Advertisement

Tag: Farming

ಹಳ್ಳಿಯ ಸಹವಾಸವೇ ಬೇಡ…!

ಕಾರ್ಪೊರೇಟ್ ಜಗತ್ತಿನಲ್ಲಿ ನಡೆಯುವ ರಾಜಕೀಯಗಳಿಂದ ರೋಸಿ ಹೋಗಿ ಕೆಲಸ ಬಿಟ್ಟು ಬಂದು ಹಳ್ಳಿಯಲ್ಲಿ ನೆಮ್ಮದಿ ಕಾಣಬೇಕು ಅಂದರೆ ಇಲ್ಲಿ ಇನ್ನೂ ಹದಗೆಟ್ಟ ಪರಿಸ್ಥಿತಿ ಇದೆ ಅನಿಸಿತು. ಸುಳ್ಳುಗಳು, ಜಾತಿ, ಕಳುವು ಇನ್ನೂ ಏನೇನು ನೋಡೋದು ಇದೆಯೋ ಇಲ್ಲಿ ಅನಿಸಿತು. ಅತ್ತೆ ಮಾವ ನಮ್ಮ ಸಂಬಂಧಿಯೇ ಆಗಿದ್ದರೂ ಅವರು ನಮ್ಮ ಪರವಾಗಿ ನಿಲ್ಲಲಾರರು ಎಂಬ ಕಟು ಸತ್ಯದ ಅರಿವು ಆಗಿತ್ತು. ಎಷ್ಟೇ ಅಂದರೂ ಅಲ್ಲಿನ ಜನರ ಜೊತೆಗೆ ಬದುಕುವ ಅವರು, ಎಲ್ಲಿಂದಲೋ ಬಂದ ಯಾವಾಗಲೋ ಒಮ್ಮೆ ಬಂದು ಹೋಗುವ ನನ್ನ ಪರವಾಗಿ ಹೇಗೆ ತಾನೇ ನಿಂತಾರು?
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 18ನೇ ಕಂತು

Read More

ಕಳೆ ಕತ್ತರಿಸುವ ಯಂತ್ರ ಎಂಬ ಅದ್ಭುತ ಸಾಧನ

ನನ್ನ ಕಾರ್‌ನಲ್ಲಿ ಹಿಂದಿನ ಸೀಟು ಖಾಲಿ ಇತ್ತು. ಹಾಗೆಯೇ ಹೋಗುತ್ತಾ ನಾಲ್ಕು ಹುಡುಗರಿಗೆ ಶಾಲೆಯವರೆಗೆ ಲಿಫ್ಟ್ ಕೊಡೋಣ ಅನಿಸಿತು. ಒಂದು ಹುಡುಗರ ಗುಂಪಿನ ಪಕ್ಕ ಗಕ್ಕಂತ ನಿಲ್ಲಿಸಿದೆ. ನಾನು ಏನೋ ಹೇಳುವಷ್ಟರಲ್ಲಿ ಒಬ್ಬ ಹುಡುಗ ಹಿಂದೆ ಓಡಲು ಶುರು ಮಾಡಿದ. ಅವನ ಜೊತೆಗೆ ಉಳಿದ ಹುಡುಗರೂ ಓಡತೊಡಗಿದರು! ಅಯ್ಯೊ ದೇವ್ರೆ ನನ್ನನ್ನ ಕಿಡ್ನ್ಯಾಪರ್‌ ಅಂದುಕೊಂಡರೋ ಏನೋ!? ಉಪಕಾರ ಮಾಡೋದು ಬೇಡವೇ ಬೇಡ ಅಂತ ನಾನು ಮುಂದೆ ಹೊರಟೆ. ನನ್ನ ಮುಖವನ್ನು ಕಾರಿನ ಕನ್ನಡಿಯಲ್ಲಿ ನೋಡಿಕೊಂಡೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ನಿಮ್ಮ ಜಾತಿ ಯಾವುದು!

ಹೊಲದ ಹತ್ತಿರ ಅನ್ನುವ ಕಾರಣಕ್ಕೆ ನನಗೆ ಮನೆ ಇಷ್ಟವಾಯ್ತು. ಮನೆಯನ್ನು ಕೂಲಂಕುಷವಾಗಿ ನೋಡಿದ ಮೇಲೆ ಗೌಡರ ಜೊತೆಗೆ ಮಾತಾಡಲು ಅಲ್ಲೇ ಹತ್ತಿರವೇ ಇದ್ದ ಅವರ ಮನೆಗೆ ಹೋದೆ. ಹೆಸರು ಕೇಳಿದವರೆ ಯಾವ ಜಾತಿ ನಿಮ್ಮದು ಅಂದರು. ನನಗೆ ತುಂಬಾ ಇರುಸು ಮುರುಸು ಆಯ್ತು. ನಾನು ಯಾರಿಗೂ ಜಾತಿ ಕೇಳೋದಿಲ್ಲ, ನನಗೆ ಯಾರಾದರೂ ಕೇಳಿದರೂ ನನಗೆ ಆಗೋಲ್ಲ. ಆದರೆ ಹಳ್ಳಿಯಲ್ಲಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗಿಯೇ ಇದೆ. ನನ್ನ ಜಾತಿ ಯಾಕೆ ಬೇಕು ಅಂತ ಕೇಳಿದಾಗ “ಒಳ್ಳೆಯವರಿಗೆ ಕೊಡಬೇಕಲ್ರಿ ಮನಿ ಅದಕ್ಕ ಕೇಳತೀವಿ” ಅಂದರು.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ಸರಿರಾತ್ರಿಯಲಿ.. ಹುಳ ಹುಪ್ಪಟೆಗಳ ಸಂಗದಲಿ…

ಮನೆಗೆ ಒಂದು ಗಂಡು ಬೇಕು ಅನ್ನುವ ಮೋಹ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎಂಬ ಭ್ರಮೆ ಹಳ್ಳಿಯಲ್ಲಿ ಇನ್ನೂ ಇದೆ. ಎಷ್ಟೋ ವಯಸ್ಸಾದವರನ್ನು ಒಂದೋ ಹೊರ ಹಾಕಿದ್ದಾರೆ ಇಲ್ಲವೇ ಮಕ್ಕಳೇ ಹಳ್ಳಿ ಬಿಟ್ಟು ದೂರ ಇದ್ದಾರೆ. ಇದು ಗಂಡು ಹಡೆದವರ ಭಾಗ್ಯ! ಹಾಗಂತ ಎಲ್ಲ ಗಂಡು ಮಕ್ಕಳು ಹಾಗಿಲ್ಲ ಬಿಡಿ. ಹೆಣ್ಣು ಕರುಳಿನ ಗಂಡು ಹುಡುಗರು ಇನ್ನೂ ಇರುವುದಕ್ಕೆ ಮಳೆ ಬೆಳೆ ಆಗುತ್ತಿರುವುದು!
ಗುರುಪ್ರಸಾದ್‌ ಕುರ್ತಕೋಟಿ ಅಂಕಣ

Read More

ಹೃದಯ ವೈಶಾಲ್ಯತೆಗೆ ಬೇಲಿ ಹಾಕಿಕೊಳ್ಳುವ ಅನಿವಾರ್ಯ!

ನಾವು ಮಾನವೀಯತೆಯಿಂದ ಯೋಚಿಸುವುದನ್ನು ಹಳ್ಳಿಯಲ್ಲಿ ಬೇರೆಯ ತರಹವೆ ನೋಡುತ್ತಾರೆ! ನಾವು ಕೇಳದೆ ಅವರಿಗೆ ಹೀಗೆ ಬೋನಸ್‌ಗಳನ್ನು ಕೊಟ್ಟರೆ ನಾವು ಅವರಿಗೆ ತುಂಬಾ ಹಣವಂತರ ಹಾಗೆ ಕಾಣುತ್ತೇವೆ. ಅದು ನಮಗೆ ಆಮೇಲಾಮೇಲೆ ನಿಧಾನವಾಗಿ ಅರ್ಥವಾಗತೊಡಗಿತು! ಅಲ್ಲಿ ಹೇಗಿರಬೇಕು ಅಂದರೆ, ತುಂಬಾ ಚೌಕಾಶಿ ಮಾಡಬೇಕು, ಒಂದು ರೂಪಾಯಿನೂ ಕಾಡಿಸಿ ಕಾಡಿಸಿ ಕೊಡಬೇಕು, ಸಾಲವನ್ನಂತೂ ಮರಳಿ ಕೂಡಲೇ ಕೂಡದು ಇತ್ಯಾದಿಗಳು… ನನಗೆ ಇದನ್ನೆಲ್ಲ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ.
ಗುರುಪ್ರಸಾದ್‌ ಕುರ್ತಕೋಟಿ ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ