Advertisement

Tag: ಪ್ರಸಾದ್ ಶೆಣೈ

ಲಾಕ್ ಡೌನ್ ನಿಂದ ತುಂಬಿಕೊಂಡ ಗಂಧ: ಪ್ರಸಾದ್ ಶೆಣೈ ಅಂಕಣ

“ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು…”

Read More

ಪದ್ದಜ್ಜಿಯ ಕಣ್ಣಲಿ ಕಂಡ ನೆನಪುಗಳ ಜಲಪಾತ: ಪ್ರಸಾದ್ ಶೆಣೈ ಅಂಕಣ

“ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ…”

Read More

ಮಾಳದ ಎರಡು ಕನಸುಗಳು,ಮಾಳದ ಎರಡು ಸಂಜೆಗಳು:ಪ್ರಸಾದ್ ಶೆಣೈ ಕಥಾನಕ

“ಮನೆಗೊಂದು ಹೆಣ್ಣಿದ್ದರೆ ಮನೆಗೆ ಮನೆಯೇ ಆ ಹೆಣ್ತನದ ವಿಶೇಷ ಮುಗ್ದತೆ ಆವರಿಸಿಕೊಳ್ಳುತ್ತದೆ. ಬೇಕಿದ್ದರೆ ನೋಡಿ ಒಂದೆರಡು ದಿನ ಮನೆಯಲ್ಲಿ ಅಮ್ಮನಿಲ್ಲದಿದ್ದರೆ ಮುಗೀತು. ಆ ಮನೆಯಲ್ಲಿ ಆವರಿಸಿಕೊಳ್ಳುವ ಮೌನ, ಸಪ್ಪೆ ಸಪ್ಪೆ ಎನ್ನಿಸುವಂತಹ ನೋಟ, ಅಂತದ್ದೇನೂ ಅಂದವಿಲ್ಲದೇ ಒಟ್ಟಾರೆ ಸಾಗುವ ದಿನಚರಿ, ಪ್ರೀತಿಯ ರುಚಿ ಇರದೇ ಹೊಟ್ಟೆಗೆ ಸುಮ್ಮನೇ ಹೋಗಿ ಕೂರುವ ನಾವೇ ಮಾಡಿದ ಅಡುಗೆ, ಇವೆಲ್ಲ ಅರ್ಥವಿಲ್ಲದ ಹಾಡಿನಂತೆ ತನ್ನ ಪಾಡಿಗೆ ಸಾಗುತ್ತದೆ.ಅದೇ ಅಮ್ಮನಿದ್ದರೆ ಅಲ್ಲಿ ಮೌನವಿರುವುದಿಲ್ಲ”

Read More

ಬಾಡುವಿನ ಹಿಂದೆ ಕಾಡು ಹಾದಿಯಲ್ಲಿ: ಪ್ರಸಾದ್ ಶೆಣೈ ಕಥಾನಕ

“ಮಳೆ ಬೀಳುತ್ತಿರುವಾಗ ಮಳೆಗೆ ನೆನೆದು ಕಾಡು ಸುತ್ತೋದು ಎಷ್ಟು ಚೆಂದವೋ, ಮಳೆ ನಿಂತ ಮೇಲೆ ಅಳು ನಿಲ್ಲಿಸಿದ ಮಗುವಿನ ಹಾಗಿರುವ ಮುಗ್ದ ಕಾಡನ್ನು ನೋಡುವ, ಅನುಭವಿಸುವ, ಮೈಯೆಲ್ಲಾ ವಿಚಿತ್ರ ಥಂಡಿಯಲ್ಲಿ ಕಳೆದುಹೋಗುವ ಕ್ಷಣವಿದೆಯೆಲ್ಲಾ ಅದರಷ್ಟು ಸುಖ ಜೋರಾಗಿ ಮಳೆ ಬಂದರೂ ಆಗಲಿಕ್ಕಿಲ್ಲ ಅನ್ನಿಸುತ್ತದೆ ಕೆಲವೊಮ್ಮೆ. ಹಾವಿನಷ್ಟೇ ಸಪೂರಾದ ದಾರಿ, ಸುತ್ತಲೂ ದಟ್ಟ ಮರಗಳ ಹಸುರು ಜೋರಾದ ಗಾಳಿಗೆ ಉದುರಿ ಬಿದ್ದ ಹೂವ ರಾಶಿ..”

Read More

ವಾಲಿಕುಂಜದ ಕಾಡಲ್ಲಿ ಮಳೆ ಮಾತಾಡಿತು: ಪ್ರಸಾದ್ ಶೆಣೈ ಮಾಳ ಕಥಾನಕ

“ಮಧ್ಯಾಹ್ನದ ಉರಿಬಿಸಿಲ ನಡುವೆ ತೂರಿಬರುತ್ತಿದ್ದ ಕಪ್ಪುಮೋಡಗಳ ಮಬ್ಬು ಬೆಳಕಿನಲ್ಲಿ ಬೆಟ್ಟ ಏರಿದೆವು. ಹತ್ತುತ್ತಾ, ಹತ್ತುತ್ತಾ ಕೆಳಗೆ ಆಳವಾದ ದಾರಿ, ಮೇಲೆ ಹತ್ತಿರಾದ ಬೆಟ್ಟದ ಸಾಲುಗಳು, ಅಲ್ಲೇ ಮೇಲೆ ಹತ್ತಿದಾಗ “ನನ್ನಷ್ಟು ಎತ್ತರ ನೀವಲ್ಲ, ನಾನೇರಿದೆತ್ತರಕೆ ನೀನೇರಬಲ್ಲೆಯಾ?”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ