Advertisement

Tag: ಕವಿತೆ

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಕೆಸರಿನಲ್ಲಿ ಬಿದ್ದು ಉರುಳಾಡಿದ
ಹಂದಿಗಳು ಬಂದು ಮೈಯ್ಯುಜ್ಜುತ್ತವೆ
ಕ್ಷಣಕ್ಕೊಮ್ಮೆ ಊಳಿಡುವ ಗುಳ್ಳೆನರಿಗಳು
ಬಂದು ಯಾರ್ಯಾರದ್ದೋ ಕಿವಿ ಕಚ್ಚುತ್ತವೆ
ನಡುನಡುವೆ ಆನೆಯ ಗತ್ತು
ಸಿಂಹದ ಗರ್ಜನೆ
ಚಿರತೆಯ ಓಟ
ಮತ್ತು
ಜಿಂಕೆ, ಮೊಲಗಳ ಸಾವು” -ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ‌ಎಸ್ ಸಿರಾಜ್‌ ಅಹಮದ್‌ ಮುನ್ನುಡಿ

Read More

ಬೆರಳ ಹಿಡಿದು ಮುನ್ನಡೆಸು ಬುದ್ಧ..: ಅನುಸೂಯ ಯತೀಶ್ ಬರಹ

ಇಲ್ಲಿ ಕವಿಯು ಮಾನವನ ಸಹಜ ಗುಣಗಳನ್ನು ಬುದ್ಧನಿಗೆ ಹೋಲಿಸುತ್ತಾ ವಿಡಂಬನಾತ್ಮಕ ರೂಪದಲ್ಲಿ ಈ ಕವಿತೆಗೆ ಜೀವ ತುಂಬಿದ್ದಾರೆ. ಬುದ್ಧನ ನಡೆನುಡಿಗಳೆ ಕವಿತೆಯ ಜೀವಾಳವಾಗಿವೆ. ಇಲ್ಲಿ ವಸ್ತುನಿಷ್ಠೆಗಿಂತ ವ್ಯಕ್ತಿತ್ವದ ಅನಾವರಣಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ರೂಪಕಗಳ ಪ್ರಯೋಗದಲ್ಲಿ ಸಿದ್ಧಹಸ್ತರಾಗಿರುವ ಕವಿ ಅವುಗಳ ಜೊತೆಗೆ ವಾಸ್ತವಿಕತೆಯನ್ನು, ಸಹಜ ಸರಳವಾದ ಸಾಲುಗಳಲ್ಲಿ ಸಶಕ್ತವಾಗಿ ಬಂಧಿಸಿದ್ದಾರೆ.
ಜಬೀವುಲ್ಲಾ ಎಮ್. ಅಸದ್ ಬರೆದ ಬುದ್ಧನ ಕುರಿತು ಕವಿತೆಯ ಕುರಿತು ಅನುಸೂಯ ಯತೀಶ್‌ ಬರಹ

Read More

ಪಂಜರದ ಹಕ್ಕಿ ಹಾಡುವುದು ಯಾಕೆ!: ಚೈತ್ರಾ ಶಿವಯೋಗಿಮಠ ಸರಣಿ

ತಾಯಿ ಶ್ರೀಮಂತೆ, ಮೈ ತುಂಬಾ ವಜ್ರದೊಡವೆ, ಬಂಗಲೆ ಕಾರು ಇದ್ದರೂ ಸಹಿತ ಮಾಯಾ ಎಂತಹ ಸ್ವಾಭಿಮಾನಿ ಎಂದರೆ ಅಮ್ಮನಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ. ತಿಂಗಳಿಗೊಮ್ಮೆ ಅಮ್ಮನ ಕೈಯಡುಗೆ ಉಂಡು ಅವಳೊಂದಿಗೆ ಒಂದಿಷ್ಟು ಆಪ್ತ ಸಮಯ ಕಳೆಯುವುದನ್ನು ಬಿಟ್ಟರೆ ತಾಯಿಯಿಂದ ಏನನ್ನೂ ಅಪೇಕ್ಷಿಸಲಿಲ್ಲ ಮಾಯಾ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ

Read More

ನಿಯಂತ್ರಿತ ಕ್ರೋಧದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಕೆಲವೊಮ್ಮೆ ಎನ್ಸೆನ್ಸ್‌ಬರ್ಗರ್ ಅವರ ಕವನಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ, ಏಕೆಂದರೆ ಅವರ ಕವನಗಳಲ್ಲಿ ಪ್ರಾಸವು ಅಪರೂಪವಾಗಿರುತ್ತೆ ಹಾಗೂ ರೂಪಕಗಳು ಮತ್ತು ಪದಗುಚ್ಛಗಳ ದಟ್ಟವಾದ ಕೊಲಾಜ್‌-ಗಳನ್ನು ರಚಿಸುವ ಏಕಾಗ್ರತೆಯಲ್ಲಿ ಲಯವು ದ್ವಿತೀಯ ಸ್ಥಾನಕ್ಕೆ ಹೋಗುತ್ತೆ. ಅವರು ವಿಷಯದ ವಿಸ್ತಾರವನ್ನು ಹೊಂದಿದ್ದಾರೆ, ವಿವಿಧ ಶೈಲಿಗಳನ್ನು ಬಳಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ