Advertisement

Tag: kendasampige

ದೇವಸ್ಥಾನಗಳ ವಾಸಸ್ಥಾನ….: ಎಚ್. ಗೋಪಾಲಕೃಷ್ಣ ಸರಣಿ

ಆಗ ಮೈಸೂರು ರಾಜ್ಯದಲ್ಲಿ ಊದುಬತ್ತಿ ತಯಾರಿಕೆ ಮತ್ತು ಮಾರಾಟ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮುದ್ದಣ್ಣ ಬ್ರಾಂಡ್‌ನ ತುಂಬಾನೇ ದೊಡ್ಡ ಬೋರ್ಡ್ (ರಸ್ತೆ ಅಗಲದ್ದು) ಒಂದು ಚಿಕ್ಕ ಪೇಟೆಯಲ್ಲಿ ನೋಡಿದ್ದ ನೆನಪು ನನಗಿದೆ. ಪ್ರಕಾಶ ನಗರ, ಶ್ರಿರಾಮಪುರದ ಪ್ರತಿ ಮನೆಯ ಮುಂದೂ ಎಲ್ಲಾ ವಯಸ್ಸಿನ ಹೆಂಗಸರು ಊದು ಬತ್ತಿ ಹೊಸೆಯುತ್ತಾ ಕುಳಿತಿರುತ್ತಿದ್ದ ಗುಂಪನ್ನು ಕಾಣಬಹುದಿತ್ತು. ಅದೆಷ್ಟೋ ಸಾವಿರ ಕಡ್ಡಿ ಹೊಸೆದರೆ ಕೆಲವು ಆಣೆ ಕೂಲಿ. ಸಂಸಾರ ತೂಗಿಸುವಲ್ಲಿ ಮಹಿಳೆಯರೂ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ

Read More

ಚಂದವಳ್ಳಿ ತೋಟದ ನೆನಪುಗಳು: ಡಾ. ಸದಾಶಿವ ದೊಡಮನಿ ಬರಹ

ಭೀಮವ್ವ ಆಯಿ ಮಲ್ಲಪ್ಪ ಮುತ್ಯಾನ ಮಾತು, ಮೀರುವಂಗ ಇರಲಿಲ್ಲ. ನನ್ನ ಕೈಯೊಳಗಿನ ಗಂಗಾಳ ತೊಗೊಂಡು, ಬಾ ಅಂತ ಒಳಗ ಕರ್ದು, ವಣಗಿ ಹಾಕಿ ನನ್ನ ಕೈಯಾಗ ಗಂಗಾಳ ಕೊಡುವುದರೊಳಗ ಮಲ್ಲಪ್ಪ ಮುತ್ಯಾ ತಾನ ಎದ್ದು ಬಂದು, ನನ್ನ ಕೈಯೊಳಗಿನ ಗಂಗಾಳ ಇಸಗೊಂಡು, ಒಳಗೆ ಹೋಗಿ, ಇಡೀ ಗಡಗೀನ ಗಂಗಾಳಕ್ಕ ಸುರುವಿ, ‘ತೊಗೊಂಡು ಹೋಗ’ ಅಂತ ಕೊಟ್ಟು ಕಳಿಸಿ ಬಿಡುತ್ತಿದ್ದ.
ತಮ್ಮ ಬಾಲ್ಯಕಾಲದ ನೆನಪನ್ನು ಹಂಚಿಕೊಂಡಿದ್ದಾರೆ ಡಾ. ಸದಾಶಿವ ದೊಡಮನಿ

Read More

ಕೊನೆಗೂ ಕೈಗೆ ಬಂದ ಭತ್ತ!: ಗುರುಪ್ರಸಾದ ಕುರ್ತಕೋಟಿ ಅಂಕಣ

ಎರಡು ಟ್ರಾಕ್ಟರ್ ಮೇಲೆ ಸ್ವಲ್ಪ ಹೆಚ್ಚು ಭತ್ತ ಸಿಕ್ಕಿತ್ತು. ಅದು ಹೆಚ್ಚು ಕಡಿಮೆ 25 ಚೀಲ ಆಗುತ್ತೆ ಎಂಬ ಅಂದಾಜು ಸಿಕ್ಕಿತು. ಒಂದು ಚೀಲ ಅರವತ್ತು ಕೆಜಿ ತೂಕ. ಹೀಗಾಗಿ ನಮಗೆ ಸಿಕ್ಕಿದ್ದು 1500 ಕೆಜಿ ಭತ್ತ. ಅದನ್ನು ಅಕ್ಕಿ ಮಾಡಿಸಿದರೆ ಹೆಚ್ಚು ಕಡಿಮೆ 1೦೦೦ ಕೆಜಿ ಅಕ್ಕಿ ಸಿಕ್ಕೀತು. ಅದು ಪ್ರಥಮ ಬಾರಿ ಬೆಳೆದ ನಮ್ಮ ಮಟ್ಟಿಗೆ ತುಂಬಾ ಹೆಮ್ಮೆಯ ಸಂಗತಿಯೇ ಆಗಿತ್ತು. ಆದರೆ ಅಲ್ಲಿಯವರೆಗೆ ಬರಲಿಕ್ಕೆ ಇನ್ನೂ ತುಂಬಾ ಸಮಯ ಇತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಹಮೀರ್‌ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ

ಹೊರಗಾಳಿಯ ತಾಜಾತನವನ್ನು, ಮಧ್ಯಾಹ್ನ ಮೂರುಗಂಟೆಯ ಬಿಸಿಲನ್ನು ಸೇವಿಸಿದೆ. ರೋಡು ದೊಡ್ಡ ಮಾಡಿದಾಗ ಕಡಿದ, ಈಗ ರೊಡಿನ ಸೈಡಲ್ಲಿ ಮಹಾ ಬಂಡೆಗಳ ತರ ಅಥವಾ ರಾಮಲಕ್ಷ್ಮಣರೋ, ಪಾಂಡವರೊ ಸಾಯಿಸಿ ಕೊಚ್ಚಿಹಾಕಿದ ಉಗ್ರ ರಾಕ್ಷಸ ಜನಾಂಗದ ಹೆಣಗಳ ಹಾಗೆ ಬಿದ್ದಿರೊ ಮೂರ್ನಾಲ್ಕು ಶತಮಾನಗಳಷ್ಟು ಪುರಾತನವಾಗಿರಬಹುದಾದ ಮರಗಳ ಬುಡಗಳು ಕಣ್ಣಿಗೆ ಬಿದ್ದವು. ಆ ತಾಜಾತನದ ಸಹಾಯದಿಂದಲೋ ಏನೋ ಇಲ್ಲಿಯತನಕ ಸಿಗದ ಪರಿಹಾರವು ಸಿಕ್ಕಿತು, ಅಥವಾ ಉತ್ಪತ್ತಿಯಾಯಿತು, ಆಥವಾ ನನ್ನ ಸುಪ್ತಪ್ರಜ್ಞಾ ಮನಸ್ಸು ಸಂಶ್ಲೇ಼ಷಣೆ ಮಾಡಿತು.
ಹಮೀರ್‌ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ “ಹಿಂದಿನದು” ನಿಮ್ಮ ಓದಿಗೆ

Read More

ಮೊದ್ಲು ಕಾರ್‌ ಓಡ್ಸಿದ್ದು ಯಾರ್‌ ಗೊತ್ತಾ?!: ಗುರುದತ್ ಅಮೃತಾಪುರ ಸರಣಿ

ಕಾರ್ಲ್ ಬೆಂಜ್ ತನ್ನ ಪರಿಶ್ರಮದಿಂದ ನಿರ್ಮಿಸಿದ ಚಲಿಸುವ ವಾಹನದ ಬಗ್ಗೆ ಅವನಿಗೆ ಅನುಮಾನವಿತ್ತು. ಜೊತೆಗೆ ಸ್ಪಾರ್ಕ್ ಪ್ಲಗ್, ಬ್ಯಾಟರಿ ತಂತ್ರಜ್ಞಾನ ಇನ್ನೂ ಇರದ ಕಾರಣ, ನಿಂತಲ್ಲೇ ಕಾರನ್ನು ಪ್ರಾರಂಭಿಸಲು ಸಾಧ್ಯವಿರಲಿಲ್ಲ. ಈ ಕಾರಿಗೆ ಸ್ಟಿಯರಿಂಗ್ ಕೂಡ ಇಲ್ಲ. ದಿಕ್ಕು ಬದಲಾಯಿಸಲು ಸೈಕಲ್ ಗಾಲಿಗೆ ಕೊಡುವ ರೀತಿಯ ಒಂದು ಹತೋಟಿ ಮಾತ್ರ ಇದೆ.
“ದೂರದ ಹಸಿರು” ಸರಣಿಯಲ್ಲಿ ಜೆರ್ಮನಿಯ ಕಾರು ಸಂಗ್ರಹಾಲಯದ ಕುರಿತು ಗುರುದತ್ ಅಮೃತಾಪುರ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ