Advertisement

Category: ಸಂಪಿಗೆ ಸ್ಪೆಷಲ್

ಸಾಖಿ, ಶಾಹಿ ಮತ್ತದರ ಪುಟ: ಡಯಾನಾ ಕುಶಾಲಪ್ಪ ಬರೆದ ಲೇಖನ

“ನನ್ನ ಜೀವದ ಕಷ್ಟ ಯಾಕೆ ಕೇಳುತ್ತೀಯ ಸಾಖಿ, ಆ ಗೊರವನ ಹಳ್ಳಿಯ ದೈವದ ಕೋಲ ಮಾಡುವ ಬ್ಯಾರನ ಮನಸ್ಥಿತಿ. ಓಡಿಹೋಗಿ ಕೆಂಡದ ಹೊಂಡದಲ್ಲಿ ಬಿದ್ದು ಮೈಸುಟ್ಟುಕೊಂಡ ಹಾಗೆ ಅನುಭವ. ನೋಡುವವರ ಕಣ್ಣಿಗೆ ದೇವರಾಟ. ಅವನು ಹೇಳೋದೆಲ್ಲ ಸತ್ಯ. ದೇವರೇ ಅವನ ಒಡಲಲ್ಲಿ ನಿಂತು ಎಲ್ಲರ ಜೀವನದ ಬಗ್ಗೆ ನುಡಿದುಬಿಡುತ್ತದೆ ಎಂಬ ಭಾವನೆ ಹುಟ್ಟಿಸುವ ಹಾಗೆ. ಆದರೆ ಮುಂದಿನ ದಿನ ಅವನ ಗಾಯ ಬೊಬ್ಬೆ ಹೊಡೆದು ಕೊಂಡು, ಕೀವು ಕಟ್ಟಿದರೂ…”

Read More

ಶ್ರೀಧರ ಬಳಗಾರ ಕಥಾಲೋಕ: ಗುರುಗಣೇಶ ಭಟ್ ಡಬ್ಗುಳಿ ನಡೆಸಿದ ಸಂದರ್ಶನ

“ಚಿತ್ತಾಲರು ಹೇಳಿದ ಹಾಗೆ ಬರೆಯುತ್ತ ಬರೆಯುತ್ತ ಬೆರಗು ಪಡುತ್ತ ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಅರ್ಥ ಆಯಿತು ಅನುಭವ.. ಅರ್ಥ ಆಯಿತು ಆ ಪಾತ್ರ.. ಅರ್ಥ ಆಯಿತು ಜೀವನ.. ನಾ ಹೀಗೆ ಬರೆಯುತ್ತೇನೆ ಅಂತಲ್ಲ. ನಿಗೂಢವಾದ, ಸೃಜನಶೀಲವಾದ ಸ್ವಾಯತ್ತತೆಯಿಂದ ಕೂಡಿದ ಮತ್ತು ಸ್ವಯಂ ಆದ ಗುಣ ಬರವಣಿಗೆಗಿದೆ ಅಂದರೆ ನಮಗೇ ಒಮ್ಮೊಮ್ಮೆ ಅದು ಬೆರಗು ಉಂಟುಮಾಡಿ ವಿಷಯಾಂತರ ಮಾಡುತ್ತದೆ.”

Read More

ಏನು ಏನು ಜೇನು ಜೇನು: ಕೆ. ವಿ. ತಿರುಮಲೇಶ್ ಲೇಖನ

“ಚಿಕ್ಕಂದಿನಲ್ಲಿ ನಾನು ತೋಟದಲ್ಲಿ ಅಪರೂಪಕ್ಕೆ ಹೆಜ್ಜೇನಿನ ಗೂಡುಗಳನ್ನು ನೋಡಿದ್ದಿದೆ, ಆದರೆ ಅವುಗಳ ಜೇನನ್ನು ಇಳಿಸಬೇಕೆನ್ನುವ ವಿಚಾರ ಯಾರೂ ಮಾಡಿರಲಿಲ್ಲ. ಜನ ಹೆಜ್ಜೇನಿನ ತಂಟೆಗೆ ಹೋಗುತ್ತಿರಲಿಲ್ಲ ಎಂದು ಇದರರ್ಥ. ಇದರಿಂದ ಹೆಜ್ಜೇನಿಗೆ ಲಾಭವಾಯಿತೇ ಎಂದರೆ ಹೇಳುವುದು ಕಷ್ಟ. ಮನುಷ್ಯರ ಕೋನದಿಂದ ಜೇನಿನಲ್ಲಿ ಹೆಜ್ಜೇನು ‘ವೈಲ್ಡ್’, ಮನುಷ್ಯರ ಆಯ್ಕೆಗೆ ಒಳಗಾದುದಲ್ಲ. ಕೋಳಿಗಳಲ್ಲಿ ಕಾಡುಕೋಳಿ, ನಾಡುಕೋಳಿ ಇದ್ದಹಾಗೆ.”

Read More

ಭಾಷಾಂತರ ಪ್ರಕ್ರಿಯೆ ಮತ್ತು ವಿಜಯರಾಘವನ್ ಅನುವಾದ ಕಾವ್ಯ

“ಕಾಶ್ಮೀರಿ ಶೈವಪಂಥದ ಮೊದಲ ಕವಯಿತ್ರಿ ಲಲ್ಲಾದೇವಿಯ ವಾಕ್ ಗಳು ಕೂಡ ಕನ್ನಡದಲ್ಲಿ ಒಂದು ವಿಶಿಷ್ಟ ಬಗೆಯ ಭಾಷಾಂತರ ಪ್ರಯೋಗ. ಲಲ್ಲಾದೇವಿ ಕನ್ನಡಕ್ಕೆ ತುಂಬಾ ತಡವಾಗಿ ಪರಿಚಯವಾಗುತ್ತಿದ್ದಾಳೆ. ಲಲ್ಲಾದೇವಿಯ ವಾಕ್ ಗಳಿಗೂ ಕನ್ನಡದಲ್ಲಿ ರಚನೆಯಾಗಿರುವ ಶರಣರ ವಚನಗಳಿಗೂ ಅನೇಕ ವಿಧದಲ್ಲಿ ಸಾಮ್ಯತೆಗಳಿವೆ.”
ನರಸಿಂಹಮೂರ್ತಿ ಹಳೇಹಟ್ಟಿ ಲೇಖನ

Read More

ಜರ್ಕುಂ ಬುರ್ಕುಂ ಏನಜ್ಜೀ?: ಕೆ.ವಿ. ತಿರುಮಲೇಶ್ ಬರಹ

“ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ