Advertisement

Tag: ಸಣ್ಣಕತೆ

ಇಂಧನಾಂತರಂಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಆಗ ಕಾವ್ಯ, “ವಿದ್ಯುತ್ ವಾಹನಗಳದ್ದೂ ಅದೇ ಕಥೆ ತಾನೇ? ಹೊಗೆ ಹೊರಗೆ ಹಾಕಲ್ಲ, ಪರಿಸರ ಸ್ನೇಹಿ ವಿದ್ಯುತ್ ವಾಹನ ಅಂತೀವಿ! ಅದೇ ವಿದ್ಯುತ್ ವಾಹನ ಉತ್ಪಾದಿಸೋಕೆ ಅದೇ ಪಳೆಯುಳಿಕೆ ಇಂಧನವನ್ನ ಎಗ್ಗುಸಿಗ್ಗಿಲ್ಲದೆ ಬಳಕೆ ಮಾಡ್ತೀವಿ. ವಿದ್ಯುತ್ ವಾಹನದ ‘ಬ್ಯಾಟರಿ’ ತಯಾರಿಸೋಕೆ ನಿಸರ್ಗದ ತೊಟ್ಟಿಲಿಗೇ ಕೈಹಾಕಿ, ಭೂಮಿಯನ್ನ ಬಗೆದು ಬರಡು ಮಾಡಿ, ಲೋಹಗಳನ್ನ ಹೊರತೆಗೀತೀವಿ. ಇನ್ನು ಆ ವಿಷಕಾರಿ ಬ್ಯಾಟರಿಗಳ ವಿಲೇವಾರಿ ಮತ್ತೊಂದು ದೊಡ್ಡ ಸಮಸ್ಯೆ. ಆದ್ರೂ ‘ವಿದ್ಯುತ್ ವಾಹನದಿಂದ ಪರಿಸರದ ಎಲ್ಲಾ ಸಮಸ್ಯೆಗಳೂ ಸರಿಹೋಗತ್ತೆ’ ಅನ್ನೋ ಹಾಗೆ ಪೋಸ್ ಕೊಡ್ತೀವಿ. ಮನುಷ್ಯನಂತಹ ದುಷ್ಟಪ್ರಾಣಿ ಮತ್ತೊಬ್ಬನಿಲ್ಲ!” ಎಂದಳು ಬೇಜಾರಿಂದ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾಲ್ಕನೆಯ ಕತೆ

Read More

ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ “ಸಾಂಗತ್ಯ”

ಯಶೋದಳಿಗೆ ಮುಂದೆ ಮಾತನಾಡಲು ಆಗಲಿಲ್ಲ. ಅವಳು ಬಿಕ್ಕಿದಳು. ಅವಳ ಕಣ್ಣಿನಿಂದ ಒಂದೇಸಮನೆ ನೀರು ಇಳಿಯುತ್ತಿತ್ತು. ಅಷ್ಟರಲ್ಲಿ ಮಗುವನ್ನು ಕರೆದುಕೊಂಡು ಮಾದೇವಿ ಬಂದಳು. ಮಗುವನ್ನು ಎತ್ತಿಕೊಂಡ ಯಶೋದ ಮಗುವನ್ನು ಹೆಗಲಿಗೆ ಹಾಕಿಕೊಂಡು ಎದ್ದು ನಿಂತಳು. ಅವಳನ್ನು ಒಳಗೆ ಕರೆದುಕೊಂಡು ಹೋಗುವಂತೆ ಪ್ರಕಾಶ ಮಾದೇವಿಗೆ ಸೂಚಿಸಿದ. ಕೀಕೊಟ್ಟ ಬೊಂಬೆಯಂತೆ ಯಶೋದ ಮಾದೇವಿಯನ್ನು ಅನುಸರಿಸಿದಳು. ಅವಳಿಗೆ ಯಾವುದೋ ಆಘಾತವಾಗಿರಬೇಕು ಎಂದು ಪ್ರಕಾಶ ತರ್ಕಿಸಿದ. ನಿಧಾನವಾಗಿ ಅದನ್ನು ಹೊರತೆಗೆಯಬೇಕು. ಒಂದೆರಡು ದಿನದವರೆಗ ಕಾಯಬೇಕು.
ಚಂದ್ರಮತಿ ಸೋಂದಾ ಬರೆದ ಕತೆ “ಸಾಂಗತ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ

ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್‌ಕಾಮ್‌ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್‌ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ “ಹಾವಾಡಿಗ”

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಹಾಗೇ ಒಂದು ಜೊಂಪು ಹತ್ತಿತ್ತು. ಕನಸಿನಲ್ಲಿ ತನ್ನಲ್ಲಿ ಉಳಿದಿದ್ದ ಟಿಕೆಟ್ ಒಂದಕ್ಕೆ ಲಕ್ಷ ರೂಪಾಯಿಯ ಬಂಪರ್ ಬಂದ ಹಾಗೆ, ಅದರಿಂದ ಬಂದ ಹಣದಲ್ಲಿ ತಂಗಿಯ ಮದುವೆ, ತನಗೊಂದು ಮೂರು ಚಕ್ರದ ಸ್ಕೂಟರ್, ಸಣ್ಣದೊಂದು ಲಾಟರಿ ಟಿಕೆಟ್ ಮಾರುವ, ಸ್ಟೇಷನರಿ ಅಂಗಡಿ. ಅದರಿಂದ ಬರುವ ಆದಾಯ. ಅಲ್ಲಿ ಹುಡುಗನೊಬ್ಬನನ್ನು ಕೆಲಸಕ್ಕೆ ಇರಿಸಿ ತಾನು ಬಿ.ಕಾಂ. ಮುಂದುವರಿಸಿದ ಹಾಗೆ……
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಬಂಪರ್‌ ಬಹುಮಾನ” ನಿಮ್ಮ ಓದಿಗೆ

Read More

ಸುಬ್ರಹ್ಮಣ್ಯ ಹೆಗಡೆ ಬರೆದ ಈ ಭಾನುವಾರದ ಕತೆ

ಅಪರಾಧವು ಸಾಮೂಹಿಕವಾದಾಗ ಅದು ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತನ್ಮೂಲಕ ನಮ್ಮ ಊರಿನ ಗಂಡಸರೆಲ್ಲ ತಿಂಗಳಿಗೆ ಒಂದೆರಡು ಬಾರಿ ಟೆಂಟಿನಲ್ಲಿ ಬಿಸಿಯಾಗತೊಡಗಿದರು. ಆಸೆಗಳಿಗೆ ಬೇಧಭಾವವಿಲ್ಲ. ಎಲ್ಲರಿಗು ಆಸೆಗಳಿದ್ದರಿಂದ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೆಲವು ವರ್ಷಗಳ ನಂತರ ತಾಲೂಕು ಸೆಂಟರಿನಲ್ಲಿ ಮಿನಿ ಥೇಟರು, ವಿಡಿಯೋ ಪಾರ್ಲರುಗಳು ಶುರುವಾದ ಕಾರಣ ಜನರಿಗೆ ಒಳ್ಳೆಯ ಕ್ಲಾರಿಟಿಯ ಅನುಭವ ಸಿಕ್ಕು, ಟೆಂಟು ಸತ್ತು ಹೋಯಿತು.
ಸುಬ್ರಹ್ಮಣ್ಯ ಹೆಗಡೆ ಬರೆದ ಕತೆ “ಪರಾಜಿತ ವಿಠ್ಠಲ ವಿಜಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ