Advertisement

Category: ವ್ಯಕ್ತಿ ವಿಶೇಷ

ಪ್ರೀತಿಯ ಸುಳಿಯಲ್ಲಿ ಸಿಲುಕಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ ಅವಳು ಬೇರಾರೂ ಅಲ್ಲ. ಕಂಪೆನಿಯ ಮಾಲೀಕರಾದ ಮಾಂಡ್ರೆ ಕವಿಗಳ ಮಗಳು, ಭಾಗೀರಥಿಯನ್ನೇ. ನಾನು ಹೌಹಾರಿಹೋದೆ. ಅವನೂ ಏನೂ ಸಾಮಾನ್ಯನಲ್ಲ; ಕಂಪೆನಿಯಲ್ಲಿ ಮಾಂಡ್ರೆ ಕವಿಗಳಿಗೆ ಬಲಗೈ ಆಗಿದ್ದ. ಏನೇ ಹೊಸ ನಾಟಕಗಳ ಸ್ಕ್ರಿಪ್ಟ್ ಬರೆಯುವುದಕ್ಕೆ ಜಕ್ಲಿ ಈಶ್ವರನೇ ಬರಬೇಕಿತ್ತು. ಅಕ್ಷರವಂತೂ ಅದ್ಭುತವಾಗಿತ್ತು. ‘ಕವಿಗಳಿಗೆ ವಿಷಯ ಗೊತ್ತಾ?’ ಎಂದು ಕೇಳಿದೆ. ಜಕ್ಲಿ ಈಶ್ವರ ‘ಇಲ್ಲ’ ಎಂದ. ‘ಅವರ ಮಗಳಿಗೆ, ಆ ಹುಡುಗಿಗೆ?’ ಎಂದೆ. ತಲೆಯಲ್ಲಾಡಿಸಿದ. ಅಂದರೆ ಅವಳಿಗೆ ಗೊತ್ತಿಲ್ಲದೆ ಅವಳನ್ನು ಪ್ರೀತಿಸುವುದು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೇಳನೆಯ ಕಂತು

Read More

ಕುಣಿಯಬೇಕಿದ್ದ ಕಾಲುಗಳ ಕಟ್ಟಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಸರಿ, ಮಳೆ ನಿಂತು ಮನೆ ತಲುಪುವ ಹೊತ್ತಿಗೆ ರಾತ್ರಿ ಎಂಟರ ಹೊತ್ತು. ದೊಡ್ಡ ರಾದ್ಧಾಂತವೇ ಆಗಿತ್ತು. ‘ಯಾಕಿಷ್ಟು ತಡವಾಯ್ತು?’ ಪ್ರಶ್ನೆ ಗಡುಸಾಗಿಯೇ ಕೇಳಿಸಿತು. ಏನು ಉತ್ತರಿಸಬೇಕೆಂದು ತೋರದೆ, ಬೇಬಿಯಕ್ಕನೊಂದಿಗೆ ಪಿಚ್ಚರ್ ನೋಡುವುದಕ್ಕೆ ಹೋಗಿದ್ದೆ ಎಂದುಬಿಟ್ಟೆ. ನಂತರ ಕೇಳಿದ್ದು, ಕೆನ್ನೆಯ ಮೇಲೆ ಬಿದ್ದ ಛಟಾರ್ ಎಂಬ ಏಟಿನ ದನಿಯಷ್ಟೇ! ‘ಹೇಳದೆ ಕೇಳದೆ ಇನ್ನೆಲ್ಲಿಯೂ ಹೋಗಕೂಡದು. ಡಾನ್ಸ್ ಕ್ಲಾಸ್ ಸೇರಿಸಿಯೇ ತಪ್ಪು ಮಾಡಿದೆ’ ಎಂದು ಹೇಳಿದ್ದರೆ ಅತ್ತು ಸುಮ್ಮನಾಗುತ್ತಿದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನಾರನೆಯ ಕಂತು

Read More

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕುಸುಮಾ ಶಾನಭಾಗ ಬರಹ

ಕೊನೆಗೂ ಗಾಂಧೀಜಿ ಗೌರಮ್ಮನಿಗೆ ಕಿತ್ತಳೆ ಹಣ್ಣು ಕೊಟ್ಟು, ಅವರ ಮನೆಗೆ ಬಂದರು. ಗೌರಮ್ಮ ಅವರನ್ನು ಮಣೆಯಿಟ್ಟು ಕೂರಿಸಿದರು. ಇದೆಲ್ಲ ಯಾಕೆಂದು ಗಾಂಧೀಜಿ ಕೇಳಿದರೂ ಅವರು ಉತ್ತರಿಸಲಿಲ್ಲ. ಒಳಗಿನಿಂದ ಒಂದು ಪಾತ್ರೆಯಲ್ಲಿ ತಮ್ಮಲ್ಲಿದ್ದ ಎಲ್ಲಾ ಚಿನ್ನದ ಆಭರಣಗಳನ್ನು ತುಂಬಿಸಿ ತಂದು ಗಾಂಧೀಜಿ ಎದುರಿನಲ್ಲಿಟ್ಟರು. ಆ ಚಿನ್ನವನ್ನು ಹರಿಜನ ಉದ್ಧಾರ ಕಾರ್ಯಕ್ಕೆ ಬಳಸುವಂತೆ ಗಾಂಧೀಜಿಯನ್ನು ಕೇಳಿಕೊಂಡರು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೊಡಗಿನ ಗೌರಮ್ಮನವರ ಕುರಿತು ಕುಸುಮಾ ಶಾನಭಾಗ ಬರಹ

Read More

ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಟ್ಟೆ ಜಾರಿತೋ ಅಥವಾ ನಾನೇ ಕದಲಿಸಿದೆನೋ ಮಾಂಸವೆಲ್ಲ ತುಂಡುತುಂಡಾಗಿ ಹರಿದುಬಂತು. ಗರ್ಭದಲ್ಲಿ ಭ್ರೂಣದ ಮಾಂಸ ಉಳಿದಿತ್ತೋ ಏನೊ, ‘ನನ್ನನ್ನು ಬೇಡವೆನ್ನುವ ಮೊದಲು ನನ್ನ ಹೇಳಿ-ಕೇಳಿ ಮಾಡಿದ್ದೀಯಾ? ಇಲ್ಲ ತಾನೆ, ಮತ್ತೆ ನಾನೇಕೆ ನಿನ್ನ ಒಪ್ಪಿಗೆ ಕೇಳಲಿ?’ ಎಂಬಂತಿತ್ತು ಆ ಸನ್ನಿವೇಶ. ಹಾರಿದ ಜಾಗದ ಸುತ್ತಲೂ ಮಾಂಸ ಚೂರಾಗಿ ಚೆಲ್ಲಿಬಿದ್ದಿತ್ತು. ಏನೂ ಮಾಡಲಾರದೆ, ತೊಟ್ಟ ಬಟ್ಟೆಯನ್ನೆಲ್ಲ ಹರಡಿ ಅಲ್ಲಿಯೇ ಸುಮ್ಮನೆ ಕುಳಿತೆ. ನೇಪಥ್ಯದಲ್ಲಿ ಪರದೆ ಎಳೆಯುವವರಿಗೂ ಏನಾಗುತ್ತಿದೆ ಎಂದು ಗೊತ್ತಾಗಿತ್ತು. ಬೆಳಕನ್ನು ಆರಿಸಿ, ಪರದೆಯನ್ನು ಎಳೆದೇಬಿಟ್ಟರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೈದನೆಯ ಕಂತು

Read More

ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ…: ಜುಲೇಖಾ ಬೇಗಂ ಜೀವನ ವೃತ್ತಾಂತ

ನನ್ನ ಬೆಳವಣಿಗೆಯನ್ನು ಅವಳಿಗಿಂತ ಚೆನ್ನಾಗಿ ಗುರುತಿಸಬಲ್ಲ ಬೇರಾರೂ ಇರಲಿಲ್ಲ. ನಾನು ಕಲಾವಿದೆಯಾಗಬೇಕೆಂದೇ ಅವಳ ಒತ್ತಾಯವೂ ಇತ್ತು. ಒಬ್ಬರಿಗಿಂತ ಇಬ್ಬರು ಲೇಸೆಂಬ ಮಾತು ನನಗೆ ಹೊಂದಿದ್ದೇ ಈಗ! ‘ಐದು ವರ್ಷದ ಹಿಂದೆಯೇ ನೀನು ಪಾತ್ರದಲ್ಲಿ ಕಳೆದುಹೋಗುತ್ತಿದ್ದೆ. ಇನ್ನು ಇಷ್ಟೆಲ್ಲ ಕಷ್ಟಪಟ್ಟು, ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡ್ಕೊಂಡಿದ್ದೀಯಾ. ದೊಡ್ಡ ಮಟ್ಟಕ್ಕೆ ಬೆಳೀಬೇಕು ಕಣೆ’ ಎಂದು ಬೆಂಬಲವಾಗಿ ನಿಂತು, ‘ನೀನು ಮಾಂಡ್ರೆಯಂತಹ ದೊಡ್ಡ ಕವಿಗಳ ಜೊತೆಯಲ್ಲಿ ಪಳಗಬೇಕು. ಕಲಿಯೋಕೆ ಸಾಕಷ್ಟಿರುತ್ತೆ’ ಅಂತಲೂ ದಾರಿ ತೋರಿದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ