Advertisement

Category: ವಾರದ ಕಥೆ

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ: ಸಂವಾದಿ

“ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `”

Read More

ಎ.ಎನ್. ಪ್ರಸನ್ನ ಬರೆದ ಈ ಭಾನುವಾರದ ಕತೆ

“ರಂಗಸ್ವಾಮಿ ಅಭ್ಯಾಸಬಲದಂತೆ ಬೆಳಿಗ್ಗೆ ಆರಕ್ಕೆ ಕಣ್ಣು ಬಿಟ್ಟ ನಂತರ ಎಲ್ಲ ಕೆಲಸಗಳನ್ನು ವಿಶ್ವನಾಥ-ರಾಗಿಣಿ ಹಂಚಿಕೊಂಡಿದ್ದರು. ಅವರ ಚಲನೆಗೆ ವೀಲ್ ಚೇರ್ ನ ಅನಿವಾರ್ಯತೆಯಿತ್ತು. ಹಾಸಿಗೆಯಿಂದ ಏಳಿಸುವುದು, ಹಲ್ಲುಜ್ಜಿಸುವುದು, ಟಾಯ್ಲೆಟ್ ಇತ್ಯಾದಿ. ಅವರು ಮಾಡುವ ಪ್ರಯತ್ನಕ್ಕೆ ರಂಗಸ್ವಾಮಿಯವರ ಸಹಕಾರವಷ್ಟೇ.. “

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಗೋಪಾಲಕೃಷ್ಣ ಪೈ ಬರೆದ ಕಥೆ

“ವೆಂಕು ಹೆಂಗ್ಸಿಗೆ ತನಗಾಗದ ಮಂದಿ ಯಾರೆಂದು ಊಹಿಸುವುದು ಸುಲಭವಾಗಿತ್ತು. ಅವರುಗಳು ಆಗಾಗ ಆ ಹೋಟೇಲಿಗೆ ಬರುವುದು ಕ್ರಮ. ಬರುವುದು ಕತ್ತಲಾದ ಮೇಲೆಯೇ. ಒಂದು ದೋಸೆ ತಿಂದು ಬೇಕೆಂದೇ ಆ ಗಂಡನಿಲ್ಲದವಳೊಡನೆ ಮಾತು ತೆಗೆಯುವುದು ರೂಢಿ. ಹೆಣ್ಣು ಹಸಿದಿದ್ದಾಳೆಂದು ವಾಸನೆ ಹಿಡಿಯುವ ಬೀಜದ ಹೋರಿಗಳವು.”

Read More

ಪ್ರಜ್ಞಾ ಮತ್ತಿಹಳ್ಳಿ ಬರೆದ ಈ ವಾರದ ಕಥೆ “ಸೈಡ್ ವಿಂಗ್”

“ಮೂರನೆಯ ಮಹಡಿಯ ಮೇಲಿನ ಮನೆ ಬಾಗಿಲ ಕರೆಗಂಟೆಯೊತ್ತಿ ನಿಂತಾಗಲೂ ಪಾರಿಜಾತಾಳ ಎದೆಬಡಿತ ನಿಂತಿರಲಿಲ್ಲ. ಅದ್ಯಾರದ್ದೊ ಜೊತೆಗೆ ಬೇರೆ ಇರುತ್ತಾಳಂತಲ್ಲ, ಅವನೂ ಈಗ ಅಲ್ಲೇ ಇದ್ದಾನೋ ಏನೋ, ಹಾಗಿದ್ದರೆ ತುಂಬಾ ಮುಜುಗರವೇ ಸರಿ, ಪರಪುರುಷನನ್ನು ಇಷ್ಟಪಡುವಂಥ ಬುದ್ಧಿ ಈ ತುಳಸಿಗಾದರೂ ಯಾಕೆ ಬಂತಪ್ಪ ಎಂದುಕೊಳ್ಳುತ್ತಲೇ ನಿಂತಿದ್ದಳು. …”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ವ್ಯಾಸರಾವ್ ನಿಂಜೂರು ಬರೆದ ಕಥೆ

“ನರ್ಸಪ್ಪಯ್ಯ ಹಳೆಯ ಫೆವರ್ಲೂಬಾ ಅಲಾರಾಮ್ ಗಡಿಯಾರ ನೋಡುತ್ತಾರೆ, ನಾಲ್ಕು ಗಂಟೆ ಹತ್ತು ನಿಮಿಷ ತೋರಿಸುತ್ತಿತ್ತದು. ತಾನು ಎದ್ದಾಗಲೂ ಅದು ಅದೇ ಟೈಮ್ ತೋರಿಸುತ್ತಿದ್ದುದ್ದು ನೆನಪಾಗಿ, ಹಿಂದಣ ದಿನ ಸಂಜೆಯೇ ಅದು ನಿದ್ರಾಪರವಶವಾಗಿದೆ ಎಂದೂ, ತಾನು ಕೀ ಕೊಡಲು ಮರೆತು ಹೋಗಿದ್ದೂ ನೆನಪಾಗಿ ಒಲೆಗಳ ಕಟ್ಟಿಗೆ ಹಿಂದೆ ಮಾಡಿ ಗ್ಯಾಸ್ ಲೈಟ್ ಆರಿಸಿ ತಗಣೆಗಳ ಸೈನ್ಯವಿರುವ ಬೆಂಚಿಗೆ ತನ್ನ ಬೆನ್ನು ಬಲಿಕೊಟ್ಟರು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ