Advertisement

Category: ಪುಸ್ತಕ ಸಂಪಿಗೆ

“ತೇರ ನಡುವಿನ ಮೌನ”: ವಿದ್ಯಾ ಭರತನಹಳ್ಳಿ ಕೃತಿಗೆ ಕಮಲಾಕರ ಕಡವೆ ಮುನ್ನುಡಿ

ಆರೋಪಿತ ಮೌನದಿಂದ ಸ್ವಯಂ ಅಭಿವ್ಯಕ್ತಿಗೆ ಹೊರಳುವ ಈ ಚಲನೆ ಸಂಕಲನದ ಕಾವ್ಯಾತ್ಮಕ ಸಾಧನೆಗಳಲ್ಲಿ ಒಂದಾಗಿದೆ. ವಿಶೇಷವೆಂದರೆ, ಪ್ರತಿರೋಧವನ್ನು ನಾಟಕೀಯಗೊಳಿಸುವುದನ್ನು ನಿರಾಕರಿಸಿದರೂ, ಜೋರಾಗಿ ಹೇಳದೆಯೂ, ಜೀವಂತಿಕೆಯ ಸಹಜ ಚಟುವಟಿಕೆಗಳ ಮೂಲಕವೇ ಪ್ರತಿರೋಧವನ್ನು ದಾಖಲಿಸುವ, ಹಾಗೆಯೇ ಸೂಚಿಸುವ ಪರಿ ಇದಾಗಿದೆ.
ವಿದ್ಯಾ ಭರತನಹಳ್ಳಿ ಕವನ ಸಂಕಲನ “ತೇರ ನಡುವಿನ ಮೌನ” ಕೃತಿಗೆ ಕಮಲಾಕರ ಕಡವೆ ಮುನ್ನುಡಿ

Read More

ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್.‌ ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ

ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು. ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಗೆಯವರೆಗೂ ಬಂದು, ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ.
ವೈ.ಎಸ್.‌ ಹರಗಿ ಕಾದಂಬರಿ “ಇಮಾಮ್ ಸಾಹೇಬರ ಕುದುರೆ” ಕುರಿತು ಸಂಗೀತ ರವಿರಾಜ್, ಚೆಂಬು ಬರಹ

Read More

ಒಲವಿನ ದೀಪ ಎಲ್ಲಿ ಹಚ್ಚಲಿ?: ಮಧು ಬಿರಾದಾರ ಕೃತಿಯ ಕುರಿತು ಶೋಭಾ ನಾಯಕ ಬರಹ

‘ವಿಶಿಷ್ಟ ಪದ ರಚನೆಯೇ ರೀತಿ’ ಎಂದು ವಾಮನ ಅಭಿಮತ ಪಡುವುದನ್ನು ಇಲ್ಲಿ ಉಲ್ಲೇಖಿಸುತ್ತಲೇ ಮಧು ಬಿರಾದಾರ ಅವರ ‘ದೊರೆ ನೆತ್ತಿ ಗರುಡ’ ಕವನ ಸಂಕಲನದಲ್ಲಿನ ವಿಶಿಷ್ಟ ಪದ ರಚನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಉತ್ತರ ಕರ್ನಾಟಕದ ಬಿರುಸಾದ ಭಾಷೆ, ಉಕ್ತಿ ಹಾಗೂ ಶೈಲಿ ಅವರ ಕವನಗಳಲ್ಲಿ ವಿಶಿಷ್ಟವಾಗಿ ಕಾಣುತ್ತೇವೆ. ಪೂರ್ಣ ಪ್ರಮಾಣದಲ್ಲಿ ಅದೇ ಭಾಷೆಯನ್ನು ಬಳಸಿದರೆ ರಾಜ್ಯದ ಉಳಿದ ಭಾಗಗಳಲ್ಲಿ ಅರ್ಥವಾಗದೇ ಹೋಗುವ ಸಾಧ್ಯತೆಗಳ ಎಚ್ಚರಿಕೆಯಲ್ಲಿಯೇ ಮಧು ಹಿತವಾಗಿ-ಮಿತವಾಗಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಮಾತ್ರ ಬಳಸಿ ಕವಿತೆಗಳಿಗೆ ಒಂದು ಹದ ತಂದಿರುವುದನ್ನು ಕಾಣಬಹುದು. ‘ದರಿಯಾಗ್ ಯಾನ್ ನಡ್ಡಾದ್’ ಕವಿತೆಯಂತೂ ಪೂರ್ಣವಾಗಿ ಭಾಷಾ ಪ್ರಯೋಗಕ್ಕೆ ಒಳಗೊಂಡಿರುವುದನ್ನು ನೋಡಬಹುದು.
ಮಧು ಬಿರಾದಾರ ಕವನ ಸಂಕಲನ “ದೊರೆ ನೆತ್ತಿ ಗರುಡ” ಕುರಿತು ಶೋಭಾ ನಾಯಕ ಬರಹ

Read More

ಸಿವಿ ಕವಿತೆಗಳು- ಅಪೂರ್ಣ ಹಾಡಿನ ಆತ್ಮವಿಳಾಸ: ಸಿವಿ ರಾಘವೇಂದ್ರ ಕೃತಿಗೆ ವಿಕಾಸ್ ನೇಗಿಲೋಣಿ ಮುನ್ನುಡಿ

ಸದಾ ಕವಿತೆಯ ಗುಂಗಲ್ಲೇ ಇರುವಂತೆ ಕಾಣುವ ಸ್ನೇಹಿತ ಸಿವಿ ರಾಘವೇಂದ್ರ, ಸಂಕಲನ ತರುತ್ತಿರುವುದು ತಡವಾದರೂ ಈಗಾಗಲೇ ಬಿಡಿಬಿಡಿಯಾಗಿ ಬಹಳ ವರ್ಷಗಳಿಂದ ಕವಿತೆಯನ್ನಷ್ಟೇ ನಿರಂತರವಾಗಿ ಬರೆಯುತ್ತಿರುವ ಬರಹಗಾರ. ಆ ಮಟ್ಟಿಗೆ ಅವರು ಏಕಪ್ರಕಾರ ವ್ರತಸ್ಥ. ಕಿರುತೆರೆಯಲ್ಲಿ ಕೆಲ ವರ್ಷಗಳ ಕಾಲ ದುಡಿಮೆ ಮಾಡಿದರೂ ಸಿನಿಮಾ ಹಾಡುಗಳ ಬಗ್ಗೆ ಮೋಹ, ಸದಾ ಏನನ್ನೋ ಧ್ಯಾನಿಸುತ್ತಿದ್ದಾರೇನೋ ಅನ್ನುವ ಗಾಢ ಮೌನ, ಕಡುವಿಷಾದ- ಇವೆಲ್ಲವೂ ರಾಘವೇಂದ್ರ ಅವರ ಅಂತರಂಗದ ಬಯೋಡಾಟಾ. ತಮ್ಮ ಕವಿತೆಗಳಲ್ಲಿ ಆ ಕ್ಷಣವನ್ನು ಹಿಡಿಯುವುದರಲ್ಲಿ ಅವರು ನಿಸ್ಸೀಮ.
ರಾಘವೇಂದ್ರ ಸಿ.ವಿ. ಕವನ ಸಂಕಲನ “ದೇವರ ಬಿಕ್ಕಳಿಕೆಗಳು” ವಿಕಾಸ್ ನೇಗಿಲೋಣಿ ಮುನ್ನುಡಿ

Read More

ಪ್ರಕೃತಿ ದೇವಿಗೆ ಮೊದಲ ನಮನ: ದೇವಿಕಾ ನಾಗೇಶ್‌ ಬರಹ

ಪ್ರಕೃತಿಯ ಪುನರುತ್ಪತ್ತಿ ಕ್ರಿಯೆಯನ್ನು ಬಲ್ಲ ಹಿರಿಯರಿಗೆ ಪ್ರಕೃತಿಯ ಅಗಾಧತೆಯ ಅರಿವು ಇರುತ್ತದೆ. ಆದ್ದರಿಂದಲೇ ಅವರಲ್ಲಿ ವಿನೀತ ಭಾವ ಕಾಣಿಸಿಕೊಳ್ಳುತ್ತದೆ… ಇದು ದೈವೀಕತೆಯಲ್ಲದೆ ಮತ್ತೇನಲ್ಲ. ಕೃಷಿ ಚಟುವಟಿಕೆಗಳಲ್ಲಿ ಒಂದು ಧ್ಯಾನಸ್ಥ ಸ್ಥಿತಿಯಿದೆ. ಅದು ಯಾವ ಬಿರುದು ಬಾವಲಿಯನ್ನು ಬಯಸುವುದಿಲ್ಲ. ತಲ್ಲೀನತೆ ಹಂಚಿಕೊಂಡು ಬಾಳುವುದು ಕೃಷಿ ಬದುಕಿನ ಜೀವನ ಮೌಲ್ಯಗಳು. ರೈತರು ಹಿಂದೆ ಊರಿನಿಂದ ಊರಿಗೆ ಹೋಗುವಾಗ ಬೀಜಗಳನ್ನು ಬಿತ್ತಿ ಸಾಲುಮರಗಳನ್ನು ಬೆಳೆಸುತ್ತಿದ್ದರು. ನೆತ್ತಿಗೆ ನೆರಳು ನೀಡುವ ಈ ಮರಗಳ ಮೌಲ್ಯ ಅರಿತಿದ್ದ ಅವರು ಪ್ರತಿ ಊರಿನಲ್ಲೂ ಗುಂಡು ತೋಪುಗಳನ್ನು ಮಾಡುತ್ತಿದ್ದರು.
ಅ. ನಾ. ಯಲ್ಲಪ್ಪ ರೆಡ್ಡಿಯವರ “ಅರಣ್ಯೆ ನಿನಗೆ ಶರಣು” ಕೃತಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ