Advertisement

Tag: ಕೆಂಡಸಂಪಿಗೆ

ಹೊಸಕಾವ್ಯದ ಗುರು ಗೋಪಾಲಕೃಷ್ಣ ಅಡಿಗ

1955 ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದಲ್ಲಿ ಗುರುಸಮಾನರಾಗಿ ಸ್ವೀಕರಿಸಲ್ಪಟ್ಟರು. ಹೊಸ ಪೀಳಿಗೆಯ ಸಾಹಿತಿಗಳು ಅವರ ಪ್ರಭಾವಕ್ಕೆ ಒಳಗಾದರು. ಅಡಿಗರ ಕಾವ್ಯವನ್ನು ಗಮನಿಸುವಾಗ ಅವರು ನವೋದಯ, ಪ್ರಗತಿಶೀಲ ಮತ್ತು ನವ್ಯ – ಈ ಮೂರೂ ಮಾರ್ಗಗಳಿಗೆ ಸೇರುವ ಕವಿತೆಗಳನ್ನು ಬರೆದು ಬೆಳೆದವರು ಎನ್ನುವುದು ತಿಳಿಯುತ್ತದೆ. ತಮ್ಮ ಹಿಂದಿನ ಕಾವ್ಯಮಾರ್ಗಗಳನ್ನು ಅರೆದು ಕುಡಿದವರಾದ ಕಾರಣ ಅಡಿಗರು ಅವುಗಳ ಮಿತಿಯನ್ನು ಹೇಳಿದಾಗ ಅದಕ್ಕೊಂದು ಅಧಿಕೃತತೆ ಪ್ರಾಪ್ತವಾಯಿತು ಮತ್ತು ಕವಿಗಳು ಅವರನ್ನು ಅನುಸರಿಸಿದರು. ಕರಾವಳಿಯ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ. ಜನಾರ್ದನ ಭಟ್ ಹೊಸಕಾವ್ಯದ ಗುರು ಮೊಗೇರಿ ಗೋಪಾಲಕೃಷ್ಣ ಅಡಿಗರ ಕುರಿತು ಬರೆದಿದ್ದಾರೆ.

Read More

ಮಕ್ಕಳನ್ನು ಓದಿಸಿದ ಮಾವಿನಮರಗಳು

ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್‌ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್‌ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್‌ ಕೊಡಿಸುತ್ತಿತ್ತು.

Read More

ತಿಪಟೂರು ಕೆಡಿಸಿ ಬಂದವರು…!

ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಹಾಸ್ಟೆಲ್ ವಿಚಿತ್ರ ಅನುಭವ ಕೊಡತೊಡಗಿತು. ಇಲ್ಲಿ ಬೆಳಗ್ಗೆ ಆರಕ್ಕೆ ಕಡ್ಡಾಯವಾಗಿ ಏಳಬೇಕಿತ್ತು. ಎದ್ದು ಓದಿಕೊಳ್ಳುವುದು ಒತ್ತಟ್ಟಿಗಿರಲಿ ಪ್ರತಿಯೊಬ್ಬರೂ ಭಟ್ಟರು ನೇಮಿಸಿದ ಕೆಲಸಗಳನ್ನ ಮಾಡಬೇಕಿತ್ತು. ಕುಳ್ಳಗೆ ದಪ್ಪಗೆ ಮೀಸೆಬಿಟ್ಟಿದ್ದ ಹನುಮಂತನೆಂಬ ಭಟ್ಟನಿದ್ದ. ಹೇಳಿದ ಕೆಲಸ ಮಾಡದವರನ್ನ ಆತ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದ. ಬೆಳಗಿನ ಊಟಕ್ಕೆ ಮುಂಚೆ ಯಾರ್ಯಾರು ಏನೇನು ತಪ್ಪು ಮಾಡಿದರೆಂದು ವಿಚಾರಣೆ ನಡೆಸಿ, ಮೂಲೆಯಲ್ಲಿ ಸದಾ ನಿಂತಿರುತ್ತಿದ್ದ ಉದ್ದನೆಯ ಸಿದ್ದರಾಮಣ್ಣನನ್ನು(ಕೋಲನ್ನ) ತೆಗೆದುಕೊಂಡು ದನಕ್ಕೆ ಬಡಿಯುವಂತೆ ಬಡಿಯುತ್ತಿದ್ದ.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಒಂಭತ್ತನೆಯ ಕಂತು.

Read More

ಕಾಡಿನ ಮನೆಯ ಅಕ್ಕರೆಯ ಕಾವು

ಕಾಜುಗಾರ ಅವರು ಕಾಜುವಾಡಾದ ಮನೆಯನ್ನು ಶಿಕ್ಷಕರಿಗೆ ಬಿಟ್ಟುಕೊಟ್ಟಿದ್ದಾರೆ.  ಸದ್ಯಕ್ಕೆ ಅವರ ಮನೆ ಶಿಕ್ಷಕರಿಂದ ತುಂಬಿದೆ. ನಾಲ್ಕೈದು ಜನ ಶಿಕ್ಷಕ ,ಶಿಕ್ಷಕಿಯರು, ಒಂದೇ ಗ್ಯಾಸ್ ಒಲೆಯಲ್ಲಿ ತಯಾರಾಗುವ ಸಾಮೂಹಿಕ ಭೋಜನ. ಅದು ಬೇಕು ಇದು ಇರಲಿ ಎಂಬ ಯಾವುದೇ ತಗಾದೆ ಇಲ್ಲ.  ಇದ್ದ ಸಾಮಾನು ಗಮನಿಸಿ ಆಯಾ ದಿನದ ಮೆನು ರೆಡಿಯಾಗುತ್ತಿತ್ತು. ಏಕೆಂದರೆ ಒಮ್ಮೊಮ್ಮೆ ಅಡುಗೆಗೆ ಬೇಕಾದ ಪದಾರ್ಥಗಳು ಅಣಶಿಯಲ್ಲಿ ಸಿಗುತ್ತಿರಲಿಲ್ಲ. ಅದನ್ನು ದೂರದ ಕುಂಬಾರವಾಡಾ, ಜೋಯಿಡಾದಿಂದ ತರಿಸಬೇಕಿತ್ತು. ಇದ್ದ ಸಾಮಾನಿನಲ್ಲಿಯೆ ‘ಅಗ್ದಿ’ ಬೆಸ್ಟ ಎನಿಸಿದ ‘ಉಂಚಾ ಕ್ವಾಲಿಟಿ’ಯ ಸಾಮಾನು ತೆಗೆದು ಆರಿಸಿ ಅಂಗಡಿಯ ದಿನಕರ ಮಾಮಾ ಅವರು  ಮಾಸ್ತರರಿಗೆ..”

Read More

ನಾನು ರಂಜಾನ್ ದರ್ಗಾ, ಎಪ್ಪತ್ತು ವರ್ಷಗಳ ಮುಗಿಸಿ ಎಪ್ಪತ್ತೊಂದನೇ ವರ್ಷಕ್ಕೆ ಕಾಲಿಟ್ಟಿರುವೆ…

”ಆ ಆಕಳುಗಳ ಹಿಂಡಿನಲ್ಲಿ ಗಂಗಾ ಎಂಬ ಆಕಳು ಇತ್ತು. ಅದು ನನ್ನನ್ನು ತಾಯಿಯಂತೆ ಪ್ರೀತಿಸುತ್ತಿತ್ತು. ನಾನು ಗೆಳೆಯರ ಜೊತೆ ಓಡಾಡುತ್ತ ಹಸಿವಾದಾಗ ಗಂಗಾ ಬಳಿ ಹೋಗುತ್ತಿದ್ದೆ. ನನ್ನನ್ನು ನೋಡಿದ ತಕ್ಷಣ ಅದು ಕಕ್ಕುಲತೆಯಿಂದ ಧ್ವನಿ ತೆಗೆಯುತ್ತಿತ್ತು. ನಾನು ಹೋಗಿ ಅದರ ಬಾಯಿ ಮುಂದೆ ಕೂಡುತ್ತಿದ್ದೆ. ಅದು ಬಹಳ ಪ್ರೀತಿಯಿಂದ ನನ್ನ ತಲೆ ನೆಕ್ಕುತ್ತಿತ್ತು.”
ಹಿರಿಯ ಪತ್ರಕರ್ತ, ಲೇಖಕ ರಂಜಾನ್ ದರ್ಗಾ ಅವರ ಜೀವನದ ಪುಟಗಳು ಇನ್ನು ಮುಂದೆ ವಾರಕ್ಕೊಮ್ಮೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ