Advertisement

Tag: ಕನ್ನಡ ಸಾಹಿತ್ಯ

ಸಮೃದ್ಧ ಜೀವನಾನುಭವವೇ ಸಾಹಿತ್ಯದ ಜೀವ: ನಾ. ಮೊಗಸಾಲೆ

ತಲೆಮಾರು ಎನ್ನುವುದು ಮುಂದುವರಿಯುತ್ತಾ ಹೋದ ಹಾಗೆ ಕೌಶಲ್ಯ ಎನ್ನುವುದು ಹಿಂದಿಗಿಂತ ಹೆಚ್ಚು ಶಕ್ತ ಅಥವಾ ಹೆಚ್ಚೋ ಎಂಬಂತೆ ಮುಂದುವರಿಯುವುದು ನಮ್ಮ ಅನುಭವ ಅಥವಾ ಪ್ರಕೃತಿ ನಿಯಮ. ಪ್ರತಿಭೆ, ಕೌಶಲ್ಯ, ಮತ್ತು ಚಿಂತನೆಗಳಲ್ಲಿ ನಾವು ನಮ್ಮ ಹಿರಿಯರಿಗಿಂತ ಮುಂದುವರಿದಿದ್ದೇವೆ ಎನ್ನುವುದನ್ನು ನಾನೂ ನೀವೂ ಒಪ್ಪಿಕೊಳ್ಳುವುದಾದರೆ ನಮ್ಮ ಮುಂದಿನ ಪೀಳಿಗೆಯೂ ಖಂಡಿತ ನಮಗಿಂತ ಮುಂದಿರುತ್ತದೆ ಎನ್ನುವುದನ್ನು ಒಪ್ಪಬೇಕು.
ಡಾ. ನಾ. ಮೊಗಸಾಲೆಯವರೊಟ್ಟಿಗೆ ನಡೆಸಿದ ಮಾತುಕತೆಯನ್ನು ಹಂಚಿಕೊಂಡಿದ್ದಾರೆ ಡಾ. ಸುಭಾಷ್ ಪಟ್ಟಾಜೆ

Read More

ಇವತ್ತಿನಿಂದ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು”

ಒಂದು ಭಾಷಣದ ಶೈಲಿಯಾಗಿ ಕೂಡ ಅಲವತ್ತುಕೊಳ್ಳುವಿಕೆ ಪರಿಣಾಮಕಾರಿಯಾದದ್ದು. ನೀವು ಸುಮ್ಮನೆ ಬೈದು ಭಾಷಣ ಮಾಡಿದರೆ, ವಿರೋಧಪಕ್ಷದ ನಾಯಕರಾಗಲು ಸಾಧ್ಯವಾಗುವುದಿಲ್ಲ. ದೇಶದ ಭವಿಷ್ಯ ಕುರಿತು, ಆಳುವಪಕ್ಷವನ್ನು ಕುರಿತು ಭೀಕರ ಭವಿಷ್ಯವನ್ನು ನುಡಿಯಬೇಕು.
ಕತೆಗಾರ ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಪ್ರಬಂಧಗಳ ಸರಣಿ

Read More

ಬೆಂಕಿಯ ಮಳೆ

ಉಮಾ ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು. ದಾದಾಪೀರ್‌ ಜೈಮನ್‌ ಬರೆಯುವ ಅಂಕಣ

Read More

ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ!

ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿ ಇಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ

Read More

ಕನ್ನಡ ವಿಮರ್ಶೆಯ ವಿವೇಕ: ಕೆಲವು ಮಾತುಗಳು

ಕನ್ನಡದ ಈ ಕಾಲದ ವಿಮರ್ಶೆ ಮೇಲ್ನೋಟಕ್ಕೆ ತನ್ನನ್ನು ‘ನವ್ಯೋತ್ತರ’ವೆನ್ನಬೇಕೋ ‘ಆಧುನಿಕೋತ್ತರ’ವೆನ್ನಬೇಕೋ, ‘ದಲಿತ ಬಂಡಾಯೋತ್ತರ’ ಎನ್ನಬೇಕೋ ಎಂಬ ಸ್ವನಿರೂಪಣೆಯ ಗೊಂದಲದಲ್ಲಿಯೇ ಸಿಲುಕಿದಂತೆ ಕಂಡರೂ, ಅದು ಕನ್ನಡ ವಿಮರ್ಶೆಯ ಕಾರ್ಯಸೂಚಿ ಎಷ್ಟು ಅನಿರ್ದಿಷ್ಟವಾಗಿದೆ ಎಂಬುದರ ಸೂಚಕವೂ ಆಗಿ ಕಾಣಿಸುತ್ತದೆ. ಈಚಿನ ದಶಕಗಳಲ್ಲಿ ಸಂಸ್ಕೃತಿ ಅಧ್ಯಯನ ಹಾಗೂ ಸ್ತ್ರೀವಾದಿ ವಿಮರ್ಶೆಯ ಮಾದರಿಗಳು ಪ್ರಭಾವಶಾಲಿಯಾಗಿ ಬೆಳೆದಿರುವುದು ನಿಜವಾಗಿದೆ. ಡಾ. ಎಸ್. ಸಿರಾಜ್ ಅಹ್ಮದ್  ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದಾರೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ