Advertisement

Tag: ಓಬೀರಾಯನ ಕಾಲದ ಕತೆಗಳು

ಓಬೀರಾಯನ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಅವರ ಕತೆ “ಹಾಲು ಕುಡಿದ ಹಾವು”

“ಪಾಪ! ಇಂತಹ ಯೋಚನೆ ಬಂದಾಗಲೇ ಅದನ್ನು ಹೇಗಾದರೂ ಒಳ್ಳೆದರಲ್ಲೋ ಕೆಟ್ಟದರಲ್ಲೋ ಮುಗಿಸಿಬಿಡುತಿದ್ದರೆ ಎಷ್ಟು ಚೆನ್ನಾಗುತಿತ್ತು! ನಿಜವಾಗಿಯಾದರೆ ಕಲಿತವರು ಇಂತಹ ಸಂದರ್ಭದಲ್ಲೇ ಜಾರಿಬೀಳುವುದು. ನಾವು ಹಳ್ಳಿಯವರು ಹೀಗೆಲ್ಲ ಸುಲಭವಾಗಿ ಸಿಕ್ಕಿಬೀಳುವುದಿಲ್ಲ. ನಮಗೆ ಮೈಮೇಲೆ ಅಂಗಿ ಅರಿವೆಯೇ ಇರುವುದಿಲ್ಲ. ಆದುದರಿಂದ ನಮ್ಮ ನಮ್ಮ ದೋಷ ನಮಗೆ ಚೆನ್ನಾಗಿ ಕಂಡುಬಂದು ಅದಕ್ಕೆ ಕೂಡಲೇ ಮದ್ದುಮಾಡುತ್ತೇವೆ.’

Read More

ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ ಎಂ. ಎನ್. ಕಾಮತ್ ಬರೆದ ಕತೆ “ಕದ್ದವರು ಯಾರು?”

“ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು.”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕತಂದೆಯವರ ಉಯಿಲ್”

“ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ?”

Read More

ಓಬೀರಾಯನ ಕಾಲದ ಕತೆಗಳು: ಎಂ.ವಿ ಹೆಗಡೆಯವರ ಕಥೆ “ದೊರ್ಸಾನಿ”

“ನೀನೊಂದು ಸಣ್ಣ ಮಗು! ನಿನಗೇನೂ ಗೊತ್ತಿಲ್ಲ. ನಾನು ಕಲಿಸುತ್ತೇನೆ! ನಾನು ಕಲಿಸಿದ್ದನ್ನು ಕಲಿಯದೆ ಚಂಡಿ ಹಿಡಿಯಬೇಡ!” ಎನ್ನುತ್ತಾ ಕೆಲೆನ್ ಕಿಲಕಿಲನೇ ನಕ್ಕಳು. ಅವಳ ಬಿಳಿಯ ಬಾಹುಗಳು ಬಾಬುರಾಯನ ಕಂಠವನ್ನು ಬಿಗಿದವು.”

Read More

ಓಬೀರಾಯನ ಕಾಲದ ಕತೆಗಳು:ಮೊಗಸಾಲೆ ಬರೆದ ‘ಉಲ್ಲಂಘನೆ’ ಕಾದಂಬರಿಯ ಪುಟಗಳು

”ಭೋಜ ಶೆಟ್ಟಿಗೆ ಸಾಂತೇರುಗುತ್ತಿನ ಗೌರವಕ್ಕೆ ಚ್ಯುತಿ ಬರುವ ಪ್ರಸಂಗ ಏನಾದರೂ ನಡೆಯಬಾರದೇ ಎಂಬ ದುರಾಲೋಚನೆ ಸದಾ ಕಾಡುತ್ತಿತ್ತು. ಅದಕ್ಕಾಗಿ ಅವನು ಕಾಯುತ್ತಿದ್ದನೆನ್ನುವಂತೆ ಇದ್ದಾಗ, ಮಂಗಳೂರಿಗೆ ಹೊಸತಾಗಿ ರೈಲು ಸರ್ವಿಸ್ ಪ್ರಾರಂಭವಾಗುವ ಸುದ್ದಿ ಬಂತು. “

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ