Advertisement

Category: ಸರಣಿ

ಅಪರಾಧ ಮತ್ತು ಶಿಕ್ಷೆ: ಯಾರದ್ದು ಗೆಲುವು.. ನಂದೋ… ನಿಂದೋ?

“ರಾಸ್ಕೋಲ್ನಿಕೋವ್‌ನಲ್ಲಿ ಹುಟ್ಟಿದ ಅಸಹ್ಯದ ಭಾವ ಅವನ ಎಚ್ಚರದ ಮೇರೆಯನ್ನೂ ಮೀರಿ ಹರಿಯಿತು. ಅವನು ನಗು ನಿಲ್ಲಿಸಿದ. ಹುಬ್ಬು ಗಂಟಿಕ್ಕಿದ. ಪೋರ್ಫಿರಿಯನ್ನು ಬಹಳ ಹೊತ್ತು ದಿಟ್ಟಿಸಿದ. ಆ ನೋಟದಲ್ಲಿ ದ್ವೇಷವಿತ್ತು. ಕೊನೆಯೇ ಇರದ ಹಾಗೆ ಬೇಕೆಂದೇ ನಗು ಉಕ್ಕಿಸಿಕೊಳ್ಳುತ್ತಿದ್ದಷ್ಟೂ ಹೊತ್ತು ಅವನ ನೋಟ ಪೋರ್ಫಿರಿಯನ್ನು ಬಿಟ್ಟು ಕದಲಲಿಲ್ಲ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ

Read More

‘ಖಾನ್‌ ಕಾಂಪೌಂಡ್‌’ ಗೆ ರಫೀಕ್‌ ಖಾನ್‌ ಬರೆದ ಪ್ರಸ್ತಾವನೆ

ಧಾರವಾಡ ಘರಾನಾ ಶೈಲಿಯ ಸಂಗೀತ ಗಾರುಡಿಗ ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರ ಕುಟುಂಬದಲ್ಲಿ ಸಿತಾರ್ ಸಾಧಕರ ದಿಗ್ಗಜರ ಗಡಣವೇ ಇದೆ. ಸಿತಾರ್ ಮತ್ತು ಸಂಗೀತವನ್ನು ನಂಬಿದ ಈ ಕುಟುಂಬ ಸಾಗಿದ ದಾರಿಯ ಕುರಿತು ರಫೀಖ್ ಖಾನ್ ತಮ್ಮ ವಿಚಾರಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸಿದವರು ಲೇಖಕ ಶೇಣಿ ಮುರಳಿ. “ಖಾನ್ ಕಾಂಪೌಂಡ್’’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಈ ಪುಸ್ತಕದ ಕೆಲವು ಅಧ್ಯಾಯಗಳು ಓದುಗರಿಗೆ ಇಲ್ಲಿಲಭ್ಯವಾಗಲಿದೆ. “

Read More

ಸಿಂಗರನ ಬಾಲ್ಯಕಾಲದ ಕಥನ: ವಂಶವೃಕ್ಷ

“ಅಮ್ಮ ತನ್ನ ಭಾವಿ ವರನನ್ನು ಭೇಟಿಯಾದಾಗ ಪೂರ್ಣ ಕೆಂಪು ಗಡ್ಡದ ಈ ಮನುಷ್ಯನನ್ನು ನೋಡಿ ಮುಜುಗರವಾಗಿತ್ತಂತೆ. ಆದರೆ ಅವನು ಅವಳ ತಂದೆಯ ಜೊತೆಗಿನ ಧಾರ್ಮಿಕ ಪ್ರಶ್ನೆಗಳ ಚರ್ಚೆಯಿಂದಾಗಿ ಗೌರವದ ಜೊತೆಗೆ ಅವನನ್ನು ಮೆಚ್ಚಿಕೊಂಡಳಂತೆ. ನನಗೆ ಹೇಳಿದ್ದಳು ಅವಳಿಗಿಂತ ಐದು ವರ್ಷಕ್ಕೆ ದೊಡ್ಡವನಿದ್ದ ವರ ಸಿಕ್ಕಿದ್ದು ಸಂತಸವಾಗಿತ್ತು ಎಂದು. ಟೆಮರ್ಲ್ ಅಜ್ಜಿ ಅಮ್ಮನಿಗೆ ಧರಿಸಲು ಆಗದಂತಹ ತೂಕದ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಳು.”

Read More

ಶ್ರೀಧರನ ಮದುವೆ ಸುಸಂಪನ್ನವಾದ ಪರಿ

“ಇಂತಿಪ್ಪ ಸಜ್ಜನ ಕುಟುಂಬವನ್ನು ಹೀಗೆ ಪರಿಪರಿಯಾಗಿ ಗೋಳಾಡಿಸಿದ ಈ ಶ್ರೀಧರನು ಇನ್ನೇನು ಅನಾಹುತ ಮಾಡಿದನೋ ಎಂದು ಎದೆಬಡಿತ ಸಹಿಸುತ್ತಾ ಕೇಳುತ್ತಿದ್ದವರಿಗೆ ಕಡೇ ಪಾಯಿಂಟನ್ನು ಕಿರಿಸೊಸೆಯಾದ ರುಕ್ಮಿಣಿಯವರೇ ವಿವರಿಸಿದರು. “ನೋಡಿ, ಒಂದೇ ಒಂದು ದಿನಕ್ಕೂ ಇವರು ಕೈಕಾಲು ತೊಳೆದು ತಟ್ಟೆಯ ಮುಂದೆ ಕೂತದ್ದು ನಾನು ನೋಡ್ಲಿಲ್ಲ‌. ದರಿದ್ರವಾಗಿ ಎಲ್ಲಿದ್ದರೆ ಅಲ್ಲಿಂದಲೇಎದ್ದು ತಟ್ಟೆಗೆ ಕೈಯಿಡೋದು.
ಮಧುರಾಣಿ ಎಚ್. ಎಸ್. ಬರೆಯುವ ಮಠದ ಕೇರಿ..”

Read More

ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ʻದ ಲೈವ್ಸ್‌ ಆಫ್‌ ಅದರ್ಸ್ʼ ಸಿನಿಮಾ

“ವೀಸ್ಲರ್‌ ಸದಾ ಕಾಲ ತನ್ನ ಬೆನ್ನ ಹಿಂದೆಯೇ ಇದ್ದಾನೆ ಎನ್ನುವುದನ್ನು ಅರಿಯದ ಡ್ರೇಮನ್ ನಾಟಕ ರಚಿಸುವ ಸಲುವಾಗಿ ಅದರ ವಸ್ತುವನ್ನು ಕುರಿತಂತೆ ತನ್ನ ಸಹಪಾಠಿಗಳೊಂದಿಗೆ ಚರ್ಚಿಸುತ್ತಿರುತ್ತಾನೆ. ಆದರೆ ವೀಸ್ಲರ್‌ನ ದೃಷ್ಟಿಯಲ್ಲಿ ಡ್ರೇಮನ್‌ ಮಾಡುತ್ತಿರುವುದು ಹೆಸರಿಗೆ ಮಾತ್ರ. ಅವನ ಮೂಲ ಉದ್ದೇಶವೇ ಬೇರೆ ಎಂದು ಸಂದೇಹ. ಈಸ್ಟ್ ಜರ್ಮನ್ ಸಂಗತಿಗಳನ್ನು ಪಾಶ್ಚ್ಯಾತ್ಯ ದೇಶಗಳಿಗೆ ತಿಳಿಸುವ ಉದ್ದೇಶವಿದೆ ಎಂದು ವೀಸ್ಲರ್ ಗೆ ಗುಮಾನಿ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ