Advertisement

Category: ವಾರದ ಕಥೆ

ಎನ್.ಸಿ. ಮಹೇಶ್‌ ಬರೆದ ಈ ಭಾನುವಾರದ ಕಥೆ “ಅಥವಾ…”

“ಆಚಾರಿಯ ಜೇಬನ್ನ ಹಣ ಅಷ್ಟೊಂದು ತುಂಬಿಕೊಳ್ಳುತ್ತಿರುವುದು ಹೇಗೆ ಎಂದು ರುದ್ರಯ್ಯ ತನ್ನ ಶರ್ಟ್ ಜೇಬಿನಲ್ಲಿರುವ ಚಿಲ್ಲರೆ ತಡಕುವಾಗ ಕೇಳಿಕೊಂಡ. ಅರಿಶಿನದ ಹಾಲು ವರ್ಕ್ ಆಗದಿದ್ದರೂ ರಮ್ ಬೆಳಗ್ಗೆವರೆಗೂ ಕೈ ಕೊಡುವುದಿಲ್ಲ ಅನಿಸಿ ದುಡ್ಡಿನ ಲೆಕ್ಕಾಚಾರ ಹಾಕುತ್ತಿದ್ದ ವೇಳೆ ಆಚಾರಿಯ ಉಬ್ಬಿದ ಜೇಬು ಮತ್ತೆ ನೆನಪಾಗಿತ್ತು. ಮಗನಿಗೆ ಗೊತ್ತಾಗದಂತೆ ಚೂರುಪಾರು ಉಳಿಸಿ ಬ್ಯಾಂಕಲ್ಲಿ ಇಟ್ಟಿರುವ ಹಣ ತೆಗೆದರೆ ಅದು ಹೇಗೆ…”

Read More

ಸರಿತಾ ನವಲಿ ಬರೆದ ಈ ಭಾನುವಾರದ ಕಥೆ “ಅಂದ-ಛಂದವಿಲ್ಲದ ಗೊಂಬಿ”

“ಜ್ವರದ ತಾಪದಿಂದ ನರಳುತ್ತಿದ್ದ ಅವ್ವಕ್ಕಗ ಹಣಿ ಮ್ಯಾಲೆ ತಣ್ಣೀರಿನ ಪಟ್ಟಿ ಹಾಕಿದ್ರಾತು ಅಂತ ಹಳೇ ಬಟ್ಟಿ ತುಂಡನ್ನು ಹುಡುಕಲು ಕಪಾಟಿನಲ್ಲಿ ತಡಕಾಡಿದ ಗಂಗವ್ವಜ್ಜಿಯ ಕೈಗೆ ಹೋದವರ್ಷ ಪಂಚಮಿಹಬ್ಬಕ್ಕಂತ ಹೊಲಿಸಿದ ಅವ್ವಕ್ಕನ ಲಂಗ ಸಿಕ್ಕಿತು. ಒಂದೆರಡೇ ಸಲ ಹಾಕಿಕೊಂಡಿದ್ದ ಲಂಗದ ಒಂದು ಭಾಗವನ್ನು ಕತ್ತರಿಯಿಂದ ಕತ್ತರಿಸಿದ್ದು ಕಂಡು ಗಂಗವ್ವಜ್ಜಿಯ ಎದಿ ಧಸಕ್ಕೆಂದಿತು. ಎಪ್ಪತ್ತು ವರ್ಷ ವಯಸ್ಸಿನ ಅನುಭವಿ ಮುದುಕಿ ಗಂಗವ್ವಗ ಏನೋ ಅನುಮಾನ ಬಂದು…”

Read More

ಪ್ರಕಾಶ್ ಪೊನ್ನಾಚಿ ಬರೆದ ಈ ವಾರದ ಕಥೆ “ಪರಿಧಿ”

“ಬೆಳಗೆದ್ದರೆ ಯುಗಾದಿ ಹಬ್ಬ, ಊರಲ್ಲೆಲ್ಲಾ ಎತ್ತುಗಳನ್ನ ಸಿಂಗರಿಸಿ ನೇಗಿಲು ನೊಗವನ್ನೆಲ್ಲಾ ಸ್ವಚ್ಚಗೊಳಿಸಿ ಭೂಮಿ ತಾಯಿಗೆ ಒಂದೆರಡು ಸುತ್ತು ಉಳುಮೆ ಮಾಡಿ ಪೂಜೆ ಸಲ್ಲಿಸಿ ಆ ವರ್ಷದ ವ್ಯವಸಾಯಕ್ಕೆ ಪಾದಾರ್ಪಣೆಗೆ ಅಡಿಗಲ್ಲು ಹಾಕುವುದು ಮಾಮೂಲು. ಅಪ್ಪ ಎಂದಿನಂತೆ ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಹೊನ್ನೇರು ಕಟ್ಟಲು ಅಣಿ ಮಾಡುತ್ತಿದ್ದರು. ನಾನು, ಅಕ್ಕ ಹೂ, ವಿಭೂತಿ, ನೀರುಗಳನ್ನು ಹಿಡಿದು ಅಪ್ಪನ ಪೂಜೆ, ಮೊದಲ ಏರಿನ ಸುತ್ತು ನೋಡಲು ಕಾತುರದಿಂದ ಅಪ್ಪನ ..”

Read More

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ: ಸಂವಾದಿ

“ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `”

Read More

ಎ.ಎನ್. ಪ್ರಸನ್ನ ಬರೆದ ಈ ಭಾನುವಾರದ ಕತೆ

“ರಂಗಸ್ವಾಮಿ ಅಭ್ಯಾಸಬಲದಂತೆ ಬೆಳಿಗ್ಗೆ ಆರಕ್ಕೆ ಕಣ್ಣು ಬಿಟ್ಟ ನಂತರ ಎಲ್ಲ ಕೆಲಸಗಳನ್ನು ವಿಶ್ವನಾಥ-ರಾಗಿಣಿ ಹಂಚಿಕೊಂಡಿದ್ದರು. ಅವರ ಚಲನೆಗೆ ವೀಲ್ ಚೇರ್ ನ ಅನಿವಾರ್ಯತೆಯಿತ್ತು. ಹಾಸಿಗೆಯಿಂದ ಏಳಿಸುವುದು, ಹಲ್ಲುಜ್ಜಿಸುವುದು, ಟಾಯ್ಲೆಟ್ ಇತ್ಯಾದಿ. ಅವರು ಮಾಡುವ ಪ್ರಯತ್ನಕ್ಕೆ ರಂಗಸ್ವಾಮಿಯವರ ಸಹಕಾರವಷ್ಟೇ.. “

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ