Advertisement

Category: ಪ್ರವಾಸ

ನೆದರ್‌ಲ್ಯಾಂಡ್ಸ್ ಸಂಕೀರ್ಣತೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಗ್ರಂಥಾಲಯಕ್ಕೆ ಇಡೀ ಕುಟುಂಬ ಭೇಟಿ ಕೊಡುತ್ತದೆ. ಸದಸ್ಯರು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ಬೇರೆ ಬೇರೆ ಭಾಗಗಳಿಗೆ ಹೋಗಬಹುದು. ಗ್ರಂಥಾಲಯದೊಳಗೆ ಶಿಶುಪಾಲನಾ ಕೇಂದ್ರವೂ ಇದೆ. ಮಕ್ಕಳ ವಿಭಾಗದಲ್ಲಿ ಎಷ್ಟೊಂದು ಅನುಕೂಲಗಳು, ಆಟದ ಸಾಮಾನು, ಚಿತ್ರಕಲೆ ರಚಿಸುವ ವಿಭಾಗ, ಸ್ಟುಡಿಯೋ, ಮಕ್ಕಳ ಎತ್ತರಕ್ಕನುಗುಣವಾದ ಕುರ್ಚಿ, ಮೇಜು, ಬೇರೆ ಬೇರೆ ವಯಸ್ಸಿನ ಮಕ್ಕಳು ಓದಬಹುದಾದ ಪುಸ್ತಕಗಳು, ನಿಯತಕಾಲಿಕೆಗಳು, ನೆಲದ ಮೇಲೆ ಕುಳಿತುಕೊಂಡು, ಅಡ್ಡ ಮಲಗಿಕೊಂಡು ಕೂಡ ಓದುವ ಅನುಕೂಲ, ಬಣ್ಣ ಬಣ್ಣದ ಪೆನ್ಸಿಲ್‌ಗಳ ರಾಶಿ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ

Read More

ದುಬೈನ ಬುರ್ಜ್ ಖಲೀಫಾ ಎಂಬ ಸ್ಕೈಸ್ಕ್ರಾಪರ್: ಡಾ. ಎಂ. ವೆಂಕಟಸ್ವಾಮಿ ಬರಹ

ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು.
ದುಬೈ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

Read More

ಚರ್ಚ್, ಸಂಜೀವ, ಫ್ರೆಂಚ್ ಕನ್ನಡತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಾವು ನಮ್ಮ ಬೆಂಗಳೂರಿನ ಮನೆಯ ಬಗ್ಗೆ ತಿಳಿಸಿದಾಗ, ನಾನು HSR ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ಕನ್ನಡಿಗನನ್ನೇ ಮದುವೆ ಆಗಿದ್ದೇನೆ. ಆತ ಯೋಗ ಶಿಕ್ಷಕ ಎಂದು ತುಂಬಾ ಖುಷಿಯಿಂದ ಹೇಳಿದಳು. ಅವಳ ಮುಖದಲ್ಲಿ ಭಾರತೀಯ ಕಳೆ ಇದೆ ಎಂದು ನನಗೂ ಅನ್ನಿಸಿತು. ಹಾಗಾದರೆ, ನೀವು ಅರ್ಧ ಕನ್ನಡಿಗರಲ್ಲವೇ ಅಂದರೆ. ಬಾಯಿ ತುಂಬಾ ನಗುತ್ತಾ, ಇಲ್ಲ ನಾನು French, ನನ್ನ ಹೊಟ್ಟೆಯಲ್ಲಿರುವ ಮಗು ಅರ್ಧ ಕನ್ನಡಿಗ ಎಂದು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಕೈ ಹೊಡೆದುಕೊಂಡು ನಕ್ಕಳು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

Read More

ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಶ್ರೀಲಂಕಾದಲ್ಲಿರುವ ಪರಿಸ್ಥಿತಿಯಿಂದ ಗೈಡ್ ಬರಲಿಲ್ಲವೇ? ಅಥವಾ ತಪ್ಪಿಸಿಕೊಂಡನೆ? ಸ್ವಲ್ಪ ಗಾಬರಿಯಾಯಿತು. ಮತ್ತೆ ನಾವಿಬ್ಬರು ಸುಶೀಲ ಮತ್ತು ಶಾಂತಮ್ಮ ಹತ್ತಿರಕ್ಕೆ ಹೋದೆವು. ಅಷ್ಟರಲ್ಲಿ ನಮ್ಮ 12 ಜನರ ಗುಂಪಿನ ಒಂದಷ್ಟು ಜನರು ನಮ್ಮಂತೆ ಗೈಡ್‌ಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಒಬ್ಬಾತ ತಮಿಳಿನಲ್ಲಿ ಮಾತನಾಡುತ್ತ ಚಾರಿಯಟ್ ವರ್ಲ್ಡ್‌ ಟೂರ್ ಎಂದು ಹತ್ತಿರಕ್ಕೆ ಬಂದ. ನಾನು, `ಏಯ್ ಎಲ್ಲಿ ಹೋಗಿದ್ದೆಯೊ ಮಹರಾಯ ಇಷ್ಟೊತ್ತು? ನಾವೆಲ್ಲ ಹುಡುಕಿ ಹುಡುಕಿ ಸಾಕಾಯಿತು’ ಎಂದೆ. ಆತ ಇಂಗ್ಲಿಷ್ ಮತ್ತು ತಮಿಳು ಮಾತನಾಡತೊಡಗಿದ.
ಶ್ರೀಲಂಕಾ ಪ್ರವಾಸದ ಕುರಿತು ಡಾ. ವೆಂಕಟಸ್ವಾಮಿ ಬರಹ

Read More

ನಾನು ಸುರೀನಾಮಿಯಾದೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಆತಂಕದಲ್ಲೋ, ಆಸೆಯಲ್ಲೋ ತಮ್ಮ ಹಾಗೆಯೇ ಕಾಣುವ ಭಾರತೀಯರನ್ನು ಸುರೀನಾಮಿಗಳು ಎಂದು ಭಾವಿಸುತ್ತಾರೆ. ಡಚ್ಚರು ಅವರು ಭಾರತೀಯರಲ್ಲ, ಕೇವಲ ಸುರೀನಾಮಿಗಳು ಎಂದು ಪ್ರವಾಸಿ ಭಾರತೀಯರನ್ನು ಎಚ್ಚರಿಸುತ್ತಾರೆ. ಕೆಲವರನ್ನು ಕಂಡಾಗ ಅವರು ಭಾರತೀಯರಾಗಿದ್ದರೆ ಎಂದು ನಮಗೂ ಆಸೆಯಾಗುತ್ತದೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹನ್ನೆರಡನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ