Advertisement

Tag: Dr. Lakshman V A

ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರ: ಡಾ. ಲಕ್ಷ್ಮಣ ವಿ.ಎ ಅಂಕಣ

“ಇವರ ವೈಯಕ್ತಿಕ ಪರಿಚಯ ಈಗಷ್ಟೇ, ಇತ್ತೀಚೆಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ.”

Read More

ಯುವ ವಿಜ್ಞಾನಿಗಳ ಕತೆಗಳು: ಡಾ.ಲಕ್ಷ್ಮಣ ವಿ.ಎ ಅಂಕಣ

“ಆ ವರ್ಷ ತಡವಾಗಿ ಬಂದ ಮಳೆ, ತದನಂತರದ ಬಂದ ನೆರೆ ಈ ಮಲವಾಯಿ ಎಂಬ ನತದೃಷ್ಟ ಊರನ್ನು ಅಕ್ಷರಶಃ ಬೆಂಕಿಯಲ್ಲಿ ಬೇಯಿಸುತ್ತದೆ. ಒಂದು ಹಿಡಿ ಕಾಳಿಗಾಗಿ ಕೊಲೆಗಳಾಗುತ್ತಿವೆ. ಕಣ್ಣೀರ ಬಾವಿಗಳೂ ಬತ್ತಿ ಹೋಗಿವೆ. ಬಾವಿಯ ಅಳಿದುಳಿದ ನೀರು ಎಳೆಯಲು ದೇಹದಲ್ಲಿ ಕಸುವಿಲ್ಲ. ಆದರೆ ವಿಲಿಯಮ್ ಸುಮ್ಮನಿರಬೇಕಲ್ಲ. ತಾನು ಶಾಲೆಯಲ್ಲಿ ಕಲಿತ ಅಲ್ಪ ಸ್ವಲ್ಪ ಜ್ಞಾನದಲ್ಲೇ ಒಂದು ವಿಂಡ್ ಮಿಲ್ ತಯಾರಿಸಿ ಅದರಿಂದ ಉತ್ಪನ್ನವಾದ ವಿದ್ಯುತ್ ಬಳಸಿ…”

Read More

ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ

“ಭಾರತೀಯ ಮನಸು ಯಾವಾಗಲೂ ಪವಾಡಗಳನ್ನು ಅಪಾರವಾಗಿ ನಂಬುತ್ತದೆ. ಅಷ್ಟೇ ಪ್ರತಿಭೆಯನ್ನೂ ಕೂಡ ಪೋಷಿಸುತ್ತದೆ. ಹೀಗಾಗಿ ಇಲ್ಲಿಯ ಅತಿರಂಜಿತ ಸಿನೇಮಾಗಳು ಹಿಟ್ ಆಗುತ್ತವೆ. ಈ ಸಿನೇಮಾ ಸೃಷ್ಟಿಸುವ ಮಿಥ್ ಗಳು ಬದುಕಿನಲ್ಲಿಯೂ ಒಂದಿಲ್ಲೊಂದು ದಿನ ನಿಜವಾಗುತ್ತದೆ ಎಂದು ಬದುಕುವವರು ಇಲ್ಲಿ ಅಂತಲ್ಲ ಎಲ್ಲೆಲ್ಲಿಯೂ ಇದ್ದಾರೆ. ಹೀಗಾಗಿ ಸಿನೇಮಾದಿಂದ ಪ್ರಭಾವಿತವಾಗಿಯೇ ಎಷ್ಟೊಂದು ಪ್ರೇಮಿಗಳು ಹುಟ್ಟಿಕೊಂಡಿರುತ್ತಾರೆ.”

Read More

ಕಡಲಿಗೆ ಬಂತು ಶ್ರಾವಣಾ ಕುಣಿದ್ಹಾಂಗ ರಾವಣಾ!: ಡಾ.ಲಕ್ಷ್ಮಣ ವಿ.ಎ. ಅಂಕಣ

“ಇದೆಲ್ಲ ಇವತ್ತು ಯಾಕೆ ನೆನಪಾಯಿತೆಂದರೆ ಹೀಗೆ ಕಲಿತು ಬೆರೆತು ಆಟವಾಡಿದ ನಮ್ಮ ಬಯಲು ಸೀಮೆಯ ಶಾಲೆಗಳೆಲ್ಲ ಇಂದು ಸ್ವಾತಂತ್ರ್ಯ ದಿನ ಬರುವ ಹೊತ್ತಿಗೆ ಸರಿಯಾಗಿ ನೆರೆ ನೀರು ತುಂಬಿ, ಮುಳುಗಿ, ಶಾಲೆಯ ಮುಂದಿನ ಧ್ವಜದ ಕಂಬವೂ ಮುಳುಗಿ, ಕಡಲಿಗೆ ಬಂದ ಶ್ರಾವಣ ಶಾಲೆಯ ಅಂಗಳಕ್ಕೂ ಬಂದು ರಾವಣನಂತೆ ಕುಣಿದಿದ್ದಾನೆ. ಪುಟ್ಟ ತನ್ನ ಪಾಟಿ, ಪೆನ್ಸಿಲು, ತನ್ನ ಪ್ರೀತಿಯ ಹಸು ಕರು ಅಂಗಳಕ್ಕೇ ಬಿಟ್ಟು..”

Read More

ಮಾಜಿ ಸಿಪಾಯಿಯೊಬ್ಬನ ಬದುಕು-ಬವಣೆಯ ಕತೆ :ಲಕ್ಷ್ಮಣ ವಿ.ಎ. ಅಂಕಣ

“ಆ ಇಕ್ಕಟ್ಟಿನಲ್ಲೇ ಹಿಮಗಟ್ಟಿದ ನೀರು ಕಾಯಿಸಿ, ಅಡುಗೆ ಬೇಯಿಸಿ ತಿನ್ನಬೇಕು. ಅಪ್ಪಿ ತಪ್ಪಿಯೂ ಆ ಒಲೆಯಿಂದ ಬರುವ ಹೊಗೆ ಬೆಂಕಿ ಕಾಣಿಸಕೂಡದು. ಒಂದು ವೇಳೆ ಕಂಡರೆ ಕೆಲವೇ ನಿಮಿಷಗಳಲ್ಲಿ ಈ ಡ್ರ್ಯಾಗನ್ ಸೈನಿಕರ ಶೆಲ್ ದಾಳಿಗೆ ತುತ್ತಾಗಿ ಬಂಕರುಗಳ ಇವರ ಶವ ಎಣಿಸಲು ಬರುವವರಿಗಾಗಿ ಒಂದು ವಾರ ತಿಂಗಳಾದರೂ ಕಾಯಬೇಕು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ