Advertisement

Tag: kendasampige

ದೆವ್ವದ ಭಯ ಮತ್ತು ಬೋಂಡಾದ ರುಚಿ…: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಹಳ್ಳಿಗಳಲ್ಲಿ ಅದ್ಯಾರು ಈ ಸುದ್ದಿ ಹರಿಸಿದರೋ ಗೊತ್ತಿಲ್ಲ. ರಾತ್ರಿ ವೇಳೆ ದೆವ್ವಗಳು ಬರುತ್ತವೆ, ಅದಕ್ಕೆ ಅವುಗಳ ಕಾಟದಿಂದ ಪಾರಾಗಲು ‘ನಾಳೆ ಬಾ’ ಎಂದು ಮನೆಯ ಮುಂಬಾಗಿಲ ಮೇಲೆ ನೀರಿನಲ್ಲಿ ಅದ್ದಿದ ಚಾಕ್ ಪೀಸ್‌ನಲ್ಲಿ ಬರೆದಿದ್ದರು. ನಾನೂ ಸಹ ನಮ್ಮ ಮನೆಯ ಮೇಲೂ ಹೀಗೆ ಬರೆದು ದೆವ್ವದ ಕಾಟದಿಂದ ಪಾರಾದೆ ಎಂದು ಖುಷಿಪಟ್ಟಿದ್ದೆ!!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಸತ್ತವರೆಲ್ಲ ಮತ್ತೆ ಬಂದಾಗ: ಸುಧಾ ಆಡುಕಳ ಅಂಕಣ

ಅದು ಅಜ್ಜಿಗೆ ಮೀಸಲಿಡುವ ದಿನವಾಗಿತ್ತು. ಮಕ್ಕಳೆಲ್ಲರೂ ಒಟ್ಟಿಗೆ ಸೇರುವುದು ವಾಡಿಕೆಯಾಗಿತ್ತು. ಅಜ್ಜಿಗೆ ಪರಮ ಪ್ರಿಯಳಾಗಿದ್ದ ಕೊನೆಯ ಮಗಳು ಮಾತ್ರ ಗಂಡನ ಮನೆಯಿಂದ ಬಂದಿರಲಿಲ್ಲ. ಅಣ್ಣಂದಿರು ಒತ್ತಾಯ ಮಾಡಿ ಕರೆದಿದ್ದರೂ ಅವಳ ಗಂಡ ಅದೇನೋ ಹಳೆಯ ಮುನಿಸಿನಿಂದಾಗಿ ಹೆಂಡತಿಯನ್ನು ತವರಿಗೆ ಕಳಿಸಿರಲಿಲ್ಲ. ಅಕ್ಕಂದಿರೆಲ್ಲ ಅವಳನ್ನು ನೆನೆಸಿಕೊಂಡು ಕಣ್ಣೀರಿಡುತ್ತಲೇ ಅಮ್ಮನಿಗೆ ಮೀಸಲಿಟ್ಟಿದ್ದರು. ಆ ರಾತ್ರಿ ಎಲ್ಲರೂ ಮಲಗಿದಾಗ ನಡುರಾತ್ರಿಯಲಿ ನೀಲಿಯ ದೊಡ್ಡಮ್ಮ ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಬೆಳಕ ರೆಕ್ಕೆ ಮೂಡಲು ಬಿಡು…: ಚೈತ್ರಾ ಶಿವಯೋಗಿಮಠ ಸರಣಿ

ಎಂತಹ ಒಳ್ಳೆಯ ಕಲಾವಿದರಾದರೂ, ಸಮಾಜಕ್ಕೆ ಬದಲಾವಣೆ ಗಾಳಿ ಬೀಸಲು ಅಹರ್ನಿಶಿ ಆಲೋಚಿಸುವ, ಬರೆಯುವ, ಸೃಜನಶೀಲತೆಯ ಕಲೆಯನ್ನು ಕಟ್ಟುವವರು ತಮ್ಮದೇ ಬದುಕಿನಲ್ಲಿ ಕಹಿ ಬೀಜವನ್ನು ಅಗೆಯಬೇಕಾಗುತ್ತದೆ. 20ನೇ ವಯಸ್ಸಿಗೆ ತನ್ನ ಅತ್ಯುತ್ತಮ ಕಾವ್ಯವನ್ನ ನೀಡಿದ ಫಾರೋಗ್ 1955 ರಲ್ಲಿ ತೀವ್ರ ಖಿನ್ನತೆಗೆ ಒಳಗಾಗಿ ಮಾನಸಿಕ ಆರೋಗ್ಯವನ್ನು ಕಳೆದುಕೊಂಡು ಎಲೆಕ್ಟ್ರಿಕ್ ಶಾಕ್‌ನ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಾಳೆ.
ಚೈತ್ರಾ ಶಿವಯೋಗಿಮಠ ಸರಣಿ

Read More

ಒಂಟಿತನ, ಖೋಖೋ, ಕಪ್ಪುಬಿಳುಪಿನ ಗಾಂಧಿ ಚಿತ್ರ: ಮಾರುತಿ ಗೋಪಿಕುಂಟೆ ಸರಣಿ

ಮೊದಮೊದಲು ಮೂವತ್ತು ನಲವತ್ತು ಸೆಕೆಂಡ್‌ಗಳಲ್ಲಿ ಔಟಾಗುತ್ತಿದ್ದ ನಾನು ಕ್ರಮೇಣ ಆಟದ ಪಟ್ಟುಗಳನ್ನು ತಿಳಿದುಕೊಂಡು ಒಂದೊಂದೆ ಕಲಿಯುತ್ತಾ ಹೋದೆ. ದಿನಕಳೆದಂತೆ ಎರಡು ನಿಮಿಷ ಓಡುವಷ್ಟರ ಮಟ್ಟಿಗೆ ತರಬೇತಾದೆ. ಹಂತ ಹಂತವಾಗಿ ಆಡುತ್ತಾ ಮೊದಲನೆ ಬ್ಯಾಚ್‌ಗೆ ಶಿಫ್ಟಾದೆ. ಕೊನೆಗೆ ಗಂಡು ಮಕ್ಕಳ ಖೊಖೋ ಪಂದ್ಯಕ್ಕೆ ಕ್ಯಾಪ್ಟನ್ ಆಗುವಷ್ಟರಮಟ್ಟಿಗೆ ಪ್ರಾವೀಣ್ಯತೆ ಪಡೆದೆ.
ಮಾರುತಿ ಗೋಪಿಕುಂಟೆ ಬರೆಯುವ ಸರಣಿ

Read More

ಅತಿಯಾದರೆ ಮುದ್ದೂ ವಿಷ…: ಅನುಸೂಯ ಯತೀಶ್ ಸರಣಿ

ರಸ್ತೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿದ್ದರೆ ಇವನು ಒಳಗೆ ಕುಳಿತು ಕಿಟಕಿಯಿಂದ ನೋಡಿ ಸಂಭ್ರಮಿಸುತ್ತಿದ್ದ. ಇದನ್ನೆಲ್ಲಾ ಇವನು ಕಣ್ಣಾರೆ ಕಂಡರೆ ನಾನು ಆಟದ ಬಯಲಿಗೆ ಹೋಗಬೇಕು, ಆಟವಾಡಬೇಕು ಎಂದು ಹಠ ಮಾಡುವನೆಂದು ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿದೆವು. ನಾಲ್ಕು ಗೋಡೆಗಳ ನಡುವೆ ಬದುಕಿದ ಇವನಿಗೆ ಮೂರು ನಾಲ್ಕು ವರ್ಷವಾದರೂ ಹೊರ ಜಗತ್ತಿನ ಪರಿಚಯವಾಗಲಿಲ್ಲ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ