Advertisement

Category: ಸರಣಿ

ಶಹಬ್ಬಾಸ್‌ಗಿರಿ ಎಂಬ ಕಲಿಕಾ ಅಸ್ತ್ರ: ಅನುಸೂಯ ಯತೀಶ್ ಸರಣಿ

ಮೆಚ್ಚುಗೆಯ ಮಾಯಾದಂಡಕ್ಕೆ ಅತಿ ಹೆಚ್ಚಿನ ಮಹತ್ವ ಇರುತ್ತದೆ. ನಮಗೆ ತರಬೇತಿ ನೀಡುವಾಗಲು ಇದೆ ಅಂಶಗಳನ್ನು ಹೇಳಲಾಗುತ್ತದೆ‌. ಹೊಗಳಿಕೆಯಿಂದ ಲಾಭವೇ ಆಗುತ್ತದೆ. ಒಂದು ವೇಳೆ ಲಾಭವಾಗದಿದ್ದರೂ ಪರವಾಗಿಲ್ಲ ಈ ದಂಡವನ್ನ ಪದೇ ಪದೇ ಪ್ರಯೋಗಿಸಿ ಕಲಿಕೆಗೆ ಹುರಿದುಂಬಿಸಬೇಕು ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಸರಳತೆಯಲ್ಲಿ ಬೆಳಗುವ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ತ್ರಾನ್ಸ್‌ತ್ರೋಮೆರ್-ರನ್ನು ಓದಲು ಅತ್ಯುತ್ತಮ ಸಮಯವೆಂದರೆ ರಾತ್ರಿ, ಮೌನವಿರಬೇಕು ಮತ್ತು ಒಂಟಿಯಾಗಿರಬೇಕು; ತ್ರಾನ್ಸ್‌ತ್ರೋಮೆರ್-ರನ್ನು ಓದುವುದೆಂದರೆ ನಂಬಲಸಾಧ್ಯವಾದುದಕ್ಕೆ ಶರಣಾಗುವುದು. ಹಾಸಿಗೆಯಿಂದ ಎದ್ದು ಮನೆ ಏನು ಹೇಳುತ್ತಿದೆ ಮತ್ತು ಹೊರಗೆ ಗಾಳಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಲಿಸುವುದು. ಅವರ ಪ್ರತಿಯೊಬ್ಬ ಓದುಗ ಅವರನ್ನು ತನ್ನ ಖಾಸಗಿ ರಹಸ್ಯವಾಗಿ ಓದುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಎಲ್ಲರಂಥವನಲ್ಲ ನನ್ನಪ್ಪ..: ಗುರುಪ್ರಸಾದ ಕುರ್ತಕೋಟಿ ಸರಣಿ

ಅಂತೂ ಇಂತೂ ಟಿಕೆಟ್‌ಗಳು ಆಗಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ಭಾರವಾದ ಮನಸ್ಸಿನಿಂದ ಭಾರತಕ್ಕೆ ಪಯಣ ಬೆಳೆಸಿದೆವು. ದೇವರು ನೀಡುವ ಈ ಅನಿರೀಕ್ಷಿತ ತಿರುವುಗಳಿಗೆ ಯಾರೂ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಬೆಂಗಳೂರಿಗೆ ನಾವೆಲ್ಲ ಬಂದು ಇಳಿದಾಗ, ನನ್ನ ಮಾವ ತೀರಿಕೊಂಡು ನಾಲ್ಕು ದಿನಗಳು ಆಗಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾರನೆಯ ಬರಹ

Read More

ಕೊಡೆ…. ಕೊಡೆ … ಎಲ್ನೋಡಿ ಕೊಡೆ: ಸುಮಾವೀಣಾ ಸರಣಿ

ಆಗಷ್ಟೆ ಒಗೆದು ಹಿಂಡಿದ ಬಟ್ಟೆ ಹಾಕಿದರೆ ನೀರಿನ ಅಂಶ ಹಬೆಯಾಗಿ ಸುರುಳಿ ಸುರುಳಿಯಾಗಿ ಹೋಗುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಶಾಖ ಹೆಚ್ಚಾಗಿ ಬಟ್ಟೆಯ ಒಂದು ಬದಿ ತುಕ್ಕುಹಿಡಿದ ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು ….. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಬಟ್ಟೆಯನ್ನು ಜೋಪಾನವಾಗಿ ಒಣಗಿಸಿ ತೆಗೆದಿಡುವುದೆ ಹೆಚ್ಚಿನ ಕೆಲಸವಾಗಿರುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ

Read More

ಪ್ರಾರಂಭಿಕ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಮಲ್ಲಾಡಿಹಳ್ಳಿಯ ಇಂಗ್ಲೀಷ್ ಮೀಡಿಯಂಗೆ ಸೀಟು ಸಿಕ್ಕಿದೆ ಎಂಬ ಪೋಸ್ಟ್ ಕಾರ್ಡ್ ಮನೆಗೆ ತಲುಪಿದಾಗ ನಾನು ಸಿಕ್ಕಾ ಪಟ್ಟೆ ಖುಷಿಯಾಗಿದ್ದೆ. ಮುಂದೆ ಬರಬಹುದಾದ ಹಾಸ್ಟೆಲ್ಲಿನ ಕಷ್ಟದ ದಿನಗಳ ಅರಿವು ನನಗಿರಲಿಲ್ಲವಾದ್ದರಿಂದ ನಾನು ಹಾಸ್ಟೆಲ್ ಸೇರೋಕೆ ಉತ್ಸುಕನಾಗಿದ್ದೆ. ಮಲ್ಲಾಡಿಹಳ್ಳೀಗೆ ಅಡ್ಮಿಷನ್‌ಗೆ ಹೋದಾಗ ಅಲ್ಲಿಗೆ ದಾಖಲಾಗಲು ಬಂದ ಅಪ್ಲಿಕೇಷನ್‌ಗಳಲ್ಲಿ ಅತೀ ಹೆಚ್ಚಿನ ಅಂಕಗಳು ನನ್ನವೇ ಇದ್ದುದ್ದರಿಂದ ಅಲ್ಲಿಯ ಮೇಷ್ಟ್ರು ನನ್ನನ್ನು ವಿಚಿತ್ರವಾಗಿ ನೋಡಿದರು. ಕಾರಣವಿಷ್ಟೇ…
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ