Advertisement

Tag: kendasampige

ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ

ಈ ನಡುವೆ ಪಾತ್ಲಿಂಗಪ್ಪ ಹಾಗೂ ಚಿತ್ಲಿಂಗ ಮತ್ಮತ್ತೆ ಭೇಟಿಯಾಗುತ್ತಿದ್ದದ್ದು ತಿಳಿದು ಮಗಳು ಕುದ್ದು ಹೋಗಿ ವರ್ಷದ ಹಿಂದೆ ಅಪ್ಪನಿಗೆ ಲಾಯರ್‌ ನೋಟೀಸ್‌ ಕಳಿಸಿದ್ದಳು. ಇದು ಪಾತ್ಲಿಂಗಪ್ಪನನ್ನು ಕುಗ್ಗಿಸಿತ್ತು. ತನ್ನದೆಲ್ಲವನ್ನೂ ಕಿತ್ತುಕೊಂಡು ಬೀದಿಗೆ ತಳ್ಳುವ ಹುನ್ನಾರದಂತೆ ಕಂಡಿತ್ತು. ಹಂಗಾಗಿ ಅದು ಆ ವಿಚಾರದಲ್ಲಿ ಅವನನ್ನು ಮತ್ತಷ್ಟು ಬಿಗಿಯಾಗುವಂತೆ ಮಾಡಿತ್ತು. ಅದರೊಟ್ಟಿಗೆ ಅವನೊಳಗೆ ತಾನು ತಮ್ಮನ ಮಗನಿಗೆ ಮಾಡಿದ್ದ ಅನ್ಯಾಯದ ಪಾಪಪ್ರಜ್ಞೆ ಬೆಳೆಯತೊಡಗಿತ್ತು.
ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ “ಸೋಲು” ನಿಮ್ಮ ಓದಿಗೆ

Read More

ತಾವಾಗೇ ಬಿದ್ದವರು ನನ್ನ ಬೈದಿದ್ದರು!: ಎಚ್. ಗೋಪಾಲಕೃಷ್ಣ ಸರಣಿ

ಬರ್ತಾ ಬರ್ತಾ ಅಜ್ಜಿ ಒಂದು ಗುಂಡಿಯಲ್ಲಿ ನೋಡದೆ ಕಾಲು ಇಟ್ಟಿತು. ಮೊಗಚಿಕೊಂಡು ಹಳ್ಳದಲ್ಲಿ ಮುಖಾಡೆ ಬಿದ್ದು ಬಿಡ್ತು. ಎಪ್ಪತ್ತು ವರ್ಷದ ಕೆಂಪು ಸೀರೆ ಉಟ್ಟ ಮಡಿ ಹೆಂಗಸು ಅಜ್ಜಿ ಆಗ. ತೆಳು ದೇಹ, ಮುಟ್ಟಿದ ಕಡೆ ಎಲ್ಲಾ ಮೂಳೆಗಳೇ, ಬೊಚ್ಚು ಬಾಯಿ ವಟ ವಟ ವಟ ನಾನ್ ಸ್ಟಾಪ್ ಮಾತು. ಅದು ಹೇಗೋ ಅವರನ್ನು ಮೇಲೆ ಎಬ್ಬಿಸಿದೆ. ದಾರಿ ಉದ್ದಕ್ಕೂ ಅದರ ಕೈಲಿ ಸಹಸ್ರ ನಾಮ ಮಾಡಿಸಿಕೊಂಡೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಬೆಳೆದ ಅಕ್ಕಿಯ ಉಣ್ಣುವ ತವಕ…: ಗುರುಪ್ರಸಾದ ಕುರ್ತಕೋಟಿ ಅಂಕಣ

ಇದೊಂಥರ ವೈರುಧ್ಯ. ಚೆನ್ನಾಗಿದೆ ಆದರೂ ತಿನ್ನೋಲ್ಲ! ಯಾಕಿರಬಹುದು? ಬಹುಶಃ ಬೆಳ್ಳಗೆ ಪಾಲಿಶ್ ಮಾಡಿದ ರೇಷನ್ ಅಕ್ಕಿಯನ್ನು ತಿಂದು ತಿಂದು ಅವರಿಗೆ ರೂಡಿ ಆಗಿಬಿಟ್ಟಿದೆಯೋ ಏನೋ. ತವಡನ್ನು ತೆಗೆದು ಅದರಲ್ಲಿ ಏನೂ ಇರದಂತೆ ಮಾಡಿ ಪಾಲಿಶ್ ಮಾಡಿ ಕೊಡುವ ಅಕ್ಕಿಯೇ ಎಲ್ಲರಿಗೂ ಪ್ರಿಯ. ಶ್ರೀಮಂತರು ಅಷ್ಟೇ ಯಾಕೆ ತಿನ್ನಬೇಕು ಎಲ್ಲರೂ ತಿನ್ನೋಣ ಅಂತ ಇವರೂ ಪಾಲಿಶ್ ಅಕ್ಕಿಯ ಮೊರೆ ಹೋದರೆ? ಇದೆ ಕಾರಣಕ್ಕೆ ಶ್ರೀಮಂತರಿಗೆ ಬರುವ ಸಕ್ಕರೆ ಕಾಯಿಲೆ, ಹೃದಯ ರೋಗ ಈಗ ಎಲ್ಲರಿಗೂ ಬರುತ್ತಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಸೌರಭಾ ಕಾರಿಂಜೆ ಬರೆದ ಈ ಭಾನುವಾರದ ಕಥೆ

ಬೆಳಿಗ್ಗೆ ತುಂಬಿಸಿಕೊಂಡ ದೋಸೆ ಡಬ್ಬಿ ಹಾಗೇ ಇದೆ ಎಂಬುದು ನೆನಪಾಯಿತು ಅವಳಿಗೆ. ಕೊಟ್ಟು ಬಿಡಲೇ ಅನಿಸಿತು ಒಮ್ಮೆ. ಮನೆಗೆ ಹೋಗಿ ತಿನ್ನಬಹುದು ತಾನು. ಆದರೆ ಇವನಿಗೆ ಬೇಕಾದದ್ದು ದುಡ್ಡು, ಊಟ ಅಲ್ಲ, ಆ ದುಡ್ಡನ್ನು ಕಬಳಿಸಲು ನಮೂನೆ ನಮೂನೆಯ ಪ್ರಯತ್ನ ಅನ್ನಿಸಿ ಮನಸ್ಸೆಲ್ಲಾ ಕಹಿಯಾಯಿತು. ಜೊತೆಗೆ ಬಾಯಿಯೂ ಕಹಿಯಾಯಿತು. ಬಾಯಿಯಲ್ಲಿ ತುಂಬಿಕೊಂಡಿದ್ದ ಎಂಜಲನ್ನು ನುಂಗಲು ಅಸಹ್ಯವಾಗಿ ಉಗುಳುವ ಒತ್ತಡ ಉಂಟಾಯಿತು. ಯಾವತ್ತೂ ರಸ್ತೆಯಲ್ಲಿ ಉಗುಳಿದವಳಲ್ಲ. ಮುಜುಗರ ಒತ್ತಿ ಬಂತು.
ಸೌರಭಾ ಕಾರಿಂಜೆ ಬರೆದ ಕಥೆ “ಹಣಾಹಣಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

“ಆ ಸಾವು ಮತ್ತು ಹಸಿವು”: ಮಾರುತಿ ಗೋಪಿಕುಂಟೆ ಸರಣಿ

ಅಂದು ಮಧ್ಯಾಹ್ನದ ಉಪ್ಪಿಟ್ಟು ತರುವವನು ಮಧ್ಯಾಹ್ನ ಒಂದುಗಂಟೆಯಾದರೂ ಬಂದಿರಲಿಲ್ಲ. ಈಗಿನಂತೆ ಅವಾಗ ಯಾವ ಫೋನು ಸಹ ಇರಲಿಲ್ಲ. ಹಾಗಾಗಿ ಅವನು ಯಾಕೆ ಬರಲಿಲ್ಲ ಎಂದು ತಿಳಿದುಕೊಳ್ಳುವುದು ಹೇಗೆ ಎಂದು, ಹಿರಿಯ ವಿದ್ಯಾರ್ಥಿಯೊಬ್ಬನನ್ನು ಸೈಕಲ್ಲಿನಲ್ಲಿ ಆತ ಬರುವ ಹಾದಿಗೆ ಹೋಗಿ ನೋಡಿಕೊಂಡು ಬರುವಂತೆ ಕಳುಹಿಸಲಾಯ್ತು. ಆದರೆ ರಸ್ತೆಯಲ್ಲಿ ಆತನ ಸುಳಿವಿರಲಿಲ್ಲ. ಆದರಲ್ಲಿ ಮಕ್ಕಳು ಮಧ್ಯಾಹ್ನದ ಫಲಹಾರಕ್ಕಾಗಿ ಕಾದಿದ್ದರು. ಕೆಲವರ ಮುಖಗಳು ಬಾಡಿಹೋಗಿದ್ದವು. ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ