Advertisement

Tag: ಕೆಂಡಸಂಪಿಗೆ

ಮಳೆ, ನೆನಪು ಮತ್ತು ಸಂಬಂಧ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಯಾವುದೂ ಕಳೆದು ಹೋಗದ ಹೊರತಾಗಿ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ ಅನ್ನುವುದೇ ಈ ಬದುಕಿನ ಅತಿದೊಡ್ಡ ವಿಪರ್ಯಾಸ. ಪ್ರತೀ ಕ್ಷಣವನ್ನೂ ಉತ್ಕಟವಾಗಿ ಜೀವಿಸಬೇಕು ಅಂದುಕೊಳ್ಳುವ ಒಂದು ಫಿಲಾಸಫಿ ಶುರು ಆಗುವುದೇ ಈ ಕಳೆದುಹೋದ ಫೀಲ್ ಬಂದ ನಂತರವೇ. ಅಷ್ಟರಲ್ಲಾಗಲೇ ನಮ್ಮ ಅರ್ಧ ಆಯುಷ್ಯ ಮುಗಿದುಹೋಗಿರುತ್ತದೆ. ಇನ್ನು ದಿನಗಳು ಕಮ್ಮಿ ಅನ್ನುವ ಅರಿವಾಗುವಾಗ ಈ ಪ್ರತೀಕ್ಷಣವನ್ನೂ ಉತ್ಕಟವಾಗಿ ಬದುಕುವ ಆಸೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಹಾಗೆ ಬದುಕುತ್ತೇವಾ? ಹೇರಿಕೊಂಡ ಜವಾಬ್ದಾರಿಯ ಮೂಟೆಗಳನ್ನು ಇಳಿಸಿ ಹಗುರ ಆಗುವುದು ಸಾಧ್ಯನಾ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಮೂರನೆಯ ಬರಹ

Read More

ನಮಗೊಂದು ಸೊಸೆ ಬೇಕು: ಕೆ. ಸತ್ಯನಾರಾಯಣ ಹೊಸ ಕಾದಂಬರಿಯ ಆಯ್ದ ಭಾಗ

ಸತೀಶ ದುರ್ದಾನ ತೆಗೆದುಕೊಂಡವನಂತೆ ರೂಮಿಗೆ ಹೋಗಿ ಬಾಗಿಲನ್ನು ಪಟಾರನೆ ಹಾಕಿಕೊಂಡ. ಹಾಲ್‌ನಲ್ಲೇ ಉಳಿದಿದ್ದ ಮೂರ್ತಿ-ಅನಿತಾ ಕೂಡ ಕಾಲೆಳೆದುಕೊಂಡು ರೂಮಿಗೆ ಹೋದರು. ಇಬ್ಬರೂ ಮಂಚದ ಮೇಲೆ ನೀಟಾಗಿ ಹಾಸಿದ್ದ ಹಾಸಿಗೆಯ ಮೇಲೆ ಕುಳಿತುಕೊಂಡು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಮಾತೇ ಹೊರಡಲಿಲ್ಲ. ಅನಿತಾ ಹತ್ತು ಸಲ ಬಚ್ಚಲು ಮನೆಗೆ ಹೋಗಿ ಬಂದರು. ಮೂರ್ತಿ ಒಂದಿಪ್ಪತ್ತು ಸಲ ಕೂದಲನ್ನು ಕಿತ್ತು ಹಾಕಿದರು. ಬಲಗೈ ಮಧ್ಯ ಬೆರಳಿನ ಉಗುರನ್ನು ಕಡಿಯುತ್ತಲೇ ಇದ್ದರು. ದೀಪ ಆರಿಸಿ ಮಲಗಲು ಇಬ್ಬರಿಗೂ ಭಯವಾಯಿತು. ಬಲ್ಬ್‌ ಪ್ರತಿದಿವಸವೂ ಹೊರಡಿಸುವುದಕ್ಕಿಂತ ಹೆಚ್ಚಿನ ಕಾಂತಿಯನ್ನು ಹೊರಡಿಸುತ್ತಿದೆ ಅನಿಸಿತು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ನಮಗೊಂದು ಸೊಸೆ ಬೇಕು” ಕೃತಿಯ ಆಯ್ದ ಭಾಗ

Read More

ರಂಗದ ಮೇಲಿನ  ದೃಶ್ಯಕಾವ್ಯ  ‘ಚಿತ್ರಾಂಗದಾ’: ಚಿತ್ರಾ ವೆಂಕಟರಾಜು ಸರಣಿ

ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಚಿತ್ರಾಂಗದಾ’ ನಾಟಕದ ಕುರಿತ ಬರಹ

Read More

ದೇವರನ್ನು‌ ಕುರಿತು ಒಂದಿಷ್ಟು….: ಬಸವನಗೌಡ ಹೆಬ್ಬಳಗೆರೆ ಸರಣಿ

ಇತ್ತೀಚೆಗಂತೂ ದೇವರ ಆರಾಧನೆಯ ಜೊತೆ ಜೊತೆಗೆ ಪುರುಷ ಪ್ರಯತ್ನಕ್ಕೂ ಹೆಚ್ಚು ಒತ್ತು ಕೊಡಬೇಕು ಎಂದು ಕಲಿತಿದ್ದೇನೆ. ದೇವರು ಒಂಥರಾ ರಾಸಾಯನಿಕ ಕ್ರಿಯೆಯ ‘ಕ್ರಿಯಾವರ್ಧಕ’ (ಕ್ಯಾಟಲಿಸ್ಟ್) ಇದ್ದ ಹಾಗೆ ಎಂದು ನಂಬಿದ್ದೇನೆ. ವ್ಯಕ್ತಿ ತಾನು ಮಾಡುವ ಕಾರ್ಯಗಳಿಂದ ದೇವರ ಸ್ಥಾನಕ್ಕೆ ಏರಬಹುದು ಎಂದು ಹಲವು ಮಹಾನುಭಾವರ ಜೀವನದಿಂದ ತಿಳಿದುಕೊಂಡಿದ್ದೇನೆ. ಆದರೂ ಹಲವರು ದೇವರ ಹೆಸರಲ್ಲಿ ಜಗಳವಾಡುವುದನ್ನು ನೋಡಿ ವಿಚಿತ್ರ ಎನಿಸುತ್ತದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತನೆಯ ಕಂತು ನಿಮ್ಮ ಓದಿಗೆ

Read More

ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಕ್ರೂಗರ್ ಅವರು ಜೀವನಪ್ರೀತಿಯ ಖಾಸಗಿ ದುಃಖ ಮತ್ತು ಅಸಾಧ್ಯತೆಗಳ ಹಾಡುಗಳನ್ನು ರಚಿಸುವ ಕವಿ. ಈ ಕವಿಯು ವಿವಿಧ ಸಂಸ್ಕೃತಿಗಳ ಒಬ್ಬ ಸ್ವಯಂ ನಿರ್ಮಿತ ದೈವವಾಣಿಯಂತೆ. ಅವರ ಕಾವ್ಯ ಒಂದು ಗಂಭೀರ ಆಲೂಗಡ್ಡೆ ಕೃಷಿಯ ಹಾಗೆ. ರಾತ್ರಿಯಲ್ಲಿ ಹೇಗೆ ನಡೆಯಬೇಕು, ಕತ್ತಲೆಯಲ್ಲಿ ನಾವು ತಲುಪುವ ಯಾವುದೇ ಗಮ್ಯಸ್ಥಾನವನ್ನು ಹೇಗೆ ಹೊಂದಬೇಕು, ನಾವು ನಂಬಬಹುದಾದ ಅಥವಾ ನಂಬದಿರುವ ಬೆಳಕಿಗೆ ಅಂತಿಮವಾಗಿ ನಮ್ಮನ್ನು ಒಪ್ಪಿಸಿಕೊಳ್ಳುವುದು ಹೇಗೆ ಎಂದು ಕ್ರೂಗರ್ ನಮಗೆ ಕಲಿಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್-ರವರ (Michael Krüger) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ