ಕೆಟಿಎಸ್ ಜೊತೆ ನನ್ನ ಒಡನಾಟ
ಅವರು ಅಷ್ಟು ದೊಡ್ಡ ಸಾಹಿತಿ ಆಗಿದ್ದರೂ ಒಂದಷ್ಟು ಹಮ್ಮು ಬಿಮ್ಮಿಲ್ಲದೆ, ಫೋಟೋಕ್ಕೆ ನಿಂತುಕೊಂಡರು. ಹಾಗೆ ಪೇಯಿಂಟಿಂಗ್ ಬಗ್ಗೆ ಅವರು ಕೇಳಿದ ಪ್ರಶ್ನೆಗಳು ಅವರು ಆ ವಯಸ್ಸಿನಲ್ಲೂ ತಿಳಿದುಕೊಳ್ಳುವ ಹಂಬಲ ಮತ್ತು ಗೊತ್ತಿಲ್ಲದನ್ನು ಕೇಳಿ ತಿಳಿದುಕೊಳ್ಳುವ ಅವರ ಪ್ರಾಮಾಣಿಕತೆ ಬಗ್ಗೆ ನನಗೆ ದಿಗ್ಭ್ರಮೆ ಹುಟ್ಟಿಸಿತ್ತು. ಹೀಗೆ ತೇಜಸ್ವಿಗೆ ಯಾರೋ ಹೇಳಿದ್ದರಂತೆ ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದೆ ಎಂದು. ತೇಜಸ್ವಿಗೆ ಅದೇನೋ ಕುತೂಹಲ. ಒಂದು ದಿನ ನನ್ನ ಕರೆದು ‘ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದಂತಲ್ಲಾ..? ಕುಡಿಯೋಣ್ವಾ’ ಎಂದರು. ನನಗೋ ನಗು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ

