Advertisement

Tag: kendasampige

ಹಣದುಬ್ಬರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಥೆಗಳು: ವಿನತೆ ಶರ್ಮ ಅಂಕಣ

ಒಂದು ರೀತಿಯಲ್ಲಿ ನೋಡುವುದಾದರೆ, ಈ ಶಿಕ್ಷಣ ಸಾಲವನ್ನು ನೇರವಾಗಿ ವಿದ್ಯಾರ್ಥಿಯೇ ಮುಂದೆ ಉದ್ಯೋಗಸ್ಥನಾದ ಮೇಲೆ ಕಟ್ಟುವುದರಿಂದ ಪೋಷಕರಿಗೆ ಅವನ ಶಿಕ್ಷಣದ ಶುಲ್ಕದ ಹೊರೆ ತಗುಲುವುದಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ, ಅಯ್ಯೋ ಪಾಪ ಕೇವಲ 18 ವರ್ಷ ವಯಸ್ಸಿನಿಂದಲೇ ಈ ಕಿರಿಯರು ಸಾಲಕ್ಕೆ ಸಿಲುಕುತ್ತಾರಲ್ಲಾ ಎಂದು ಬೇಸರವಾಗುತ್ತದೆ. ಹಾಗೆ ವ್ಯಥೆ ಪಡದೆ ಪೋಷಕರೇ ತಮ್ಮ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಕಟ್ಟಬಹುದು, ಆದರೆ ಸರಾಸರಿ ತಿಂಗಳ ಸಂಬಳಕ್ಕೆ ಹೋಲಿಸಿದರೆ ಶಿಕ್ಷಣದ ಫೀಸ್ ಬಲು ದುಬಾರಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸರ್ಕಸ್ಸು ಮತ್ತು ತಪ್ಪಿದ ಎಂಟು ಲೆಕ್ಕಗಳು: ಕಾಸಿಂ ನದಾಫ್ ಬರಹ

ಆ ನಾಯಿಯ ಬೊಗಳುವಿಕೆಯ ಹಿನ್ನೆಲೆಯಲ್ಲಿಯೇ ನಮ್ಮ ಮನೆಯ ಇದುರಿಗಿದ್ದ, ಅಕ್ಕಪಕ್ಕದ ಎಂಟು ಮನೆಗಳ ದಾಟಿಕೊಂಡು ಮಲಗಿದ್ದ ಇಕ್ಕಟ್ಟಾದ ಬೀದಿಯ ಆ ಕಡೆ ತುದಿಯಲ್ಲಿ ಪ್ರತ್ಯಕ್ಷವಾದ ಎರಡು ಪ್ಯಾಂಟ್ ತೊಟ್ಟ ಆನೆಕಾಲುಗಳಂತವು ಮತ್ತು ಅವುಗಳ ಹಿಂದೆ ಬಾಡಿಗಾರ್ಡುಗಳಂತೆ ನಾಲ್ಕು ಚಡ್ಡಿ ತೊಟ್ಟುಕೊಂಡ ಎರಡೆರಡೆಂಬಂತೆ ಎಂಟು ಕುದುರೆ ಕಾಲುಗಳಂತವುಗಳು ಇತ್ತ ಬರುತ್ತಿದ್ದವು. ಆ ಕಾಲುಗಳ ವೇಗದಲ್ಲಿಯೇ ನೆಲಕ್ಕೆ ಕುಟ್ಟುತ್ತಾ ಬೆತ್ತವು ಒಂದು ಬರುತ್ತಿದ್ದುದನ್ನು ಕೆಳಗಿನಿಂದ ಮೇಲಕ್ಕೆ ಕಣ್ಣಾಡಿಸಿದಾಗ ನಾನು ಅಡಿಯಿಂದ ಮುಡಿಯವರೆಗೂ ನಡುಗುತ್ತಾ ಕ್ಷಣದಲ್ಲಿಯೇ ಬೆವೆತುಬಿಟ್ಟೆ.
ಕಾಸಿಂ ನದಾಫ್ ಭೈರಾಪುರ ಬರೆದ ಶಾಲಾ ದಿನಗಳ ಒಂದು ನೆನಪು ನಿಮ್ಮ ಓದಿಗೆ

Read More

ಕೈ ಕೆಸರಾಗಿ ಬಾಯಿ ಮೊಸರು: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಕೃಷಿಯನ್ನು ಕಲಿಯುವುದರ ಜೊತೆ ಜೊತೆಗೆ, ಉತ್ಪನ್ನಗಳನ್ನು ಹೇಗೆ ಮಾರಬೇಕು ಎಂಬುದನ್ನು ಕೂಡ ರೈತನಾಗುವವನು ಕಲಿಯಬೇಕು. ಹಿಂದೊಮ್ಮೆ ಬೆಂಗಳೂರನ್ನು ಬಿಟ್ಟು ಹಳ್ಳಿಗೆ ಖಾಯಂ ಆಗಿ ಬಂದು ಬಿಡಲೇ ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ನೇಹಿತರೊಬ್ಬರಿಗೆ ಹಳ್ಳಿಯಲ್ಲಿ ನಾನು ಸಂಪಾದನೆ ಮಾಡಲು ಏನು ಮಾಡಬಹುದು ಅಂತ ಕೇಳಿದಾಗ, ಅವರು ಬಿಳೆ (ಭತ್ತದ) ಹುಲ್ಲಿನ business ಮಾಡಿ ಅಂತ ನಕ್ಕಿದ್ದರು. ಆದರೆ ಅವರು ಹೇಳಿದ್ದು ತುಂಬಾ ಸತ್ಯ ಅಂತ ಈಗ ಅರಿವಾಗಿತ್ತು. ಭತ್ತದ ಹುಲ್ಲಿಗೆ ತುಂಬಾ ಬೆಲೆ ಹಾಗೂ ಬೇಡಿಕೆ ಇದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಜಾರುವ ಜಡೆಯ ಹುಡುಗಿಯ ಪಾತ್ರ!: ಮಾರುತಿ ಗೋಪಿಕುಂಟೆ ಸರಣಿ

ಈ ಸಲ ತಲೆಗೆ ಜೋಡಿಸಿಕಟ್ಟಿದ್ದ ಜಡೆಕುಚ್ಚು ಬಿಚ್ಚಿಕೊಳ್ಳುವ ಸಂಭವವೆ ಜಾಸ್ತಿ ಇತ್ತು. ಹೇಗೊ ನೃತ್ಯವಂತೂ ಮುಗಿದಿತ್ತು. ಆದರೆ ನಂತರದ್ದು ಇನ್ನೊಂದು ಸಂಕಟ ದೃಶ್ಯ ಮುಂದುವರಿದಿತ್ತು. ಜಡೆ ಬೀಳಬಾರದು ಬಿದ್ದರೆ ಅಸಹ್ಯವಾಗಿ ಕಾಣುತ್ತದೆ ಎಂಬ ಭಯದಿಂದಲೆ ನಿಂತ ಸ್ಥಳದಲ್ಲಿಯೇ ನಿಂತು ಸಂಭಾಷಣೆ ಹೇಳುವುದಕ್ಕೆ ಪ್ರಾರಂಭಿಸಿದೆ. ನನ್ನ ಎದುರಿನ ಪಾತ್ರಧಾರಿ ಈ ಕಡೆಯಿಂದ ಆ ಕಡೆಯಿಂದ ಓಡಾಡುತ್ತ ಸಂಭಾಷಿಸುತ್ತಿದ್ದಾನೆ. ಆತ ನೀನು ಓಡಾಡುತ್ತ ಸಂಭಾಷಿಸು ಎಂಬ ಕಣ್ಸನ್ನೆ ನೀಡುತ್ತಿದ್ದಾನೆ. ಆದರೆ ನನ್ನ ಕಷ್ಟ ಅವನಿಗೆ ಅರ್ಥವಾಗುತ್ತಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಅಳಿಸಲಾಗದ ನೋವುಗಳು: ಅಶೋಕ ಪವಾರರ ಆತ್ಮಕತೆಯ ಪುಟಗಳು

ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ.
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಅಶೋಕ ಪವಾರರ ಆತ್ಮಕತೆ “ಬಿಡಾರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ