Advertisement

Tag: ಕನ್ನಡದ ಕತೆ

ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಸ್ಲಾ..ಟ್!”

ಹನ್ನೆರಡರ ಸುಮಾರಿಗೆ ಎಲ್ಲರೂ ಒಟ್ಟಾದರು. ಸೀನಪ್ಪ ಎಲ್ಲ ರೆಡಿ ಮಾಡಿಟ್ಟಿದ್ದ; ಇನ್ನೊಂದು ಅರ್ಧ ಗಂಟೆ ಒಳಗೆ ಎಲ್ಲಾ ಮುಗಿಸಿ ಬಿಡುವ ಸೂಚನೆ ಇತ್ತು. ಆಗ ಶುರುವಾಯಿತು ಏನೋ ಗಲಿಬಿಲಿ. ಸೀನಪ್ಪ ಬಂದ “ಸಾರ್ ನಾನು ಹೊರಗಿರುತ್ತೇನೆ ನಾನಾಗಲೇ ತೋರಿಸಿದ್ದೆನಲ್ಲ ಕೌಂಟರ್ ಎರಡರಲ್ಲಿ ದೇವರಾಜ ಅನ್ನುವವರನ್ನ, ಅವರೆಲ್ಲ ಮಾಡಿಕೊಡುತ್ತಾರೆ” ಎಂದ. ಬಾಯಿಗೆ ಕೈ ಅಡ್ಡ ಇಟ್ಟು “ಲೋಕಾಯುಕ್ತರು ಬಂದಿದ್ದಾರೆ ಹಾಗಾಗಿ ಸ್ವಲ್ಪ ತಡ ಆಗಬಹುದು, ಒಂದು ಮೂತ್ತರಿಂದ ಎರಡೂ ಮೂವತ್ತು ಊಟದ ಸಮಯ. ಅದು ಕೂಡ ಸ್ವಲ್ಪ ಹಿಂದೆ ಮುಂದೆ ಆಗಬಹುದು.”
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಸ್ಲಾ..ಟ್!” ನಿಮ್ಮ ಈ ಭಾನುವಾರದ ಓದಿಗೆ

Read More

ಆರ್.‌ ಪವನ್‌ ಕುಮಾರ್‌ ಬರೆದ ಈ ಭಾನುವಾರದ ಕತೆ “ಗುರುತು”

ಸರೋಜಮ್ಮ ಇದನ್ನು ಸರಿ ತಪ್ಪು ಎಂದು ತರ್ಕ ಮಾಡಲು ಹೋಗಲಿಲ್ಲ. ಅವಳೊಳಗೆ ಹೆಣ್ಣಿನ ಅಂತರಂಗದ ತುಮುಲಗಳ ಬಗ್ಗೆ ಗೌರವವಿದ್ದು, ಅದಕ್ಕೆ ಗಂಡು ಸೂಕ್ತವಾಗಿ ಪ್ರತಿಕ್ರಿಯಿಸದೆ ಹೋದರೆ ಇಂಥವೆಲ್ಲಾ ಘಟಿಸಿ ಹೋಗುತ್ತವೆ ಎಂದುಕೊಂಡಿದ್ದಳು. ತನ್ನ ಮಗ ಇದರಲ್ಲಿ ಸಂಪೂರ್ಣ ಸೋತವನೆಂದು ಅರಿವಾಗಿತ್ತು. ಇನ್ನೂ ಮಗನೂ ಅಷ್ಟೇ ತನ್ನ ಚಟಗಳಿಗೆ ಇದನ್ನೆ ಮತ್ತೊಂದು ನೆಪ ಮಾಡಿಕೊಂಡವನು ಮನೆ ಮರೆತು ತನಗೆ ಅನುಕೂಲವಾದ ಕಡೆ ತಿರುಗುತ್ತ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ.
ಆರ್.‌ ಪವನ್‌ ಕುಮಾರ್‌ ಬರೆದ ಕತೆ “ಗುರುತು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು.
ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು” ನಿಮ್ಮ ಓದಿಗೆ

Read More

ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ”

ಟೀನಾ ಒಂದು ದಿನ ರೋಬಿಣಿಯನ್ನು ಕರೆದು ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಕೇಳಿದಳು. ರೋಬಿಣಿ ಕಡ್ಡಿತುಂಡರಿಸಿದಂತೆ ನಿರಾಕರಿಸಿದಳು. ರೋಬಿಣಿಯನ್ನು ಮುಂದಿನ ಬಾರಿ ಬದಲಾಯಿಸುವಾಗ ಮನೆ ಕೆಲಸಗಳನ್ನು ಮಾಡುವಂತಹ ಪ್ರೋಗ್ರಾಮ್ ಅಳವಡಿಸಲು ಬಿಎಂಐ ಕಂಪನಿಗೆ ಹೇಳಬೇಕು ಎಂದುಕೊಂಡಳು ಟೀನಾ. ಅದು ಸಾಧ್ಯವಿಲ್ಲವೆಂದು ಜಗ ಟೀನಾಗೆ ತಿಳಿಸಿ ಹೇಳಿದ. ಕಂಪನಿಯ‌ ಪ್ಯಾಕೇಜ್ ನಿಬಂಧದಂತೆ ಹಾಗೂ ರೋಬಾಟ್ಸ್ ರೈಟ್ಸ್ ಪ್ರಕಾರ, ಮಗುವಂತೆ ಸಾಕಲು ಪಡೆದ ರೋಬಾಟ್‌ಗಳಿಂದ ಮನೆಕೆಲಸಗಳನ್ನು ಮಾಡಿಸಲು ಸಾಧ್ಯವಿರಲಿಲ್ಲ.
ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ” ನಿಮ್ಮ ಓದಿಗೆ

Read More

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಕ್ರಮ ತಪ್ಪಿದ ನಗರ”

“ನೀವು ಎಂದಾದರೂ ಆಕಾಶದ ನಕ್ಷತ್ರಗಳನ್ನು ಗಮನಿಸಿದ್ದೀರಾ?” ಅವನು ಕೇಳಿದ. ಅವನ ಧ್ವನಿ ಹಳೆಯ ರೇಡಿಯೋ ಸ್ಟೇಷನ್‌ನಿಂದ ಬರುವ ಸಿಗ್ನಲ್‌ನಂತೆ ಇತ್ತು. ಅದಕುತ್ತರವಾಗಿ “ಹೌದು, ನೋಡಿದ್ದೇನೆ.” ಎಂದೆ. “ಆಕಾಶದಲ್ಲಿ ನಕ್ಷತ್ರಗಳು ಸುಮ್ಮನೆ ಬಿದ್ದಿಲ್ಲ” ಅವನು ಹೇಳುತ್ತಾ ಒಂದು ನೋಟಿನ ಮೇಲೆ ಒಂದು ನಾಣ್ಯವನ್ನು ಇಟ್ಟ. “ಅವುಗಳಿಗೊಂದು ಕ್ರಮವಿದೆ. ಆ ಕ್ರಮ ತಪ್ಪಿದರೆ ಈ ಜಗತ್ತು ಕುಸಿದು ಬೀಳುತ್ತದೆ. ಈ ಸ್ಕೈವಾಕ್ ಕೆಳಗೆ ಹರಿಯುವ ಸಾವಿರಾರು ಕಾರುಗಳು, ಈ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ನಿಮ್ಮ ಕೈಯಲ್ಲಿರುವ ಈ ಕಾಫಿ ಕಪ್… ಎಲ್ಲವೂ ಒಂದು ನಿಖರವಾದ ಜಾಗದಲ್ಲಿ ಇರಬೇಕು.”
ಕಾರ್ತಿಕ್ ಕೃಷ್ಣ ಬರೆದ ಕತೆ “ಕ್ರಮ ತಪ್ಪಿದ ನಗರ” ನಿಮ್ಮಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ