Advertisement

Tag: ನಾಟಕ

ರಂಗದ ನಂಟು ಅಂಟಿದ ಬಗೆ: ಚಿತ್ರಾ ವೆಂಕಟರಾಜು ಸರಣಿ

ನಾಟಕೋತ್ಸವ ಮುಗಿದು ಅವರೆಲ್ಲ ಹೊರಟುಹೋದ ಮೇಲೆ ಮತ್ತೆ ನಮ್ಮ ದಿನಚರಿಗೆ ಹೊಂದಿಕೊಳ್ಳುವುದಕ್ಕೆ ಬಹಳ ಸಂಕಟವಾಗುತ್ತಿತ್ತು. ಕಿಂದರಿಜೋಗಿಯ ಕುಂಟನಂತೆ ‘ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕʼ ಎನ್ನುವ ಭಾವನೆ ಬರುತ್ತಿತ್ತು. ಈಗಿನಷ್ಟು ನಾಟಕ ಪ್ರಯೋಗಗಳು ನೋಡಲು ಸಿಗುತ್ತಿರಲಿಲ್ಲವಾದ್ದರಿಂದ ನೀನಾಸಮ್‌ ತಿರುಗಾಟವನ್ನು ನಾವು ಕರೆಸಿದಷ್ಟು ವರ್ಷಗಳೂ ನಾಟಕ ಮಾಡಬೇಕು ಅನ್ನೋ ಆಸೆ ಹೆಚ್ಚಾಗುತ್ತಿತ್ತು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಜಯಲಕ್ಷ್ಮಿ ಪಾಟೀಲ್ ಬರೆಯುವ ಹೊಸ ಅಂಕಣ “ಗರ್ದಿ ಗಮ್ಮತ್ತು” ಇಂದಿನಿಂದ

ಕೇವಲ ಕೆಲ ಬೇಸಿಗೆ ಶಿಬಿರಗಳು, ಅರೆ ವಾರ್ಷಿಕ ಕೋರ್ಸುಗಳು, ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಆಡುವ ನಾಟಕಗಳು ಮಾತ್ರವಿದ್ದರೆ ಸಾಲದು. ಇದನ್ನೂ ಮೀರಿ ಮಕ್ಕಳ ರಂಗಭೂಮಿ ಬೆಳೆಯಬೇಕಿದೆ. ಕೇವಲ ಕಲೆಯ ದೃಷ್ಟಿಯಿಂದ ಮಾತ್ರವಲ್ಲ, ಮಕ್ಕಳೊಳಗಿನ ಆತ್ಮವಿಶ್ವಾಸ ಹೆಚ್ಚಾಗಲು, ಭಾಷಾ ಕಲಿಕೆಗೆ, ಸ್ಪಷ್ಟ ಉಚ್ಚಾರಣೆಗೆ, ಪಾತ್ರಗಳ ಮೂಲಕ ಭಿನ್ನ ವ್ಯಕ್ತಿತ್ವಗಳನ್ನು ಅರಿಯುವುದಕ್ಕೆ, ನಾಲ್ಕು ಜನರೊಂದಿಗೆ ಬೆರೆಯುವುದಕ್ಕೆ, ಆರೋಗ್ಯಕರ ಮನಸ್ಥಿತಿ ಬೆಳೆಸಿಕೊಳ್ಳುವುದಕ್ಕೆ ಮಕ್ಕಳ ರಂಗಭೂಮಿ ಪೂರಕವಾಗಬಲ್ಲದು. ಬಣ್ಣ ಮತ್ತು ಬೆಳಕಿನ ಜೋಡಿಯ ಮೋಡಿ ಸಮಸ್ತ ಪ್ರಜೆಗಳ ಮೇಲಾಗಲಿ.
ಜಯಲಕ್ಷ್ಮಿ ಪಾಟೀಲ್ ಬರೆಯುವ ಹೊಸ ಅಂಕಣ “ಗರ್ದಿ ಗಮ್ಮತ್ತು”

Read More

ರಂಗದ ಮೇಲಿನ  ದೃಶ್ಯಕಾವ್ಯ  ‘ಚಿತ್ರಾಂಗದಾ’: ಚಿತ್ರಾ ವೆಂಕಟರಾಜು ಸರಣಿ

ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಚಿತ್ರಾಂಗದಾ’ ನಾಟಕದ ಕುರಿತ ಬರಹ

Read More

ಚಿತ್ರಾ ವೆಂಕಟರಾಜು ಹೊಸ ಸರಣಿ “ಚಿತ್ತು-ಕಾಟು” ಇಂದಿನಿಂದ

ಇದರೊಳಗೆ ಒಂದು ತಮಾಷೆಯೆಂದರೆ ಪಾತ್ರದ ಜತೆಗೆ ನಟನೂ ಇರುತ್ತಾನೆ. ಪರಸ್ಪರ ಒಬ್ಬರಿಗೊಬ್ಬರನ್ನು ಕಂಡರೆ ಆಗದ ನಟರು ರಂಗದ ಮೇಲೆ ಪ್ರೇಮಿಸುತ್ತಾರೆ‌. ಪ್ರೀತಿಸಿದ ಹುಡುಗಿ ಅಜ್ಜಿಯೋ, ಸನ್ಯಾಸಿಯೋ ಆಗಿಬಿಟ್ಟಿರುತ್ತಾಳೆ. ಪ್ರೀತಿಸಿದ ನಟ ಇನ್ನೊಬ್ಬಳೊಂದಿಗೆ ಡಾನ್ಸ್ ಮಾಡ್ತಿರೋದನ್ನ ಅವನ ಪ್ರೇಯಸಿ ಸೈಡ್ ವಿಂಗಿನಲ್ಲಿ ಕೂತು.. ‘ಇದು ನಾಟಕ ಇದು ನಾಟಕ’ ಅಂತ ತನ್ನನ್ನೇ ಸಮಾಧಾನಪಡಿಸಿಕೊಳ್ಳುತ್ತಾಳೆ. ಹೀಗೆ ರಂಗದ ಮೇಲೆ ನಡೆಯುವ ನಾಟಕಕ್ಕಿಂತ ಹೆಚ್ಚು ರೋಚಕವಾದ ಅನೇಕ ನಾಟಕಗಳು ಈ ಪ್ರಕ್ರಿಯೆಯಲ್ಲಿ ನಡೆಯುತ್ತಲೇ ಇರುತ್ತದೆ. ಕಲಾಲೋಕದ ಕುರಿತು ಚಿತ್ರಾ ವೆಂಕಟರಾಜು ಹೊಸ ಸರಣಿ “ಚಿತ್ತು-ಕಾಟು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಅಜ್ಜನೂ, ಗಿಳಿಯೂ ಇಬ್ಬರೂ ವಾಪಸ್ಸು ಬರಲಿಲ್ಲ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂತೂ ಕಡಿದಾದ ಮಾರ್ಗದಲ್ಲಿ ಸಾಗಿ, ಜಾತ್ರೆಯಲ್ಲಿ ಸುತ್ತಾಡಿದೆವು. ತೇರಿನ್ನೂ ಎಳೆದಿರಲಿಲ್ಲ, ಕಾಯುವಷ್ಟು ವ್ಯವಧಾನವಿಲ್ಲದೆ ಸುಸ್ತಾಗುತ್ತಿದೆಯೆಂದು ಮತ್ತೆ ಅವರನ್ನು ಕರೆತಂದೆ. ಅರವತ್ತರ ವಯಸ್ಸಿನ ಡಾಕ್ಟರಜ್ಜನನ್ನು ಈ ರೀತಿಯಾಗಿ ನಡೆಸಿಕೊಂಡಿದ್ದಕ್ಕೆ ಮನೆ ಜನರಿಗೆಲ್ಲ ಸಿಟ್ಟು. ಅಷ್ಟು ದೂರದವರೆಗೆ ನಡೆಸಿ, ರಥೋತ್ಸವವನ್ನೂ ತೋರಿಸದೆ ಗಡಿಬಿಡಿಯಲ್ಲಿ ಕರೆದುಕೊಂಡು ಬಂದದ್ದಕ್ಕೆ ಎಲ್ಲರೂ ಬೈಯುವವರೇ. ಅಂದು ಸಮಯವಾಗುತ್ತಿದೆಯೆಂದು ಡಾಕ್ಟರಜ್ಜ ದದೇಗಲ್ಲಿಗೆ ಹೊರಟರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎರಡನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ