Advertisement

Tag: ಜಯಂತ ಕಾಯ್ಕಿಣಿ

ದೈನಿಕತೆಯಲ್ಲೆ ದೈವಿಕತೆ..

ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ

Read More

ಆಧ್ಯಾತ್ಮಿಕ ಹೊಳಹಿನ ಕನ್ನಡಿನಲ್ಲಿ ‘ಒಂದು ಸರೀ ಕಡ್ಡಿಗಾಗಿ’

ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರ ಒಂದು ಜಿಲೇಬಿ ಕವನ ಸಂಕಲನದಿಂದ ಆಯ್ದ ಕವನ ‘ಒಂದು ಸರೀ ಕಡ್ಡಿಗಾಗಿ’ ತೀರಾ ಸ್ಥಳೀಯ ನೋಟಗಳ ಪ್ರತಿಮೆಗಳನ್ನು ಹೆಕ್ಕಿ ತೆಗೆದುಕೊಂಡು ಕಾವ್ಯ ದುಕೂಲದಲ್ಲಿ ಅವುಗಳನ್ನು ಬಂಧಿಸಿದ ಪರಿ ವಿಶೇಷವಾದುದು. ಕವನವು ಆಧ್ಯಾತ್ಮಿಕ ಹೊಳಹುಗಳನ್ನಷ್ಟೇ ಅಲ್ಲ, ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಜಿಜ್ಞಾಸೆಯ ಕಿಡಿ ಹಚ್ಚುವ ಸಾಮರ್ಥ್ಯ ಹೊಂದಿದೆ. ಅಂತಹ ವಿಶ್ಲೇಷಣೆಯನ್ನು ಇಲ್ಲಿ ಮಂಡಿಸಿದ್ದಾರೆ ಲೇಖಕಿ ಗೀತಾ ಹೆಗಡೆ

Read More

ಜಯಂತ ಕಾಯ್ಕಿಣಿ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

“ಅದೆಷ್ಟು ಮಾತಿನ ಮಲ್ಲ ! ಮಾತೇ ಮರೆತು ಮುಂಬೈ ಗಲ್ಲಿ ಗಲ್ಲಿ ಸುತ್ತುತ್ತಾನೆ. ಪಿಟ್ಸ್‌ ಬಂದ ವ್ಯಕ್ತಿಯ ಮುಷ್ಟಿಯೊಳಗಿನ ಮುದ್ದೆಯಾದ ಹಾಳೆಯಲ್ಲಿ ಪುಟ್ಟ ಮಗುವಿನ ಪಾದದ ಗುರುತನ್ನು ಪತ್ತೆ ಹಚ್ಚಿ ಆಗುವ ಅನಾಹುತ ತಪ್ಪಿಸುತ್ತಿದ್ದರೆ, ಸುಮ್ಮನೇ ಕಣ್ಣಾಲಿಗಳನ್ನು ತೇವವಾಗುತ್ತದೆ. ಹಾಗೆ ಮುಂಬೈ ಸುತ್ತಿಸಿ ಮತ್ತೆ ಸೀದಾ ನಮ್ಮ ಮಲೆನಾಡಿನ ಸೀಮೆಗೆ ಹಾಜರಾದ ಕಾಯ್ಕಿಣಿಯವರು ಇಡೀ ಕುಮಟಾ, ಅಂಕೋಲಾ, ಕಾರವಾರ, ಯಲ್ಲಾಪುರ, ಶಿರಸಿಗಳನ್ನು ಸುತ್ತಿಸುತ್ತ ಕಥೆ ಹೇಳುತ್ತ ಹೋಗುತ್ತಾರೆ.”
ಜಯಂತ ಕಾಯ್ಕಿಣಿ ಕಥಾ ಸಂಕನಲ “ಬಣ್ಣದ ಕಾಲು” ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಜಯಂತ ಕಾಯ್ಕಿಣಿ ಹೊಸ ಪುಸ್ತಕದಿಂದ ಒಂದು ಕತೆ

“ಅವ್ವನ ಸಿಡಿಮಿಡಿ, ಪ್ರತಿರೋಧ, ಆಘಾತ ಇವ್ಯಾವುದೂ ಕಾಣಿಸುವ ಸ್ಥಿತಿಯಲ್ಲೇ ಚಿತ್ತಿ ಇರಲಿಲ್ಲ. ಆಕಾಶದಿಂದಲೇ ತೂಗುಬಿದ್ದಿದ್ದ ಜೋಕಾಲಿಯೊಂದರ ಮೇಲೆ ಅವಳಾಗಲೇ ಕೂತುಬಿಟ್ಟಿದ್ದಳು. ಅದು ದಾಂಡೇಲಿಯಿಂದ ಬೆಳಗಾಂವ ತನಕ ಜೀಕುತ್ತಿತ್ತು. ನಡುವೆ, ಧಾರವಾಡದ ಕಿಲ್ಲೆಯ ನೆತ್ತಿಯನ್ನು ಚೂರು ಸವರಿ ಹೋಗುತ್ತಿತ್ತು.”
ಇತ್ತೀಚೆಗಷ್ಟೇ ಬಿಡುಗಡೆಯಾದ…

Read More

ಜಯಂತ ಕಾಯ್ಕಿಣಿ ಬರೆದ ಹೊಸ ಕವಿತೆ

“ಅಮ್ಮನ ಅವಮಾನವನ್ನು ಕಂಡು ನಖಶಿಕಾಂತ ಕಂಪಿಸುವ
ಎಳೆಕಂಗಳ ಎವೆಗಳನ್ನು ಯಾವ ಟಿಮ್.ಟಿಮ್.ಟಿಮ್. ಬಿಂದುಗಳೂ
ಅಭಿನಯಿಸಲಾರವು
ಕಪಾಟೇ ಇಲ್ಲದ ಗುಳೆ ಕುಟುಂಬದ ಸಣ್ಣ ಡಬ್ಬಿಯಲ್ಲಿ
ಯಾವ ಚಿನ್ಹೆಗಳನ್ನೂ ಬಚ್ಚಿಡಲಾಗದು”- ಜಯಂತ ಕಾಯ್ಕಿಣಿ ಬರೆದ ಹೊಸ ಕವಿತೆ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಚದುರಂಗ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ…

Read More

ಬರಹ ಭಂಡಾರ