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ. ಆದರೂ ಬಸ್ ನಿಲ್ಲಲಿಲ್ಲ. ಪೋಲೀಸರ ಪ್ರವೇಶ ಮಾತಿನಲ್ಲಿ ಆದದ್ದಕ್ಕೆ, ಈ ಮೂವರು “ಕರೆಸಯ್ಯ ನಾವು ನೋಡದೆ ಇರೋ ಪೋಲಿಸ್ರಾ… ಹೆದರಿಸ್ತೀಯಾ? ಕರೆಸೆ ಬಿಡು” ಎಂದು ದುಂಬಾಲು ಬಿದ್ದರು. (ಹಾಗೆ ನಟಿಸಿದರು) ಒಂದು ಸ್ಟಾಪ್ ಮುಂದೆ ಬಂದ ಬಸ್ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಐದು ನಿಮಿಷದಿಂದ ಯಾರಿಗೋ ಫೋನ್ ಮಾಡುತ್ತಾನೆ ಇದ್ದ ಕಂಡಕ್ಟರ್ “ಪೊಲೀಸರು ಬರ್ಲಿ; ಗೊತ್ತಾಗುತ್ತೆ” ಎನ್ನುತ್ತಾ. ಬಸ್ ಅನಿವಾರ್ಯವಾಗಿ ನಿಂತಿತು.
ವಸಂತಕುಮಾರ್ ಕಲ್ಯಾಣಿ ಬರೆದ ಶೂನ್ಯ ಟಿಕೇಟ್‌ ಒಂದರ ಪ್ರಸಂಗ ನಿಮ್ಮ ಓದಿಗೆ

Read More

ದರ್ಶನ್‌ ಜಯಣ್ಣ ಹೊಸ ಸರಣಿ “ಸೌದಿ ಡೇಟ್ಸ್” ಇಂದಿನಿಂದ….

ನಾನಿಲ್ಲಿ ಇಲ್ಲಿಯತನಕ ಆರು ವರ್ಷ ನಾಲ್ಕು ತಿಂಗಳುಗಳನ್ನ ಕಳೆದಿದ್ದೇನೆ. ನನ್ನ ಕುಟುಂಬದ ಜೊತೆ, ಗೆಳೆಯರ ಜೊತೆ ಈ ದೇಶ ಸುತ್ತಾಡಿದ್ದೇನೆ. ಇಲ್ಲಿನ ಬೃಹತ್ ಕಾರ್ಖಾನೆಗಳನ್ನು ಸ್ವತಃ ನೋಡಿದ್ದೇನೆ. ಇಲ್ಲಿನ ರಣ ಬಿಸಿಲಿನ ಜೊತೆಗೆ ತಂಪಾದ ಹವೆಯನ್ನೂ ಅನುಭವಿಸಿದ್ದೇನೆ. ಮರಳ ಮಳೆ, ನಿಜದ ಮಳೆ ಎರಡಕ್ಕೂ ಸಾಕ್ಷಿಯಾಗಿದ್ದೇನೆ. ಅರಬ್ಬರ ಜೊತೆ ಕೆಲಸ ಮಾಡಿ, ಓಡಾಡಿ ಚರ್ಚಿಸಿದ್ದೇನೆ. ಅವರ ಕನಸು, ವಿಚಾರ, ಜೀವನ ಕ್ರಮ, ಸ್ನೇಹವನ್ನು ಅನುಭವಿಸಿದ್ದೇನೆ.
ಸೌದಿ ಅರೇಬಿಯಾದ ವಾಸಿಯಾದ ದರ್ಶನ್‌ ಜಯಣ್ಣ ಅಲ್ಲಿನ ವಾಸದ ಹಾಗೂ ಆ ದೇಶದ ಕುರಿತು ತಮ್ಮ ಅನುಭವಗಳನ್ನು “ಸೌದಿ ಡೇಟ್ಸ್”‌ ಹೆಸರಿನಲ್ಲಿ ಶನಿವಾರಗಳಂದು, ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ

Read More

ಎಲ್ಲವೂ…. ಮರಳು ಮರಳೂ…: ಎಚ್. ಗೋಪಾಲಕೃಷ್ಣ ಸರಣಿ

ಮನೆಗೆ ಬರಬೇಕಾದರೆ ಮತ್ತೊಂದು ಯೋಚನೆ ತಲೆ ಕೆಡಿಸಿತು. ಸೈಟ್ ಮಧ್ಯ ಮಾರ್ಕ್ ಮಾಡ್ತಾ ಇದಾನೆ. ಮಧ್ಯದಿಂದ ಯಾರಾದರೂ ಮಾರ್ಕ್ ಮಾಡ್ತಾರಾ? ನಾನು ದಾಖಲು ಮಾಡ್ತಿರೋ ಈ ಪ್ರಸಂಗ ನಾಲ್ಕೂ ಕಾಲು ದಶಕದ ಹಿಂದೆ. ಅಂದರೆ ಆಗಿನ್ನೂ ಮೊಬೈಲ್ ಫೋನು, ಲ್ಯಾಂಡ್ ಲೈನ್ ಫೋನು ಇವೆಲ್ಲಾ ಇರದಿದ್ದ ಕಾಲ. ಏನಾದರೂ ಸಮಸ್ಯೆ, ಅದಕ್ಕೆ ಪರಿಹಾರ ಬೇಕು ಅಂದರೆ ಒಂದು ಮುಖಾಮುಖಿ ಮಾತು, ಇಲ್ಲ ಅಂದರೆ ಪೋಸ್ಟ್ ಮೂಲಕ ಕಾರ್ಡು ಅಥವಾ ಇನ್ ಲ್ಯಾಂಡ್ ಲೆಟರ್, ಇಲ್ಲಾ ಕಾಗದದಲ್ಲಿ ಬರೆದು ಅದನ್ನ ಕವರ್‌ನಲ್ಲಿ ಇಟ್ಟು ಪೋಸ್ಟ್ ಡಬ್ಬಕ್ಕೆ ಹಾಕಿ ಉತ್ತರಕ್ಕೆ ಕಾಯೋದು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ನಾಲ್ಕನೆಯ ಕಂತು

Read More

ಧರ್ಮ ತೊಡಕು ಮತ್ತು ಬೆಳಕು: ರಂಜಾನ್ ದರ್ಗಾ ಸರಣಿ

ಸಮಾಜದಲ್ಲಿ ವಿಚಾರವಾದದ ಬೆಳವಣಿಗೆಯಿಂದ ಮಾತ್ರವೇ ನವಸಮಾಜದ ನಿರ್ಮಾಣವಾಗಲು ಸಾಧ್ಯ. ಎಲ್ಲ ಧರ್ಮಗಳನ್ನು ವಿಚಾರವಾದದ ಒರೆಗಲ್ಲಿಗೆ ಹಚ್ಚದಿದ್ದರೆ ಮಾನವಕುಲ ಇನ್ನೂ ಅಧೋಗತಿಗೆ ಹೋಗುವುದು. ಧರ್ಮಗಳ ತಿರಸ್ಕಾರದಿಂದ ವಿಚಾರವಾದಿಗಳು ಇದನ್ನು ಸಾಧಿಸಲಿಕ್ಕಾಗದು. ಧರ್ಮಗಳಲ್ಲಿನ ಅರಿವಿನ ಬೆಳಕಿನೊಂದಿಗೆ ಮಾತ್ರ ಈ ವಿಚಾರಹೀನ ಸ್ಥಿತಿಯಿಂದ ಹೊರಬರಲು ಸಾಧ್ಯ. ಅದಕ್ಕಾಗಿ ಮಾನವನ ಬದುಕಿಗೆ ಒಂದೇ ಧರ್ಮ ಸಾಲದು ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 94ನೇ ಕಂತು ನಿಮ್ಮ ಓದಿಗೆ

Read More

ಅನಿಲ್‌ ಗುನ್ನಾಪೂರ ಬರೆದ ಈ ಭಾನುವಾರದ ಕತೆ

ದಿನಪತ್ರಿಕೆ ಓದುತ್ತ ಕುಳಿತಿದ್ದವನೊಬ್ಬ ‘ಅಲ್ರೀ ಅವ್ರಿಗೆ ಕೆಲಸ ಮಾಡ್ರಿ ಅಂತೀರಿ.. ಕೆಲಸ ಯಾರು ಕೊಡ್ತರ‍್ರಿ? ನೋಡಿದ್ರಲಾ ಮ್ಯಾಲ್ ಮಲಗಿದ್ದ ಸಾಹೇಬ್ರು ಬರಿ ಮುಟ್ಟಿದ್ರೆ ಹೆಂಗ್ ಹೊಡ್ದು ಕಳಸಿದ್ರು’ ಎಂದು ಮತ್ತೆ ದಿನಪತ್ರಿಕೆ ಓದುವುದರಲ್ಲಿ ಮಗ್ನನಾದ. ನಂತರದಲ್ಲಿ ಯಾರೂ ಏನೂ ಎನ್ನದೇ ತಮ್ಮ ಪಾಡಿಗೆ ತಾವು ಕುಳಿತರು. ಅವಳಿಗೆ ಹಾಗೆ ಹೊಡೆಯಬಾರದಿತ್ತೆನಿಸಿ, ನನ್ನ ಮೇಲೆ ನನಗೇ ಸಿಟ್ಟು ಬಂತು. ಅಕಸ್ಮಾತ್ ಅವಳು ತಿರುಗಿ ಹೊಡೆದಿದ್ದರೆ? ಅವಳು ನಗುತ್ತಲೇ ‘ಅದಕ್ಯಾಕ ಸಿಟ್ಟು ಮಾಡ್ಕೋತಿ ಮಾಮಾ.. ಮಲಗು ಮಲಗು’ ಎಂದು ನಗುನಗುತ್ತಲೇ ಹೋಗಿದ್ದು ಕಣ್ಮುಂದೆ ಬರುತ್ತಿತ್ತು.
ಅನಿಲ್‌ ಗುನ್ನಾಪೂರ ಹೊಸ ಕಥಾ ಸಂಕಲನ “ಸರ್ವೇ ನಂಬರ್-‌೯೭” ದ “ಗೋಲ್‌ಗುಂಬಜ್ ಎಕ್ಸ್‌ಪ್ರೆಸ್‌” ಕತೆ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ