Advertisement

Tag: ಕೆಂಡಸಂಪಿಗೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೃಷ್ಣ ದೇವಾಂಗಮಠ ಬರೆದ ಕತೆ

ಹೋಗುತ್ತಾ ನನಗೆನೋ ಕೊಟ್ಟು ಒಂದಷ್ಟು ಕಸಿದುಕೊಂಡು ಟಾಟಾ ಬೈಬೈ ಹೇಳುತ್ತಾ ಕಣ್ಮರೆಯಾಯಿತು. ಮತ್ತೆ ಮನಸ್ಸಿಗೆ ಹೊಸ ತಳಮಳ. ಯಾವ್ಯಾವುದೋ ಮನುಷ್ಯ ಸಹಜ ಆಸೆಗಳು ಮೈತಳೆಯುತ್ತಿದ್ದವು. ಆದರೆ ಎಲ್ಲವೂ ಅಸ್ಪಷ್ಟ ಆಕೃತಿಗಳು. ಬಸಿರಿನಲ್ಲಿ ಕೈ ಕಾಲು ಮೂಡದ ಭ್ರೂಣಾವಸ್ತೆಯ ಹಂತದವು. ಕನಸಿನ ಮಂಜು ಮಂಜಾದ ಚಿತ್ರಪಟಗಳಂತಹವು. ಮನಸ್ಸು ಮತ್ತಷ್ಟು ಗೊಂದಲದ ಗೂಡಾಯಿತು. ಅಲ್ಲಿ ನನ್ನ ಜನರ ಮಧ್ಯದಿಂದ ಸುಂಯ್ಯ ಎಂದು ಹಾರಿದ ವಿಮಾನ ಇಲ್ಲಿ ನನ್ನವರಲ್ಲದ ಮತ್ತು ನನ್ನವರಾಗಲಿರುವವರ ಮಧ್ಯೆ ಸದ್ದಿಲ್ಲದೆ ಇಳಿಸಿತು.
ಕೃಷ್ಣ ದೇವಾಂಗಮಠ ಬರೆದ ಕತೆ “ಪೇಯಿಂಟಿಂಗ್ “

Read More

ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು: ಭಾಗ ಒಂದು

ಈ ಬಾರಿ ನಾವು ಹೂಡಿದ ‘ಅಡಿಗೆಮನೆ’ ಇದ್ದದ್ದು ಮರಗಳ ಅಂಚಿನಲ್ಲಿ. ಈ ಅಂಚಿನ ಆಚೆ ಕಡೆ ನೂರು ಮೀಟರ್ ದೂರದಲ್ಲಿ ನೀರಿಲ್ಲದೆ ಬೇಸಿಗೆಯ ಬಿಸಿಲಿಗೆ ಸೊರಗಿದ್ದ ನದಿಯಿತ್ತು. ಕಳೆದ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಸಂಭವಿಸಿದ ಅಧಿಕ ಮಳೆ-ಜಲ ಪ್ರವಾಹದಲ್ಲಿ ಈ ನದಿ ಉಕ್ಕೇರಿ ಆ ನೂರೂ ಮೀಟರ್ ದೂರವನ್ನಾಕ್ರಮಿಸಿಕೊಂಡು ಈ ಮರಗಳ ಅಂಚಿನ ತನಕ ಬಂದಿತ್ತು ಎನ್ನುವುದು ಅಲ್ಲಿ ಚೆಲ್ಲಾಡಿದ್ದ ಮರಕೊಂಬೆಗಳು, ರೆಂಬೆಗಳಿಂದ ಸ್ಪಷ್ಟವಾಗಿತ್ತು. ನಾವೇನೋ ಖುಷಿಯಿಂದಲೇ ಅಲ್ಲಿ ಅಡಿಗೆಮನೆ ಮತ್ತು ನೆಲದ ಹಾಸುಗಳನ್ನು ಸ್ಥಾಪಿಸಿದ್ದೆವು. ಒಂದೆರೆಡು ದಿನಗಳಲ್ಲಿ ಬಿದ್ದ ಮಳೆಯಿಂದ ನಮ್ಮ ಖುಷಿ ಕಡಿಮೆಯಾಯ್ತು. ನೆಲದ ಹಾಸು ಮಳೆನೀರು, ಮಣ್ಣಿನ ರಾಡಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ನಿಮ್ಮ ಜಾತಿ ಯಾವುದು!

ಹೊಲದ ಹತ್ತಿರ ಅನ್ನುವ ಕಾರಣಕ್ಕೆ ನನಗೆ ಮನೆ ಇಷ್ಟವಾಯ್ತು. ಮನೆಯನ್ನು ಕೂಲಂಕುಷವಾಗಿ ನೋಡಿದ ಮೇಲೆ ಗೌಡರ ಜೊತೆಗೆ ಮಾತಾಡಲು ಅಲ್ಲೇ ಹತ್ತಿರವೇ ಇದ್ದ ಅವರ ಮನೆಗೆ ಹೋದೆ. ಹೆಸರು ಕೇಳಿದವರೆ ಯಾವ ಜಾತಿ ನಿಮ್ಮದು ಅಂದರು. ನನಗೆ ತುಂಬಾ ಇರುಸು ಮುರುಸು ಆಯ್ತು. ನಾನು ಯಾರಿಗೂ ಜಾತಿ ಕೇಳೋದಿಲ್ಲ, ನನಗೆ ಯಾರಾದರೂ ಕೇಳಿದರೂ ನನಗೆ ಆಗೋಲ್ಲ. ಆದರೆ ಹಳ್ಳಿಯಲ್ಲಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗಿಯೇ ಇದೆ. ನನ್ನ ಜಾತಿ ಯಾಕೆ ಬೇಕು ಅಂತ ಕೇಳಿದಾಗ “ಒಳ್ಳೆಯವರಿಗೆ ಕೊಡಬೇಕಲ್ರಿ ಮನಿ ಅದಕ್ಕ ಕೇಳತೀವಿ” ಅಂದರು.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ಹಳ್ಳಿಯ ಅಂತರಾತ್ಮದ ಆರ್ದ್ರ ಕಥನ

ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ.
ಮಂಜಯ್ಯ ದೇವರಮನಿ ಕಥಾ ಸಂಕಲನ “ದೇವರ ಹೊಲ”ಕ್ಕೆ ಎಸ್. ಗಂಗಾಧರಯ್ಯ ಬರೆದ ಮುನ್ನುಡಿ

Read More

ಮೆಳ್ಳಿಗೇರಿ ಸರ್‌ ಸಲುವಾಗಿ ಶಾಲೆಯನ್ನೇ ಬದಲಾಯಿಸಿದ್ದೆ!

ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು. ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ