Advertisement

Category: ಪುಸ್ತಕ ಸಂಪಿಗೆ

ಸೇವೆಯಲ್ಲಿ ಜೀವ ಸವೆಸುವ ಜೀವಗಳು…: ದೇವಿಕಾ ನಾಗೇಶ್‌ ಬರಹ

ಪ್ರತಿಯೊಂದು ಜೀವಿ ತನ್ನ ಅಸ್ತಿತ್ವದಿಂದ ವಿಶೇಷ ಅನ್ನಿಸಿಕೊಳ್ಳುವುದು ತಾನು ಮಾಡುವ ಸೇವೆಯಿಂದ ಎಂದು ನಂಬಿ ನಡೆಯುವ ಈ ಸನ್ಯಾಸಿನಿಯರು ಜಗತ್ತಿನ ಪಾಪ ತುಳಿಯುವ ಕಾಯಕ ತಮ್ಮದು ಎಂದು ನಂಬಿದವರು. ಹಾಗೆ ನೋಡಿದರೆ ಲಲ್ಲೇಶ್ವರಿ, ಅಕ್ಕಮಹಾದೇವಿ, ಮೀರಾ, ಸೂಫಿ ಸಂತ ಮಹಿಳೆಯರಾದ ಉಲೇಮ ರಬಿಯ ನಫೀಜಾ ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳಿಗೆ ಮುಖಾಮುಖಿಯಾಗುತ್ತಲೇ ಜನ ಜೀವನದ ಸಂಕಷ್ಟಗಳಿಗೆ ಸ್ಪಂದಿಸುತ್ತ ಸಾಧನೆಯ ಪಥದಲ್ಲಿ ಮುನ್ನಡೆದವರು.
ಬಿ.ಎಂ. ರೋಹಿಣಿ ಹಾಗೂ ಮೋಲಿ ಮಿರಾಂದ ಬರೆದ “ಧರ್ಮ ಭಗಿನಿಯರು” ಕೃತಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ಪ್ರಯಾಣ-ಪ್ರವಾಸದಲ್ಲಿ ಓದಬೇಕೆ?: ಕೆ. ಸತ್ಯನಾರಾಯಣ ಹೊಸ ಕೃತಿಯ ಒಂದು ಬರಹ

ಪ್ರವಾಸ-ಪ್ರಯಾಣದಲ್ಲಿ ಸಹಪ್ರಯಾಣಿಕರು ನಮ್ಮ ಓದಿನ ರೀತಿಯನ್ನು ಪ್ರಭಾವಿಸುತ್ತಾರೆ. ಅಲ್ಲದೆ, ಪ್ರವಾಸ-ಪ್ರಯಾಣದ ಉದ್ದೇಶ, ಓದುವುದೇನಲ್ಲ. ರೈಲಿನಲ್ಲಾಗಲಿ, ವಿಮಾನದಲ್ಲಾಗಲಿ ನಿಮಗೆ ಊಟಕ್ಕೆ, ನಿದ್ದೆಗೆ, ಶೌಚಕ್ಕೆ ವ್ಯವಸ್ಥೆ, ಅನುಕೂಲ ಮಾಡಿಕೊಡಬಹುದೇ ಹೊರತು ಓದಿಗಲ್ಲ. ನೀವು ಓದುವುದರಿಂದ ಎಷ್ಟೋ ಸಲ ಸಹಪ್ರಯಾಣಿಕರಿಗೆ ತೊಂದರೆಯೂ ಆಗಬಹುದು. ನಿಮ್ಮನ್ನು ಒಬ್ಬ ವಿಚಿತ್ರ ಪ್ರಾಣಿಯೆಂದು ಕೂಡ ಪರಿಗಣಿಸಬಹುದು.
ಕತೆಗಾರ ಕೆ. ಸತ್ಯನಾರಾಯಣ ಬರೆದ “ಓದುವವರೆಲ್ಲ ಓದುಗರೆಲ್ಲ-ಹಾಗಾದರೆ?” ಹೊಸ ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಬೇರಿನಿಂದ ಬೆಳಕಿಗೆ: ಮಿತ್ರಾ ವೆಂಕಟ್ರಾಜ ಅನುವಾದಿತ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

‘ಒಂದು ಪುರಾತನ ನೆಲದಲ್ಲಿʼ ಕೃತಿ ಭಾರತ ಮತ್ತು ಈಜಿಪ್ಟ್‌ನಂತಹ ಎರಡು ಪುರಾತನ ನೆಲದ ಸಂಸ್ಕೃತಿಯ ತಾಯಿ ಬೇರುಗಳ ಸಂಶೋಧನೆಯ ಅತ್ಯುನ್ನತ ದಾಖಲೆಯಾಗಿದೆ. ಕಳೆದ ಆರು ಶತಮಾನಗಳಿಂದ ವಿಸ್ಮೃತಿಯೆಡೆಗೆ ದಾಪುಗಾಲಿಡುತ್ತಿರುವ ಕಡಲ ತೀರದ ಕೆಲವು ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿನ, ಜನಜೀವನದ, ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣವನ್ನು ಪಾತ್ರಗಳ ಮೂಲಕ ಕಟ್ಟಿಕೊಡುವ ಇಲ್ಲಿನ ಕ್ರಮ ವಿನೂತನವಾಗಿದೆ.
ಹಿರಿಯ ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್ ಅನುವಾದಿಸಿರುವ ‘ಒಂದು ಪುರಾತನ ನೆಲದಲ್ಲಿʼ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ವೈದ್ಯರ ಬದುಕಿನ ಪಡಿಪಾಟಲ ಕನ್ನಡಿ: ಕೊಟ್ರೇಶ್ ಅರಸೀಕೆರೆ ಬರಹ

ಇಡೀ ಕಾದಂಬರಿ, ಒಬ್ಬ ಪ್ರಾಮಾಣಿಕ ವೈದ್ಯ ದೇಶ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿದ್ದಾಗಲೂ ಹೇಗೆ ಭ್ರಷ್ಟ ವ್ಯವಸ್ಥೆಗೆ ಬಲಿಯಾಗುತ್ತಾನೆ ಎನ್ನುವ ಕರಾಳ ಕಥನ. ಕೋವಿಡ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆ ಮೇಲೆ ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಶ್ರೀ ಸಾಮಾನ್ಯನ ಎಲ್ಲ ಆರೋಪಗಳೂ ಸತ್ಯವೆಂದು ಬಿಂಬಿಸುತ್ತದೆ. ವೈದ್ಯಕೀಯ ವ್ಯವಸ್ಥೆಯ ಭ್ರಷ್ಟತೆ ಹೇಗೆ ಲಕ್ಷಾಂತರ ಜನರ ಜೀವನ, ಜೀವದ ಜತೆ ಆಟವಾಡಿದ ಕರಾಳ ಕಥೆಯೇ ಈ ಕಾದಂಬರಿ.
ಡಾ. ಲಕ್ಷ್ಮಣ ವಿ.ಎ. ಕಾದಂಬರಿ ‘ಪಿ. ಎಚ್. ಸಿ ಕವಲುಗುಡ್ಡ’ ಕುರಿತು ಕೊಟ್ರೇಶ್ ಅರಸೀಕೆರೆ ಬರಹ

Read More

ಆವರಣ ಭಂಗ ಮಾಡಿಸುವ “ಪರಿಸರದ ಒಡನಾಟ”: ನಾರಾಯಣ ಯಾಜಿ ಬರಹ

ಯಾವುದೋ ಕಾಲದಲ್ಲಿ ‘ಮುದ್ದಳ’ ಎನ್ನುವ ಸಾಮಂತನಾಳಿದ ಈ ಊರಿನಲ್ಲಿ ಆತನ ನೆನಪು ಮರೆಯಾಗಿದೆ. ಆತನ ಅರಮನೆ ಇದೆ ಎನ್ನುವ ಜಾಗ ಅಸ್ಪಷ್ಟವಾಗಿ ಇದೆ. ಹಳ್ಳಿಗರ ಭಿತ್ತಿಯಲ್ಲಿ ಮಾಸಲು ತೊಡಗಿರುವ ಆ ಗುತ್ತುಗಳ ವಿಚಾರವನ್ನು ಹೇಳುತ್ತಲೇ, ತನ್ನ ಬಾಲ್ಯದ ಪರಿಸರದಲ್ಲಿ ಇದೀಗ ಮರೆಯಾಗುತ್ತಿರುವ ಹಳೆಯ ಕಾಡು, ಕರಡ ಹುಲ್ಲಿನ ಬೇಣ, ಒಳ್ಳೆ ಹಾವು, ವಿಷದ ಹಾವುಗಳೊಡನೆಯ ಬದುಕೆಲ್ಲವನ್ನೂ ಆಧುನಿಕ ಬದುಕು, ನಿಧಾನಕ್ಕೆ ಕಸಿಯತೊಡಗಿವೆ ಎನ್ನುವ ನೋವನ್ನು ಪರೋಕ್ಷವಾಗಿ ಲೇಖಕರು ತೋಡಿಕೊಳ್ಳುತ್ತಿದ್ದಾರೆ.
ಶಶಿಧರ ಹಾಲಾಡಿಯವರ “ಪರಿಸರದ ಒಡನಾಟ”ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ