Advertisement

Category: ದಿನದ ಪುಸ್ತಕ

ಕುಸುಮಾ ಆಯರಹಳ್ಳಿ ಬರೆದ ಈ ಭಾನುವಾರದ ಕತೆ

ಮಹೇಶ ಅಷ್ಟು ಸಲ ವಿಧಾನಸೌಧಕ್ಕೆ ಹೋಗಿಬಂದು ಕೆಲಸ ಆಗಲಿಲ್ಲ ಅಂತ ಬೇಸರ ಮಾಡಿಕೊಂಡು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವಾಗೆಲ್ಲ ನನಗೆ ಕೋಪ ಬರ್ತಿತ್ತು ಮೇಷ್ಟ್ರೇ. ಪ್ರಜೆಗಳನ್ನ ಬಾಗ್ಲಲ್ಲಿ ನಿಲ್ಸಿ ಜಾತಿ ಯಾವುದಯ್ಯಾ ಒಳಗೋಗಕೆ? ಅಂತ ಕೇಳಕಾ ಆ ಪುಣ್ಯಾತ್ಮರು ದೇಶಾ ಕಟ್ಟಿದ್ದು? ಅಂತ ಕೋಪ ಉಕ್ಕುಕ್ಕಿ ಬರದು. ರಾತ್ರಿ ನಿದ್ದೆ ಬರ್ತಿರಲಿಲ್ಲ. ಆಚೆ ಭಾಷಣದಲ್ಲಿ ಹೇಳೋದು ಒಂದು. ಒಳಗ್ ಮಾಡದೊಂದು. ಇದಕ್ಕೇ ಏನಯ್ಯಾ ನಿಮಗೆ ಸಂವಿಧಾನ ಬರ್ಕೊಟ್ಟಿದ್ದು? ನೊಂದವರೇ ನೋಯಿಸಿದರೆ ಅದಕ್ಕಿಂತಾ ಕೇಡುಂಟಾ ಲೋಕದಲ್ಲಿ?
ಕುಸುಮಾ ಆಯರಹಳ್ಳಿ ಬರೆದ “ಕಪಿಲೆ ಕಂಡ ಕತೆಗಳು” ಕಥಾಸಂಕಲನ ಇಂದು ಬಿಡುಗಡೆಯಾಗಲಿದ್ದು ಈ ಕೃತಿಯ “ದೈತ್ಯ” ಕತೆ ನಿಮ್ಮ ಓದಿಗೆ

Read More

ಮಾತು ಹೆಪ್ಪುಗಟ್ಟಿ ಕಾವ್ಯವಾದ ಬಗೆ: ಡಾ.ಎ.ರಘುರಾಂ ಬರಹ

ಮಂಜುನಾಥ್ ಪಾಳ್ಯ ಅವರ ಎಲ್ಲ ಕವಿತೆಗಳನ್ನು ಓದಿದಾಗ ಅಲ್ಲಿನ ಭಾಷೆ, ವಸ್ತು, ನಿರ್ವಹಣೆಯ ಬಗ್ಗೆ ನೋಡಬೇಕು. ವಸ್ತು ಸಾಮಾಜಿಕವೇ ಆದರೂ ಕೂಡ ನಿರ್ವಹಣೆಯ ಸಂದರ್ಭದಲ್ಲಿ ಅದು ಭಿನ್ನ ಪಾತಳಿಗಳನ್ನು ಕಾಣುತ್ತದೆ. ಕವಿ ಪ್ರತಿಭಟಿಸುವಲ್ಲಿ ಕಾವ್ಯ ಬಂಡಾಯದ ಚಾಟಿ ಬೀಸುತ್ತದೆ. ಮೌನವಾಗಿ ಪ್ರೇಮಕ್ಕೆ ಮರುಳಾದಾಗ ಅಲ್ಲಿನ ಭಾಷೆ ತೀರ ಕೋಮಲವಾಗಿಬಿಡುತ್ತದೆ. ಭ್ರಷ್ಠತೆ, ಅತ್ಯಾಚಾರ, ಶೋಷಣೆ ವಿಚಾರಗಳು ಬಂದರೆ ಭಾಷೆ ಸ್ವಲ್ಪ ಒರಟಾಗಿಬಿಡುತ್ತದೆ. ಕಾವ್ಯ ಹೀಗೆ ಭಿನ್ನ ಪಾತಳಿಗೆ ಒಳಗಾಗುವುದು ಕವಿಯ ಸಂವೇದನಾಶೀಲ ಗುಣವನ್ನು ತೋರುತ್ತದೆ.
ಡಾ. ಮಂಜುನಾಥ ಪಾಳ್ಯ ಬರೆದ ‘ಹೆಪ್ಪುಗಟ್ಟಿದ ಮಾತುಗಳು’ ಕವನ ಸಂಕಲನದ ಕುರಿತು ಡಾ. ಎ. ರಘುರಾಂ ಬರಹ

Read More

ಕಲಾತ್ಮಕ ಕಟ್ಟಣೆಯ ‘ಅಸೀಮರೂಪಿ’ ಕತೆಗಳು: ರೇವಣಸಿದ್ಧಪ್ಪ ಜಿ.ಆರ್. ಬರಹ

ಯುವತಿಯೊಬ್ಬಳ ಮೆದುಳು ಅಪಘಾತದಿಂದಾಗಿ ಜರ್ಝರಿತವಾಗಿ ಬ್ರೈನ್ ಡೆಡ್ ಆಗಿ ಅವಳ ಉಸಿರು ನಿಲ್ಲುವುದು ಖಾತ್ರಿಯಾದಾಗ, ಮುದಿಯಾಗಿದ್ದ ತನ್ನ ದೇಹದಿಂದ ಆಕೆಯ ದೇಹಕ್ಕೆ ಬ್ರೈನ್ ಟ್ರಾನ್ಸ್ ಪ್ಲಾಂಟೇಷನ್ ಮಾಡುವ ಪ್ರಯೋಗಕ್ಕೆ ಒಳಗಾಗುತ್ತಾನೆ. ಮಾನಸಿಕವಾಗಿ ಗಂಡಾಗಿ, ದೈಹಿಕವಾಗಿ ಹೆಣ್ಣಾಗಿರುವ ಈತ ಒಂದು ವಿಷಮ ಗಳಿಗೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯೂ ಆಗಿಬಿಡುತ್ತಾನೆ. ಕೊನೆಗೆ ತನ್ನ ಮನೆಯವರಿಂದಲೇ ಅವಜ್ಞೆಗೆ ಈಡಾಗುತ್ತಾನೆ….
ಕಂನಾಡಿಗಾ ನಾರಾಯಣ ಬರೆದ “ಅಸೀಮರೂಪಿ” ಕಥಾ ಸಂಕಲನದ ಕುರಿತು ರೇವಣಸಿದ್ಧಪ್ಪ ಜಿ.ಆರ್. ಬರಹ

Read More

ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತ್ರೆ: ಸುಭದ್ರಾ ಹೆಗಡೆ ಬರಹ

ಕಾದಂಬರಿಯನ್ನು ಓದುತ್ತಾ ಹೋದಂತೆ ಶೌರ್ಯ, ಸಾಹಸಕ್ಕೆ ಹೆಸರಾಗಿ ನಿಂತ ವೀರವನಿತೆ ಜೀವ ತಳೆದು ನಮ್ಮೆದುರು ನಿಲ್ಲುವಂತೆ ರಾಣಿಯ ಪಾತ್ರವನ್ನು ಅಷ್ಟು ಸೂಕ್ಷ್ಮವಾಗಿ ಹೆಣೆಯಲಾಗಿದೆ. ಜೈನ ಧರ್ಮದವಳಾದ ರಾಣಿ ಸಾಳುವ ವಂಶದ ಕೊನೆಯ ಕುಡಿ, ಸರ್ವಧರ್ಮ ಸಮನ್ವಯವನ್ನು ಸಾರಿದವಳು. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಗುರುಗಳಾದ ಭಟ್ಟಾಕಳಂಕರು, ಪ್ರಧಾನಿಯಾದ ಸಭಾಹಿತರು, ಶಬಲೆ, ಜಿನದತ್ತ, ಸತ್ಯಾಶ್ರಯ ಇವರೆಲ್ಲರೂ ಕಳೆದುಹೋದ ಸಮೃದ್ಧವಾದ ಸಾಮ್ರಾಜ್ಯವೊಂದರ ಸಾಕ್ಷಿಯಾಗಿ ನಿಲ್ಲುತ್ತಾರೆ. ರಾಣಿಗೆ ಬೆಂಗಾವಲಾಗಿ ನಿಂತು ನಾಡ ಪ್ರೇಮವನ್ನು ತೋರಿಸುತ್ತಾರೆ.
ಗಜಾನನ ಶರ್ಮಾ ಬರೆದಿರುವ ಐತಿಹಾಸಿಕ ಕಾದಂಬರಿ ‘ಚೆನ್ನಭೈರಾದೇವಿʼ ಕುರಿತು ಸುಭದ್ರಾ ಹೆಗಡೆ ಬರಹ

Read More

ಅವ್ವಕ್ಕನೆಂಬ ಅಚ್ಚರಿ…: ಜ.ನಾ. ತೇಜಶ್ರೀ ಹೊಸ ಕಾದಂಬರಿಯ ಪುಟಗಳು

ಈಗ ಅವಳ ದೇಹ ಮೊದಲಿಗಿಂತ ಗಟ್ಟಿಯಾಗಿತ್ತು, ಸಲಾಕೆಯಂತೆ. ಮೇಲಿನ ಕೆಲಸಕ್ಕೆ ಕೆಲಸದವರಿದ್ದರೂ ಅವಳು ಮಾಮೂಲಿನಂತೆ ಎಲ್ಲ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡಿದಷ್ಟೂ ಅವಳಲ್ಲಿ ಕಸುವು, ತಾಳಿಕೊಂಡಷ್ಟೂ ಸುಂದರವಾಗಿ ಕಾಣುವುದನ್ನು ದೊಡ್ಡಯ್ಯ ವಿಸ್ಮಯದಲ್ಲಿ ನೋಡುತ್ತಿದ್ದ. ಮಂಜುನಾಥ ಮೂರು ತಿಂಗಳಿಗೆ ಮಗುಚಿದ, ಆಮೇಲೆ ಅಂಬೆಗಾಲಿಟ್ಟ. ಷಣ್ಮುಖ ಬೆಳೆದಿದ್ದನ್ನು ಹತ್ತಿರದಿಂದ ಗಮನಿಸದ ದೊಡ್ಡಯ್ಯನಿಗೆ ಮಂಜುನಾಥನನ್ನು ನೋಡುವಾಗ ಎಲ್ಲ ಹೊಸದೆನಿಸುತ್ತಿತ್ತು. ತಾನೂ ಮಗುವಾಗಿದ್ದಾಗ ಹೀಗೇ ಮಾಡಿದೆನ ಅಂತ ಯೋಚಿಸುತ್ತಿದ್ದ.
ಜ.ನಾ. ತೇಜಶ್ರೀ ಹೊಸ ಕಾದಂಬರಿ “ಜೀವರತಿ” ಕೃತಿಯ ಪುಟಗಳು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ