Advertisement

Category: ಸಾಹಿತ್ಯ

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಕ್ರಮ ತಪ್ಪಿದ ನಗರ”

“ನೀವು ಎಂದಾದರೂ ಆಕಾಶದ ನಕ್ಷತ್ರಗಳನ್ನು ಗಮನಿಸಿದ್ದೀರಾ?” ಅವನು ಕೇಳಿದ. ಅವನ ಧ್ವನಿ ಹಳೆಯ ರೇಡಿಯೋ ಸ್ಟೇಷನ್‌ನಿಂದ ಬರುವ ಸಿಗ್ನಲ್‌ನಂತೆ ಇತ್ತು. ಅದಕುತ್ತರವಾಗಿ “ಹೌದು, ನೋಡಿದ್ದೇನೆ.” ಎಂದೆ. “ಆಕಾಶದಲ್ಲಿ ನಕ್ಷತ್ರಗಳು ಸುಮ್ಮನೆ ಬಿದ್ದಿಲ್ಲ” ಅವನು ಹೇಳುತ್ತಾ ಒಂದು ನೋಟಿನ ಮೇಲೆ ಒಂದು ನಾಣ್ಯವನ್ನು ಇಟ್ಟ. “ಅವುಗಳಿಗೊಂದು ಕ್ರಮವಿದೆ. ಆ ಕ್ರಮ ತಪ್ಪಿದರೆ ಈ ಜಗತ್ತು ಕುಸಿದು ಬೀಳುತ್ತದೆ. ಈ ಸ್ಕೈವಾಕ್ ಕೆಳಗೆ ಹರಿಯುವ ಸಾವಿರಾರು ಕಾರುಗಳು, ಈ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ನಿಮ್ಮ ಕೈಯಲ್ಲಿರುವ ಈ ಕಾಫಿ ಕಪ್… ಎಲ್ಲವೂ ಒಂದು ನಿಖರವಾದ ಜಾಗದಲ್ಲಿ ಇರಬೇಕು.”
ಕಾರ್ತಿಕ್ ಕೃಷ್ಣ ಬರೆದ ಕತೆ “ಕ್ರಮ ತಪ್ಪಿದ ನಗರ” ನಿಮ್ಮಈ ಭಾನುವಾರದ ಬಿಡುವಿನ ಓದಿಗೆ

Read More

ಸ್ವಾಮಿ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ವೃತ್ತ”

ಭಯಗೊಂಡ ವೆಂಕಯ್ಯ ಪಂಜು ಬಿಸಾಡಿ ದೂರ ಓಡಿದ. ಪಂಜು ಕಂಡ ಮಸೀದಿಯವರು ಇದು ಮೇಲಿನ ಕೇರಿಯವರದ್ದೇ ಕಿತಾಪತಿ ಎಂದು ತಾವೂ ನಾಲ್ಕಾರು ಕೊಳ್ಳಿ ತೆಗೆದುಕೊಂಡು ಮೇಲಿನ ಕೇರಿಯತ್ತ ಧಾವಿಸಿದರು. ಹಿಂದೂ ಮುಸ್ಲಿಂ ಕೋಮುಗಲಭೆ ಎಂದು ಪ್ರಚಾರಗೊಂಡ ಅದು ಟೀವಿ ಪೇಪರಿನಲ್ಲಿ ಸುದ್ದಿಯಾಯಿತು. ಯಾವ ಯುದ್ಧಕ್ಕೆ ತಾನೆ ಕೊನೆಯಿರುವುದಿಲ್ಲ? ಮತ್ತೆ ಯಾವ ಯುದ್ಧಕ್ಕೆ ತಾನೆ ನಿರ್ಧಿಷ್ಟವಾದ ಕಾರಣ ಬೇಕಿದೆ? ಕಾರಣವಿಲ್ಲದೆ ಎಷ್ಟೋ ಯುದ್ಧಗಳಾಗಿಲ್ಲವೇ? ಮತ್ತು ಅವು ಇದ್ದಕ್ಕಿದ್ದಂತೆ ನಿಂತೂ ಹೋಗಿಲ್ಲವೇ ?
ಸ್ವಾಮಿ ಪೊನ್ನಾಚಿ ಬರೆದ ಕತೆ “ವೃತ್ತ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಡಾ. ದಿಲೀಪ್‌ ಎನ್ಕೆ ಬರೆದ ಈ ಭಾನುವಾರದ ಕತೆ “ಭೈರೂಪ”

ಎದ್ದು ಬಿದ್ದು ತಕಥೈ ಕುಣಿದು, ನೆಗೆದು, ಹತ್ತಿರ ಸುಳಿದು ಒಂದೊಂದೂ ಒಂದೊಂದು ಆತ್ಮಗಳಂತೆ ಪೀಡಿಸುತ್ತಿರುವ ವಂದನಾಳ ಬಟ್ಟೆಬರೆಗಳು, ದಿನೋಪಯೋಗಿ ವಸ್ತುಗಳು, ಆಕೆಯ ಸಹಜವಾದ ವಿವಿಧ ಭಂಗಿಗಳು…… ತಲೆಯನ್ನು ಆ್ಯಸಿಡ್‌ಗೆ ಅಜ್ಜಿದಂತೆ. ಅಸಂಖ್ಯ ಸುತ್ತಿಗೆಗಳು ಹೃದಯಕ್ಕೆ ಗುಕ್ಕು ಗುಕ್ಕನೆ ಗುದ್ದಿದಂತೆ. ಯಪ್ಪಾ… ಎನ್ನುತ್ತಾ ರೆಪ್ಪೆಯನ್ನು ಬಿಗಿಹಿಡಿದು ಅಭಿ ಹೊರಳಾಡಿದ. ಆದರೇನು? ವಂದನಾಳ ಮಾತುಕತೆಗಳು, ನಗು-ರಾಗ-ರಗಳೆಗಳು ಈ ಎಲ್ಲಕ್ಕೂ ರೆಕ್ಕೆ ಬಂದು ಅವು ಅಭಿಯ ಸುತ್ತ ಗಸ್ತು ಹೊಡೆಯುತ್ತಲೇ ಇದ್ದವು.
ಡಾ. ದಿಲೀಪ್‌ ಎನ್ಕೆ ಕತೆ “ಭೈರೂಪ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಆರೂವರೆ ಅಡಿಯ ಮನುಷ್ಯ”

ನಾನು ಗುರುವೆಂದು ಭಾವಿಸಿದ ಫುಲೆ ದಂಪತಿಗಳು ಹೇಳಿದ್ದೂ ಇದೇ ಮಾತುಗಳನ್ನು. ಪುಟ್ಟ ಬಾಲಕಿಯರಿಂದ ಹಿಡಿದು, ಮದುವೆಯಾಗಿ ವಿಧವೆಯರಾದ ಹೆಣ್ಣುಗಳವರೆಗೆ ಎಲ್ಲರ ಕೈಯ್ಯಲ್ಲಿಯೂ ಅಕ್ಷರದ ದೀವಿಗೆಯನ್ನು ಹಿಡಿಸಬೇಕೆಂದು ಅವರು ಶ್ರಮಿಸಿದ ಮಾರ್ಗ ನನ್ನೆದುರು ತೆರೆದುಕೊಂಡಿತ್ತು. ಅವರು ಹುಟ್ಟುಹಾಕಿದ ಅರಿವಿನ ಸಸಿಯಿಂದು ಆರೈಕೆಯಿಲ್ಲದೇ ಸೊರಗಿ ಸಾಯುವ ಸ್ಥಿತಿಯಲ್ಲಿತ್ತು. ವಾಸ್ತವ ಸತ್ಯವನ್ನರಿಯಲು ನಾನು ರಾಜ್ಯದ ತುಂಬೆಲ್ಲ ಸಂಚರಿಸತೊಡಗಿದೆ.
ಸುಧಾ ಆಡುಕಳ ಬರೆದ ಕತೆ “ಆರೂವರೆ ಅಡಿಯ ಮನುಷ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ “ಸಾಂಗತ್ಯ”

ಯಶೋದಳಿಗೆ ಮುಂದೆ ಮಾತನಾಡಲು ಆಗಲಿಲ್ಲ. ಅವಳು ಬಿಕ್ಕಿದಳು. ಅವಳ ಕಣ್ಣಿನಿಂದ ಒಂದೇಸಮನೆ ನೀರು ಇಳಿಯುತ್ತಿತ್ತು. ಅಷ್ಟರಲ್ಲಿ ಮಗುವನ್ನು ಕರೆದುಕೊಂಡು ಮಾದೇವಿ ಬಂದಳು. ಮಗುವನ್ನು ಎತ್ತಿಕೊಂಡ ಯಶೋದ ಮಗುವನ್ನು ಹೆಗಲಿಗೆ ಹಾಕಿಕೊಂಡು ಎದ್ದು ನಿಂತಳು. ಅವಳನ್ನು ಒಳಗೆ ಕರೆದುಕೊಂಡು ಹೋಗುವಂತೆ ಪ್ರಕಾಶ ಮಾದೇವಿಗೆ ಸೂಚಿಸಿದ. ಕೀಕೊಟ್ಟ ಬೊಂಬೆಯಂತೆ ಯಶೋದ ಮಾದೇವಿಯನ್ನು ಅನುಸರಿಸಿದಳು. ಅವಳಿಗೆ ಯಾವುದೋ ಆಘಾತವಾಗಿರಬೇಕು ಎಂದು ಪ್ರಕಾಶ ತರ್ಕಿಸಿದ. ನಿಧಾನವಾಗಿ ಅದನ್ನು ಹೊರತೆಗೆಯಬೇಕು. ಒಂದೆರಡು ದಿನದವರೆಗ ಕಾಯಬೇಕು.
ಚಂದ್ರಮತಿ ಸೋಂದಾ ಬರೆದ ಕತೆ “ಸಾಂಗತ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ